Don't Miss!
- News Charmadi Ghat: ಚಾರ್ಮಾಡಿ ಘಾಟ್ 10ನೇ ತಿರುವಿನಲ್ಲಿ ಕೆಟ್ಟುನಿಂತ 16 ಚಕ್ರದ ಲಾರಿ-ಪೊಲೀಸರ ವಿರುದ್ಧ ಸ್ಥಳೀಯರ ಆಕ್ರೋಶ ಏಕೆ?
- Sports RCB Unbox Event 2024: ಆರ್ಸಿಬಿ ಅನ್ಬಾಕ್ಸ್ ಈವೆಂಟ್ನ ಸಮಯ, ಲೈವ್ ಸ್ಟ್ರೀಮಿಂಗ್, ಸೆಲೆಬ್ರಿಟಿ ಪಟ್ಟಿ
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Lifestyle ಪೂರ್ವಜನರಿಗೆ ಗ್ರಹಣಗಳು ಹೇಗೆ ತಿಳಿಯುತ್ತಿತ್ತು..? ಅವರು ಏನೆಲ್ಲಾ ಕಥೆ ನಂಬಿದ್ದರು ಗೊತ್ತೆ.?
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್
ಸಮಾಜದಲ್ಲಿನ ವಿದ್ಯಮಾನಗಳ ಅನುಗುಣವಾಗಿ ಆಗಾಗ ಹಾಡುಗಳನ್ನ ಬರೆಯುವ ನಿರ್ದೇಶಕ ಯೋಗರಾಜ್ ಭಟ್ಟರು, ಈಗ ಕೇಂದ್ರ ಸರ್ಕಾರ ಜಾರಿ ತಂದಿರುವ GST (ಸರುಕು ಮತ್ತು ಸೇವಾ ತೆರಿಗೆ) ಕುರಿತು ಒಂದು ಹೊಸ ಹಾಡು ಬರೆದಿದ್ದಾರೆ.
ಈ ಹಾಡನ್ನ ಕನ್ನಡದ ಸ್ಟಾರ್ ನಟರಾದ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರಿಂದ ಹಾಡಿದ್ದು, ಈಗ ಟ್ರೆಂಡ್ ಸೃಷ್ಠಿಸುತ್ತಿದೆ.
''ಊಟಕ್ಕೆ ಟ್ಯಾಕ್ಸು.. ವಾಂತಿಗೂ ಟ್ಯಾಕ್ಸು..ಹುಟ್ಟು ಚಟ್ಟಕೆ ತೆರಿಗೆ ಫಿಕ್ಸ್'' ಅಂತ ಭಟ್ಟರು ತಮ್ಮದೇ ಸ್ಟೈಲ್ ನಲ್ಲಿ ಹಾಡನ್ನು ಗೀಚಿದ್ದಾರೆ. 'ಮಗುಳುನಗೆ' ಸಿನಿಮಾದ 'ಹೊಡಿ ಒಂಬತ್ತ್..' ಎಂಬ ಹಾಡಿನ ದಾಟಿಗೆ ಈ ಹಾಡನ್ನು ಬರೆದಿದ್ದಾರಂತೆ.
'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು
ಈ ಹಿಂದೆ 'ದನಕಾಯೋನು' ಸಿನಿಮಾದ ಸಮಯದಲ್ಲಿ ಕಾವೇರಿ ವಿಷಯವಾಗಿ ಯೋಗರಾಜ್ ಭಟ್ ಇದೇ ರೀತಿ ಹಾಡು ಬರೆದಿದ್ದರು. ಆ ಹಾಡನ್ನ ನಟ ದುನಿಯಾ ವಿಜಯ್ ಹಾಡಿದ್ದರು. ಈಗ ಅದೇ ರೀತಿ GST ಕಾಯಿದೆಯನ್ನ ವ್ಯಂಗ್ಯ ಮಾಡಿ ಹಾಡು ಬರೆದಿರುವ ಭಟ್ಟರು GSTಯಿಂದ ಆಗುವ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಚರ್ಚೆ ಮಾಡಿದ್ದಾರೆ.
ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ಮುಗುಳುನಗೆ'
ಸದ್ಯ, ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರವನ್ನ ನಿರ್ದೇಶನ ಮಾಡಿರುವ ಯೋಗರಾಜ್ ಭಟ್ ಅವರು, ಸಂಪೂರ್ಣ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ. ಇನ್ನು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜುಲೈ 2 ರಂದು 'ಮುಗುಳುನಗೆ' ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ಈ ಹಾಡು ಕೇಳಲು ಈ ಲಿಂಕ್ ಗಳನ್ನ ಕ್ಲಿಕ್ ಮಾಡಿ