Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು ಚಿತ್ರದಿಂದ ಕನ್ನಡ ನಟ ಕಿಕ್ ಔಟ್: ನಟ ಯೋಗಿ ಹೇಳಿದಿಷ್ಟು.!
ತಮಿಳುನಾಡಿನ ಪತ್ರಕರ್ತರು ಹಾಗೂ ಮಾಧ್ಯಮಗಳ ಮುಂದೆ ನಿಂತು ಮಂಡ್ಯದಲ್ಲಿ ಇರುವ ಕಾವೇರಿ ನೀರಿನ ಸಮಸ್ಯೆ ಕುರಿತು ವಿವರಿಸಿದ ಕನ್ನಡ ನಟ ಯೋಗಿಗೆ ಇದೀಗ ದೊಡ್ಡ ಶಾಕ್ ಸಿಕ್ಕಿದೆ. ತಮಿಳು ಚಿತ್ರದಿಂದ ನಟ ಯೋಗಿಯನ್ನ ಕೈಬಿಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕೆಲವೇ ದಿನಗಳಲ್ಲಿ ತಮಿಳು ಸಿನಿಮಾ 'ಪಾರ್ತಿಬನ್ ಕಾದಲ್' ಶೂಟಿಂಗ್ ಶುರುವಾಗುತ್ತಿತ್ತು. ಆದ್ರೆ, ಅಷ್ಟರಲ್ಲಿ ಚಿತ್ರದಿಂದ ಯೋಗಿ ಅವರನ್ನ ಹೊರಹಾಕಲಾಗಿದೆ.
ಹಾಗ್ನೋಡಿದ್ರೆ, ಕಾವೇರಿ ಸಮಸ್ಯೆ ಬಗ್ಗೆ ಯೋಗಿ ವಿವರಿಸಿದ್ದಾರೆ ಅಷ್ಟೇ. ಆದ್ರೆ, ಅದೇ ಮುಂದೆ ವಿವಾದ ಆಗಬಹುದು ಎಂದು ಊಹಿಸಿ ಚಿತ್ರತಂಡ ಯೋಗಿಗೆ ಗೇಟ್ ಪಾಸ್ ನೀಡಿದೆ.
ಅವಕಾಶವನ್ನ ಅರಸಿ ಕಾಲಿವುಡ್ ಗೆ ಹೋಗಿದ್ದ ನಟ ಯೋಗಿಗೆ ತಮಿಳು ಚಿತ್ರರಂಗ ಕೊಟ್ಟಿರುವ ಕೊಡುಗೆ ಇದು. ಈ ವಿಚಾರದ ಬಗ್ಗೆ ಯೋಗಿ ಹೇಳಿದಿಷ್ಟು....
ಮುಂದೆ ಗಲಾಟೆ ಆದರೆ...
''ಇದಕ್ಕಿದ್ದಂತೆ ಕಾವೇರಿ ಬಗ್ಗೆ ಪ್ರಶ್ನೆ ಕೇಳಿದರು. ಕಾವೇರಿ ಸಮಸ್ಯೆ ಏನಿದೆ, ಅದರ ಬಗ್ಗೆ ನಾನು ಮಾತನಾಡಿದ್ದೆ. ಅಣ್ಣಾವ್ರು ಇಷ್ಟ ಅಂತ ಹೇಳಿದ್ದೆ ಅಷ್ಟೇ. ಇದರ ಬಗ್ಗೆ ನೀವು ಮಾತನಾಡಬಾರದಿತ್ತು. ಸಿನಿಮಾ ರಿಲೀಸ್ ಟೈಮ್ ನಲ್ಲಿ ಇದನ್ನ ಇಟ್ಟುಕೊಂಡು ಯಾರಾದರೂ ಗಲಾಟೆ ಮಾಡಿದರೆ, ಚಿತ್ರವನ್ನ ಯಾರೂ ನೋಡದೇ ಇದ್ದರೆ.? ಈಗಲೇ ಹೀಗೆ ಮಾತನಾಡಿದರೆ ನಾಳೆ ಸಮಸ್ಯೆ ದೊಡ್ಡದಾಗುತ್ತೆ.. ಹೀಗಾಗಿ ಬೇಡ ಅಂತ ನಿರ್ದೇಶಕರು ಹೇಳಿದರು. ಚಿತ್ರದಿಂದ ನನ್ನ ಕೈಬಿಟ್ಟರು'' ಎನ್ನುತ್ತಾರೆ ನಟ ಯೋಗಿ.
ಕನ್ನಡಿಗರ ಪರವಾಗಿ ಮಾತನಾಡಿದ ನಟನಿಗೆ ತಮಿಳು ಚಿತ್ರರಂಗ ಕೊಟ್ಟ 'ಮರ್ಯಾದೆ' ಇದು.!
ತಪ್ಪಾಗಿ ಭಾವಿಸಿದರೆ ಹೇಗೆ.?
''ವ್ಯವಸ್ಥಿತವಾಗಿ ನನ್ನನ್ನ ಸಿಲುಕಿಸಿದರು ಅಂತ ಅನ್ಸುತ್ತೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಅನಿಸುತ್ತಿದೆ. ನಾನೇನೂ ತಪ್ಪಾಗಿ ಮಾತನಾಡಿಲಿಲ್ಲ. ಪರಿಸ್ಥಿತಿಯನ್ನ ವಿವರಿಸಿದೆ. ನಾವೆಲ್ಲ ಅಣ್ಣ-ತಮ್ಮಂದಿರು ಇದ್ದ ಹಾಗೆ ಅಂತಲೂ ಹೇಳಿದ್ದೇನೆ. ಆದರೂ, ಅದನ್ನೇ ತಪ್ಪಾಗಿ ಭಾವಿಸಿದರೆ ಹೇಗೆ.?'' ಎಂದು ಪ್ರಶ್ನಿಸುತ್ತಾರೆ ಯೋಗಿ.
''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ
ಕೊರಗು ಇಲ್ಲ.!
''ನನಗೆ ಒಂದು ಅವಕಾಶ ಹೋಯ್ತು ಅನ್ನೋದು ನಿಜ. ಆದ್ರೆ, ಅದರ ಬಗ್ಗೆ ನನಗೆ ಕೊರಗು ಇಲ್ಲ. ಮತ್ತೆ ಅವಕಾಶ ಸಿಕ್ಕರೆ ಹೋಗುವೆ. ಎಲ್ಲೇ ಹೋದರೂ ನನ್ನ ಭಾಷೆ, ಅಭಿಮಾನ ಬಿಡಲ್ಲ'' - ಯೋಗಿ.
ಕಾವೇರಿ ಬಗ್ಗೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣದಲ್ಲೇನಿದೆ? ಇಲ್ಲಿದೆ ಅನುವಾದ
ಅವಕಾಶಗಳಿಗಾಗಿ ಎದುರು ನೋಡುತ್ತಿರುವ ನಟ
ಸದ್ಯ ತಮಿಳು ಚಿತ್ರರಂಗದಿಂದ ಅವಕಾಶ ವಂಚಿತರಾಗಿರುವ ಯೋಗಿ ಕನ್ನಡದಲ್ಲೂ ಆಫರ್ ಗಳಿಗಾಗಿ ಕಾಯುತ್ತಿದ್ದಾರೆ. ''ಕನ್ನಡ ಚಿತ್ರರಂಗ ನನಗೊಂದು ಒಳ್ಳೆಯ ಅವಕಾಶ ಕೊಡಲಿ'' ಎಂದು ಕೇಳಿಕೊಳ್ಳುತ್ತಾರೆ ನಟ ಯೋಗಿ.