Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಪ್ರಿಲ್ 11ರಿಂದ ಯೋಗರಾಜ್ ಭಟ್ ಹೊಸ ಚಿತ್ರ
ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಈಗಾಗಲೆ ಒಂದೆರಡು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಶೇ.90ರಷ್ಟು ಓಕೆ ಆಗಿದೆಯಂತೆ. ಯೋಗರಾಜ್ ಭಟ್ ಹಾಗೂ ಕರಿಸುಬ್ಬು, ಎನ್ ಕುಮಾರ್ ಜಂಟಿಯಾಗಿ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್ ಇದಾಗಿದೆ.
ಭಟ್ಟರ ಜೊತೆಗೆ ಈ ಹಿಂದೆ ಕರಿಸುಬ್ಬು ಅವರು ಮಣಿ ಚಿತ್ರ ಮಾಡಿದ್ದರು. ರಂಗ ಎಸ್ಎಸ್ಎಲ್ ಸಿ ಚಿತ್ರವನ್ನು ನಿರ್ಮಾಪಕ ಎನ್ ಕುಮಾರ್ ಮಾಡಿದ್ದರು. ಎರಡೂ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಈಗ ಮೂವರು ಸೇರಿ ಹೊಸ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಚಿತ್ರದ ತಾಂತ್ರಿಕ ಹಾಗೂ ಕಲಾವಿದರ ಆಯ್ಕೆ ನಡೆಯುತ್ತಿದೆ. ಕಥೆ ಇಲ್ಲದೆ ಸಿನಿಮಾ ಮಾಡುವ ಭಟ್ಟರು ಈ ಬಾರಿ ಅದೇನು ಮಾಡುತ್ತಾರೋ ಎಂಬ ಕುತೂಹಲವಿದೆ. ಅವರ 'ಡ್ರಾಮಾ' ಚಿತ್ರದ ಯಶಸ್ಸು ಭಟ್ಟರ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಏತನ್ಮಧ್ಯೆ ಬೆಂಗಳೂರು ಮೇನಕ ಚಿತ್ರಮಂದಿರದಲ್ಲಿ 'ಡ್ರಾಮಾ' (ಚಿತ್ರ ವಿಮರ್ಶೆ ಓದಿ) ಚಿತ್ರ ನೂರು ದಿನಗಳು ಪೂರೈಸಿದೆ. ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾದ ಡ್ರಾಮ ಕಮರ್ಷಿಯಲ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಈ ಬಾರಿ ಭಟ್ಟರು ತಮ್ಮ ಬತ್ತಳಿಕೆಯಿಂದ ಯಾವ ಅಸ್ತ್ರ ತೆಗೆಯುತ್ತಾರೋ ಏನೋ? (ಒನ್ಇಂಡಿಯಾ ಕನ್ನಡ)