Don't Miss!
- Automobiles 'ಬಾಹುಬಲಿ' ಎಸ್ಯುವಿ ಪರಾಕ್ರಮ: ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ವಿಶೇಷತೆಗಳೇನು?
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣ-ಪ್ರಭುದೇವ-ಭಟ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಏನು?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೊಟ್ಟ ಮೊದಲ ಸಲ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ ಮಾಡುತ್ತಿದ್ದಾರೆ. ಇದು ಸಹಜವಾಗಿ ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ಶಿವಣ್ಣ ಜೊತೆ ಪ್ರಭುದೇವ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ನಲ್ಲಿ ಥ್ರಿಲ್ ಹೆಚ್ಚಿಸಿದೆ.
ಅಧಿಕೃತವಾಗಿ ಪ್ರಾಜೆಕ್ಟ್ ಘೋಷಣೆಯಾಗದಿದ್ದರೂ ಸಿನಿಮಾ ಆರಂಭಕ್ಕೆ ಎಲ್ಲ ತಯಾರಿ ನಡೆದಿದೆ. ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಚಿತ್ರಕ್ಕೆ ಹೆಸರು ಏನಿಡಬಹುದು ಎಂಬ ಕುತೂಹಲವೂ ಅಷ್ಟೇ ಕಾಡುತ್ತಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಮೂವರು ಸೂಪರ್ ಸ್ಟಾರ್ಗಳು ಒಂದಾಗಿರುವ ಪ್ರಾಜೆಕ್ಟ್ಗೆ ಅಣ್ಣಾವ್ರು ನಟಿಸಿದ್ದ ಸೂಪರ್ ಹಿಟ್ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯನ್ನಾಗಿಸಲು ಪ್ಲಾನ್ ಮಾಡಲಾಗಿದೆ. ಮುಂದೆ ಓದಿ...
'ಕುಲದಲ್ಲಿ ಕೀಳ್ಯಾವುದೋ' ಎನ್ನುತ್ತಿದ್ದಾರೆ ಭಟ್ಟರು
ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಒಟ್ಟಿಗೆ ಅಭಿನಯಿಸಲಿರುವ ಈ ಚಿತ್ರಕ್ಕೆ 'ಕುಲದಲ್ಲಿ ಕೀಳ್ಯಾವುದೋ' ಎಂದು ಹೆಸರಿಡಲು ಯೋಗರಾಜ್ ಭಟ್ಟರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ, ಈ ಟೈಟಲ್ 1965ರಲ್ಲಿ ತೆರೆಕಂಡಿದ್ದ 'ಸತ್ಯಹರಿಶ್ಚಂದ್ರ' ಸಿನಿಮಾದ ಸೂಪರ್ ಹಿಟ್ ಹಾಡು ''ಕುಲದಲ್ಲಿ ಕೀಳ್ಯಾವುದೋ' ನೆನಪಿಸುತ್ತಿದೆ. ಆದರೆ, ಈ ಟೈಟಲ್ ಅಂತಿಮವಾಗಿಲ್ಲ ಎಂದು ಹೇಳಲಾಗಿದೆ.
ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?
1960-70ರ ಕಾಲಘಟ್ಟದ ಚಿತ್ರ
ಅಂದ್ಹಾಗೆ, 1960 ಮತ್ತು 1970 ನಡುವಿನ ನಡೆಯುವ ಕಥೆ ಇದಾಗಿದ್ದು, ಇಬ್ಬರು ನಟರು 60ರ ದಶಕದ ಪಾತ್ರಗಳಲ್ಲಿ ನಟಿಸಲಿದ್ದಾರೆ. ಆದರೆ, ಇದು ಯಾವುದೇ ನೈಜ ಘಟನೆಗಳ ಕುರಿತಾದ ಚಿತ್ರವಲ್ಲ ಎಂದು ಯೋಗರಾಜ್ ಭಟ್ ಅವರು ಸ್ಪಷ್ಟನೆ ಸಹ ನೀಡಿದ್ದಾರೆ.
ಗಾಳಿಪಟ 2 ಮುಗಿದ ಮೇಲೆ ಆರಂಭ
ಯೋಗರಾಜ್ ಭಟ್ ಅವರು ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಗಾಳಿಪಟ-2' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಸಂಪೂರ್ಣವಾಗಿ ಮುಗಿದ ಮೇಲೆ ಅಷ್ಟೇ ಹೊಸ ಪ್ರಾಜೆಕ್ಟ್ ಆರಂಭವಾಗಲಿದೆ. ಮತ್ತೊಂದೆಡೆ 'ಭಜರಂಗಿ-2' ಚಿತ್ರೀಕರಣ ಮಾಡುತ್ತಿರುವ ಶಿವಣ್ಣ ಅವನೇ ಶ್ರೀಮನ್ನಾರಾಯಣ ನಿರ್ದೇಶಕನ ಜೊತೆಯೂ ಹೊಸ ಸಿನಿಮಾವೊಂದು ಮಾಡಲಿದ್ದಾರೆ.
Recommended Video
18 ವರ್ಷದ ಬಳಿಕ ಕನ್ನಡಕ್ಕೆ ಪ್ರಭುದೇವ
ಪ್ರಭುದೇವಾ 18 ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಚ್2ಒ ಸಿನಿಮಾದ ಬಳಿಕ ಕನ್ನಡದಲ್ಲಿ ಇದೇ ಅವರ ಪೂರ್ಣ ಪ್ರಮಾಣದ ಪಾತ್ರ. ಅವರ ಸಹೋದರ ನಾಗೇಂದ್ರ ಪ್ರಸಾದ್ ನಾಯಕರಾಗಿದ್ದ 'ಮನಸೆಲ್ಲಾ ನೀನೆ' ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಸಿದ್ದರು ಪ್ರಭುದೇವಾ.