Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ಡೌನ್ ನಡುವೆಯೂ ಶೂಟಿಂಗ್ ಮಾಡಿದ ಯೋಗರಾಜ್ ಭಟ್!
ಕೊರೊನಾ ಲಾಕ್ಡೌನ್ ಶುರುವಾದ ಬಳಿಕ ದೇಶದಾದ್ಯಂತ ಸಿನಿಮಾ, ಧಾರವಾಹಿ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣ ಬಂದ್ ಆಗಿದೆ.
ಲಾಕ್ಡೌನ್ ನಿಂದಾಗಿ ಇಡೀಯ ಕನ್ನಡ ಚಿತ್ರರಂಗವೂ ಸ್ಥಬ್ಧವಾಗಿದೆ. ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ, ಇಂಥಹಾ ಸಮಯದಲ್ಲೂ ಸಹ ನಿರ್ದೇಶಕ ಯೋಗರಾಜ ಭಟ್ ಚಿತ್ರೀಕರಣ ಮಾಡಿದ್ದಾರೆ!
ಯೋಗರಾಜ್ ಭಟ್ಟರು ಗಾಳಿಪಟ-2 ಸಿನಿಮಾ ನಿರ್ದೇಶಿಸುತ್ತಿರುವುದು, ಸಿನಿಮಾದ ಚಿತ್ರೀಕರಣ ಸಾಗುತ್ತಿರುವುದು ಗೊತ್ತಿರುವ ವಿಚಾರವೇ, ಆದರೆ ಅವರು ಈಗ ಆಕ್ಷನ್ ಕಟ್ ಹೇಳಿರುವುದು ತಮ್ಮ ಗಾಳಿಪಟ-2 ಗೆ ಅಲ್ಲ.
ಕೊರೊನಾ ಯೋಧರ ಕುರಿತ ಡಾಕ್ಯುಮೆಂಟರಿ
ಕೊರೊನಾ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಪೊಲೀಸರ ಕಾರ್ಯವನ್ನು ಗುರುತಿಸುವ, ಅವರಿಗೆ ಅಭಿನಂಧಿಸುವ ಕಾರಣದಿಂದ ಯೋಗರಾಜ್ ಭಟ್ಟರು ಕಿರುಚಿತ್ರ ನಿರ್ದೇಶಿಸುತ್ತಿದ್ದು, ಅದರ ಚಿತ್ರೀಕರಣವನ್ನು ಭಟ್ಟರು ಮಾಡಿದ್ದಾರೆ.
ಟೌನ್ಹಾಲ್ ಎದುರು ನಡೆದ ಚಿತ್ರೀಕರಣ
ನಗರದ ಟೌನ್ಹಾಲ್ ಎದುರು ಯೋಗರಾಜ್ ಭಟ್ಟರು, ಕೆಲವು ಪೊಲೀಸರನ್ನು ಸೇರಿಸಿಕೊಂಡು ಚಿತ್ರೀಕರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಗುರುತಿಸುವ ಚಿತ್ರ ಇದಾಗಿರಲಿದೆ.
ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತು
ಚಿತ್ರೀಕರಣದ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, 'ನಾನೇ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದೇನೆ. ಇಂಥಹಾ ಸಂಕಷ್ಟದ ಸಮಯದಲ್ಲಿ ಪೊಲೀಸರ ಕಾರ್ಯವನ್ನು ಗುರುತಿಸುವ, ದಾಖಲಿಸುವ ಕಾರ್ಯವನ್ನು ಯೋಗರಾಜ್ ಭಟ್ಟರು ಮಾಡುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.
ಚುನಾವಣೆ ಆಯೋಗಕ್ಕಾಗಿ ಹಾಡು ಮಾಡಿದ್ದ ಭಟ್ಟರು
ಈ ಹಿಂದೆ ಯೋಗರಾಜ್ ಭಟ್ಟರು ಚುನಾವಣಾ ಆಯೋಗದ ಮನವಿ ಮೇರೆಗೆ ಚುನಾವಣೆ ಗೀತಚಿತ್ರಗಳನ್ನು, ಕೆಲವು ಕಿರುಚಿತ್ರಗಳನ್ನು ಮಾಡಿಕೊಟ್ಟಿದ್ದಾರೆ. ಲಾಕ್ಡೌನ್ ಗೆ ಮುನ್ನಾ ಗಾಳಿಪಟ-2 ಸಿನಿಮಾ ನಿರ್ದೇಶನದಲ್ಲಿ ಭಟ್ಟರು ತೊಡಗಿಸಿಕೊಂಡಿದ್ದರು. ಸಿನಿಮಾದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್ ನಟಿಸುತ್ತಿದ್ದಾರೆ.