Don't Miss!
- News Shivamogga: ದೇಶದಲ್ಲಿ ಕಾಂಗ್ರೆಸ್ನ ಸ್ಪರ್ಧೆಯ ಕ್ಷೇತ್ರ, ಟಾರ್ಗೆಟ್ ಕ್ಷೇತ್ರಗಳ ಲೆಕ್ಕ ಕೊಟ್ಟ ಮಾಜಿ ಸಿಎಂ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ಜಾತಿ, ಭಾಷೆಯಿಂದಾಗಿ ನನ್ನನ್ನು ಹೊರಗಿಟ್ಟಿರಿ: ಪವನ್ಗೆ ದಯಾಳ್ ಉತ್ತರ
ನಿರ್ದೇಶಕ ಪವನ್ ಕುಮಾರ್ ಹಾಗೂ ದಯಾಳ್ ಪದ್ಮನಾಭನ್ ನಡುವೆ ವರ್ಷದ ಹಿಂದೆ ಆರಂಭವಾಗಿದ್ದ ಜಗಳ ಇನ್ನೂ ಅಂತ್ಯವಾಗಿಲ್ಲ.
ಕಳೆದ ವರ್ಷ ಪವನ್ ಪ್ರಾರಂಭಿಸಿದ್ದ ನಿರ್ದೇಶಕರ ಕೂಟ 'ಎಫ್ಯುಸಿ'ಗೆ (ಫಿಲಂ ಮೇಕರ್ಸ್ ಯುನೈಟೆಡ್ ಕ್ಲಬ್) ಪ್ರವೇಶ ಪಡೆಯಲು ದಯಾಳ್ ಪದ್ಮನಾಭನ್ ವಿಫಲರಾಗಿದ್ದರು. ಅದರ ಬಳಿಕ ದಯಾಳ್ ಪದ್ಮನಾಭನ್, ಪವನ್ ವಿರುದ್ಧ ಹಾಗೂ ಎಫ್ಯುಸಿ ವಿರುದ್ಧ ಫೇಸ್ಬುಕ್ನಲ್ಲಿ ಆರೋಪಗಳನ್ನು ಮಾಡಿದ್ದರು. ಅದಕ್ಕೆ ಆಗಲೇ ಪವನ್ ಪ್ರತಿಕ್ರಿಯೆ ನೀಡಿ, ದಯಾಳ್ಗೆ ಸದಸ್ಯರ ಒಮ್ಮತದ ಮತಗಳು ಬೀಳದ ಕಾರಣಕ್ಕೆ ಅವರು ಎಫ್ಯುಸಿಗೆ ಸೇರಲಾಗಲಿಲ್ಲ ಎಂದಿದ್ದರು.
ಆದರೆ ಇತ್ತೀಚೆಗೆ ಕ್ಲಬ್ಹೌಸ್ ಚರ್ಚೆಯೊಂದರಲ್ಲಿ ದಯಾಳ್ ಪದ್ಮನಾಭನ್, ಪವನ್ ವಿರುದ್ಧ ಮೂದಲಿಕೆ ಮಾತನಾಡಿದ್ದು ಪವನ್ ಬೇಸರಕ್ಕೆ ಕಾರಣವಾಗಿದೆ. ಇದೀಗ ಪವನ್, ದಯಾಳ್ಗೆ ಖಾಸಗಿಯಾಗಿ ಧ್ವನಿ ಸಂದೇಶವನ್ನು ಕಳಿಸಿ ದಯಾಳ್ಗೆ ಎಫ್ಯುಸಿಯಲ್ಲಿನ ಯಾವ ನಿರ್ದೇಶಕನೂ ಮತ ಹಾಕಿರಲಿಲ್ಲ ಎಂದಿದ್ದಾರೆ.
ಪವನ್ರ ಧ್ವನಿ ಸಂದೇಶಕ್ಕೆ ಫೇಸ್ಬುಕ್ ಮೂಲಕ ಉತ್ತರ ನೀಡಿರುವ ದಯಾಳ್ ಪದ್ಮನಾಭನ್, ''ನನ್ನ ಜಾತಿ ಹಾಗೂ ಭಾಷೆ ನಿಮಗೆ ಸಮಸ್ಯೆ ಎನಿಸಿತು ಹಾಗಾಗಿ ನನಗೆ ಎಫ್ಯುಸಿ ಪ್ರವೇಶ ನಿರಾಕರಿಸಿದಿರಿ. ನನ್ನ ಹೋರಾಡುವ ಛಾತಿ, ಎತ್ತರಕ್ಕೆ ಬೆಳೆಯುವ ಹಂಬಲ, ನೇರ, ನಿಷ್ಠುರ ಮಾತು, ನನ್ನ ಸ್ವತಂತ್ರ ಚಿಂತನೆಗಳು ಸಹ ನಿಮಗೆ ಸಹಿಸಲಾಗದೆ ನನ್ನನ್ನು ಹೊರಗಿಟ್ಟಿರಿ'' ಎಂದಿದ್ದಾರೆ.
''ಎಫ್ಯುಸಿಯ ಆಹ್ವಾನವನ್ನು ನೀವೇ ನನಗೆ ಕಳಿಸಿದಿರಿ. ಈಗ ಅದನ್ನು 'ಪ್ರೊಪೋಸಲ್' ಎಂದು ನೀವು ಕರೆಯುತ್ತಿದ್ದೀರಿ. ನಾನಾಗಿಯೇ ಬಂದು ನನ್ನನ್ನು ತಂಡದಲ್ಲಿ ಸೇರಿಸಿಕೊಳ್ಳಿ ಎಂದು ಕೇಳಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಕೆಲಸಗಳು ನನ್ನ ಬಳಿ ಇದ್ದವು'' ಎಂದು ಪವನ್ಗೆ ಉತ್ತರಿಸಿದ್ದಾರೆ ದಯಾಳ್.
Recommended Video
''ನನಗೆ ಅವಮಾನ ಮಾಡಿದ್ದಕ್ಕೆ ನೀವು ಮತ್ತು ನಿಮ್ಮ ಎಫ್ಯುಸಿ ಸದಸ್ಯರು ತಕ್ಕ ಶಾಸ್ತಿ ಅನುಭವಿಸಿಯೇ ತೀರುತ್ತೀರ. ನಿಮಗೆ ಹಾಗೂ ನಿಮ್ಮ ತಂಡದ ಸದಸ್ಯರಿಗೆ ಸಮಯವೇ ಸೂಕ್ತ ಪಾಠ ಕಲಿಸಲಿದೆ. ಯಾವುದು ಸಹ ನನ್ನನ್ನು ಬದಲಾವಣೆ ಮಾಡಲಾರದು. ಏನಾದರೂ ಎದುರು ಬರಲಿ, ನಾನು ಕೊನೆಯವರೆಗೆ ಕನ್ನಡ ಸಿನಿಮಾ ನಿರ್ದೇಶಕನಾಗಿ ಇರುತ್ತೇನೆ'' ಎಂದಿದ್ದಾರೆ ದಯಾಳ್.