Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಚಿತ್ರಮಂದಿರಕ್ಕೆ ಬಂದ ರಾಬರ್ಟ್, ಯುವರತ್ನ
ಕರ್ನಾಟಕ ರಾಜ್ಯಾದ್ಯಂತ ಚಿತ್ರಮಂದಿರಗಳು ಮತ್ತೆ ತೆರೆದಿದೆ. ಕೋವಿಡ್ ಎರಡನೇ ಅಲೆ ಹಿನ್ನೆಲೆ ಬಾಗಿಲು ಹಾಕಿದ್ದ ಥಿಯೇಟರ್ಗಳು ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಜುಲೈ 19 ರಿಂದ ರಾಜ್ಯಾದ್ಯಂತ ಸಿನಿಮಾ ಮಂದಿರಗಳು ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೆಲಸ ಆರಂಭಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇಂದು ಬೆಳಗ್ಗೆಯಿಂದ ಚಿತ್ರಪ್ರದರ್ಶನ ಆರಂಭವಾಗಿದೆ.
ಸದ್ಯದ ವರದಿ ಪ್ರಕಾರ, ಮೈಸೂರಿನಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ರಿ-ರಿಲೀಸ್ ಮಾಡುವ ಮೂಲಕ ಥಿಯೇಟರ್ ಪುನರಾರಂಭಿಸಲಾಗಿದೆ. ನಟ ದರ್ಶನ್ ನಟನೆಯಲ್ಲಿ ತೆರೆಕಂಡಿದ್ದ ರಾಬರ್ಟ್, ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಯುವರತ್ನ ಹಾಗೂ ಪ್ರಜ್ವಲ್ ದೇವರಾಜ್ ನಟನೆಯಲ್ಲಿ ರಿಲೀಸ್ ಆಗಿದ್ದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾ ಮೈಸೂರು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ರಾಜ್ಯದ ಹಲವು ಚಿತ್ರಮಂದಿರಗಳು ಇಂದಿನಿಂದ ಪ್ರದರ್ಶನ ಶುರು ಮಾಡಿದ್ದು, ಹಳೆಯ ಸಿನಿಮಾಗಳೊಂದಿಗೆ ಶೋ ಆರಂಭಿಸಿದೆ. ಇನ್ನು ಕೆಲವು ಚಿತ್ರಮಂದಿರಗಳು ಪೂರ್ವ ತಯಾರಿ ನಡೆಸುತ್ತಿವೆ. ಚಿತ್ರಮಂದಿರಗಳನ್ನು ಹೊಸ ರೂಪಕ್ಕೆ ತರಲು ಕೆಲಸ ಮಾಡುತ್ತಿವೆ.
ಇನ್ನು ಬುಕ್ ಮೈ ಶೋನಲ್ಲಿ ಯಾವ ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಹಾಗೂ ಪ್ರಸ್ತುತ ಪ್ರದರ್ಶನ ಕಾಣುತ್ತಿರುವ ಚಿತ್ರಗಳ ಬುಕ್ಕಿಂಗ್ಗೆ ಅವಕಾಶ ಮಾಡಿಕೊಟ್ಟಿಲ್ಲ. ನಿಧಾನವಾಗಿ ಈ ಪ್ರಕ್ರಿಯೆಗೆ ಚಾಲನೆ ಸಿಗಬಹುದು.
ಚಿತ್ರಮಂದಿರಗಳಿಗೆ ಅವಕಾಶ ಸಿಕ್ಕಿದ ಹಿನ್ನೆಲೆ ನಿರ್ದೇಶಕ ಸಿಂಪಲ್ ಸುನಿ ವಿಶೇಷವಾಗಿ ಟ್ವೀಟ್ ಮಾಡಿ ಪ್ರೇಕ್ಷಕರನ್ನು ಸ್ವಾಗತಿಸಿದ್ದಾರೆ.
ಇಂದಿನಿಂದ ಚಿತ್ರಮಂದಿರ ತೆರೆದಿರುತ್ತವೆ..
— ಸುನಿ/SuNi (@SimpleSuni) July 19, 2021
ಬನ್ನಿ ಪ್ರೇಕ್ಷಕರೇ
ಬನ್ನಿ ಹಿತೈಷಿಗಳೇ
ಬನ್ನಿ ಸ್ನೇಹಿತರೆ
ಬನ್ನಿ ಬನ್ನಿ ಬಂಧುಬಾಂಧವರೇ.... pic.twitter.com/TGAwZ2PrVy
ರಿಲೀಸ್ಗೆ ರೆಡಿಯಿರುವ ಸಿನಿಮಾಗಳು
Recommended Video
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ, ಸುದೀಪ್ ನಟನೆಯ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ, ಶಿವಣ್ಣ ಅಭಿನಯದ ಭಜರಂಗಿ 2, ಸಂಚಾರಿ ವಿಜಯ್ ನಟನೆಯ ತಲೆದಂಡ, ಜಗ್ಗೇಶ್ ನಟನೆಯ ತೋತಾಪುರಿ, ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್,ಶರಣ್ ಅಭಿನಯದ ಅವತಾರ ಪುರುಷ ಸೇರಿದಂತೆ ಹಲವು ಸಿನಿಮಾಗಳು ಚಿತ್ರೀಕರಣ ಮುಗಿಸಿ ಸಜ್ಜಾಗಿದೆ.