Just In
- 47 min ago
ದೀಪಿಕಾ, ಸಿದ್ಧಾರ್ಥ್, ಸುಮಲತಾ ಭೇಟಿಯಾಗಿ ದೋಸೆ ತಿನ್ನಲು ವಿದ್ಯಾರ್ಥಿ ಭವನಕ್ಕೆ ಬಂದ ಬರ್ನಿ ಸ್ಯಾಂಡರ್ಸ್
- 1 hr ago
ಸಮಂತಾ ಜಿಮ್ಗೆ ಹೋಗಲು ಶುರು ಮಾಡಿದ್ದು ಏಕೆ? ಸೀಕ್ರೆಟ್ ಬಿಚ್ಚಿಟ್ಟ ನಟಿ
- 1 hr ago
ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ
- 2 hrs ago
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
Don't Miss!
- News
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
- Automobiles
ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಮಿನಿ ಹರಾಜಿನ ದಿನಾಂಕ ಹಾಗೂ ಸ್ಥಳ ಅಧಿಕೃತ ಘೋಷಣೆ
- Lifestyle
ನೀವೊಬ್ಬ ಒಳ್ಳೆಯ ಪತಿಯಾಗಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಟಿಟಿ ಹೆಸರಲ್ಲಿ 'ಕಾಲವೇ ಮೋಸಗಾರ' ಸಿನಿಮಾ ತಂಡಕ್ಕೆ ಭಾರಿ ಮೋಸ
ಸಣ್ಣ-ಮಧ್ಯಮ ಬಜೆಟ್ನ ಸಿನಿಮಾಗಳಿಗೆ ಒಟಿಟಿ ಲಾಭದ ಖಣಜವಾಗಿದೆ. ಒಳ್ಳೆಯ ಮೊತ್ತ ನೀಡಿ ಸಿನಿಮಾಗಳನ್ನು ಖರೀದಿಸುತ್ತಿವೆ ಒಟಿಟಿಗಳು. ಕೆಲವರಂತೂ ಒಟಿಟಿಗಾಗಿಯೇ ಸಿನಿಮಾಗಳನ್ನು ತಯಾರಿಸುತ್ತಿರುವುದೂ ಇದೆ.
ಒಟಿಟಿಗೆ ತಮ್ಮ ಸಿನಿಮಾ ಮಾರಲು ಕೆಲವು ನಿರ್ಮಾಪಕರು, ಸಿನಿಮಾ ತಂಡವರು ಪಡಬಾರದ ಪಾಡುಗಳನ್ನು ಸಹ ಪಡುತ್ತಿದ್ದಾರೆ. ಇದರ ಬೆನ್ನಲ್ಲೆ ಕೆಲವರು ಮಧ್ಯವರ್ತಿಗಳು ಹಾಗೂ ಮೋಸಗಾರರು ಹುಟ್ಟಿಕೊಂಡಿದ್ದು, ಸಿನಿ ತಂಡಗಳಿಗೆ ಮೋಸ ಮಾಡುತ್ತಿವೆ.
ಕಾಲವೇ ಮೋಸಗಾರ ಎಂಬ ಸಿನಿಮಾದ ತಂಡವು, ತಮ್ಮ ಸಿನಿಮಾವನ್ನು ಒಟಿಟಿಗೆ ಮಾರಲು ನಿರ್ಣಯಿಸಿತ್ತು. ಮಿಸ್ಟಿಕ್ ಸ್ಟುಡಿಯೋಸ್ನವರು ಎಂದು ಹೇಳಿಕೊಂಡಿದ್ದ ವೆಂಕಟೇಶ್ ಆಚಾರ್ಯ ಎಂಬಾತ, 'ನಾನು ಕಾಲವೇ ಮೋಸಗಾರ' ಸಿನಿಮಾವನ್ನು ಒಟಿಟಿಗೆ ಐದು ಕೋಟಿಗೆ ಮಾರಿಸಿಕೊಡುವುದಾಗಿ ಹೇಳಿದ್ದಾನೆ.

ವೆಂಕಟೇಶ್ ಆಚಾರ್ಯ ಎಂಬಾತನಿಂದ ಮೋಸ
ವೆಂಕಟೇಶ್ ಆಚಾರ್ಯನನ್ನು ನಂಬಿ, ಆತನೇ ಕೇಳಿದಂತೆ ಆತನ ಓಡಾಡಕ್ಕೆ ಇತರ ಖರ್ಚಿಗೆಂದು ನಿರ್ಮಾಪಕರು 1.30 ಲಕ್ಷ ಹಣ ಆತನಿಗೆ ನೀಡಿದ್ದಾರೆ. 45 ದಿನಗಳಲ್ಲಿ ಡೀಲ್ ಮುಗಿದು ನಿಮಗೆ ಐದು ಕೋಟಿ ಬರುತ್ತದೆ ಎಂದು ಹೇಳಿದ್ದ ವೆಂಕಟೇಶ್ ಆ ನಂತರ ನಾಪತ್ತೆ! ಹಣ ಕೊಟ್ಟು 150 ದಿನವಾದರೂ ಸಿನಿಮಾವನ್ನು ಒಟಿಟಿ ಕೊಂಡುಕೊಂಡಿಲ್ಲ.

ಫಿಲ್ಮ್ ಚೇಂಬರ್ ಮೆಟ್ಟಿಲೇರಿರುವ ತಂಡ
ಇದೀಗ ಕಾಲವೇ ಮೋಸಗಾರ ಸಿನಿಮಾದ ತಂಡವು ಫಿಲ್ಮ್ ಚೇಂಬರ್ನ ಮೊರೆ ಹೋಗಿದ್ದು, ತಮಗೆ ಮೋಸವಾಗಿದೆ ನ್ಯಾಯ ಕೊಡಿಸಿ ಎಂದು ಕೇಳಿದ್ದಾರೆ. ಅಷ್ಟೆ ಅಲ್ಲದೆ, ಪೊಲೀಸ್ ಠಾಣೆ ಮೆಟ್ಟಿಲೇರಲು ಸಹ ಸಿದ್ಧವಾಗಿದ್ದಾರೆ.

ಐದು ಭಾಷೆಯಲ್ಲಿ ಬಿಡುಗಡೆ ಮಾಡಲು ತಯಾರಿ
ಸಿನಿಮಾವನ್ನು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 'ಲಾಸ್ಟ್ ಪೆಗ್' ಹೆಸರಲ್ಲಿ ಬಿಡುಗಡೆ ಮಾಡಲು ಸಿನಿತಂಡ ಸಜ್ಜಾಗಿತ್ತು. ಕೊರೊನಾ ಕಾರಣಕ್ಕೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ಯತ್ನದಲ್ಲಿ ಮೋಸಹೋಗಿ ಕೈಸುಟ್ಟುಕೊಂಡಿದೆ.

ತ್ರಿಕೋನ ಪ್ರೇಮ ಕತೆ ಸಿನಿಮಾ
ರಜತ್ ದರ್ಗೋಜಿ ಸಾಲಂಕಿ ನಿರ್ಮಿಸಿರುವ ಈ ಸಿನಿಮಾವನ್ನು ಸಂಜಯ್ ವದತ್ ಎಂಬುವರು ನಿರ್ದೇಶಿಸಿದ್ದಾರೆ. ಭರತ್ ಸಾಗರ್, ಯಶಸ್ವಿನಿ ರವೀಂದ್ರ, ಶಂಕರ್ ಮೂರ್ತಿ ಮುಖ್ಯಪಾತ್ರಗಳಲ್ಲಿದ್ದಾರೆ.