Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada OTT: ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಅರ್ಜುನ್ ರಮೇಶ್!
ಬಿಗ್ ಬಾಸ್ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ತರೆ ಬಿದ್ದಿದೆ. ಆಗಸ್ಟ್ 6 ರಂದು ಬಿಗ್ ಬಾಸ್ ಕನ್ನಡ ಓಟಿಟಿ ಲಾಂಚ್ ಆಗಿದೆ. ಭಿನ್ನ ವ್ಯಕ್ತಿತ್ವಯುಳ್ಳ ಹಲವು ಸ್ಪರ್ಧಿಗಳು ಈ ಓಟಿಟಿ ಸೀಸನ್ಗಲ್ಲಿ ಭಾಗಿಯಾಗಿದ್ದಾರೆ.
ಬಿಗ್ ಬಾಸ್ ಮನೆ ಅಂದ್ಮೇಲೆ ಅಲ್ಲಿನ ಎಲ್ಲಾ ವ್ಯಕ್ತಿತ್ವಗಳು ಒಟ್ಟಿಗೆ ಒಗ್ಗೂಡಲು ಸಾಧ್ಯವಿಲ್ಲ. ಇಲ್ಲಿ ಸೌಹಾರ್ದತೆಗಿಂತಲೂ, ಸಮರವೇ ಹೆಚ್ಚಾಗಿ ಸದ್ದು ಮಾಡುತ್ತದೆ. ಸಣ್ಣ ಪುಟ್ಟ ಜಗಳಗಳು ಶುರುವಾಗುತ್ತಲೇ, ಸ್ಪರ್ಧಿಗಳಿಗೆ ಟಾಸ್ಕ್ಗಳು ಕೂಡ ಶುರುವಾಗಿ ಬಿಟ್ಟಿವೆ.
ಬಿಗ್ ಬಾಸ್ನಲ್ಲಿ ಕಿತ್ತಾಟ ಶುರು ಗುರು: ಮೊಟ್ಟೆಗಾಗಿ ಆರ್ಯವರ್ಧನ್ ಎದುರು ಸೋನು ಕಿತ್ತಾಟ!
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ಗಳು ನಡೆಯುವುದೇ ಒಂದು ಚೆಂದಾ, ಅದರಲ್ಲಿ ಸ್ಪರ್ಧಿಗಳು ಹೇಗೆ ಭಾಗವಹಿಸುತ್ತಾರೆ ಮತ್ತು ಗೆಲುವು, ಸೋಲಿನ ನಡುವೆ ಹೆಚ್ಚಿನ ಕುತೂಹಲ ಇರುತ್ತದೆ. ಇದ್ದವರಿಗೆ ಬೋನಸ್ ಸಿಕ್ಕರೆ, ಸೋತವರಿಗೆ ಕಳಪೆ ಬೋರ್ಡ್ ಪಕ್ಕಾ. ಇನ್ನು ಈ ನಡುವೆ ಬಿಗ್ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆ ಶುರುವಾಗಿದೆ.
ಕ್ಯಾಪ್ಟೆನ್ಸಿ ಆಯ್ಕೆ ಪ್ರಕ್ರಿಯೆ!
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುವುದೇ ಒಂದು ಸ್ವಾರಸ್ಯಕರ ಸಂಗತಿ. ಕ್ಯಾಪ್ಟೆನ್ಸಿ ಸಿಗಬೇಕು ಎಂದರೆ ಮನೆಯಲ್ಲಿ ಎಲ್ಲರ ಮನ ಗೆಲ್ಲುವುದು ಮುಖ್ಯ ಆಗುತ್ತದೆ. ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳಲ್ಲಿ ಗೆದ್ದ ತಂಡದವರಿಗೆ ಮಾತ್ರವೇ ಕ್ಯಾಪ್ಟನ್ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ಈ ಪೈಕಿ ಗೆದ್ದ ತಂಡದ ಸದ್ಯರಲ್ಲಿ ಹೆಚ್ಚು ಓಟ್ ಪಡೆದವರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಿ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿದೆ.
Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!
ಕ್ಯಾಪ್ಟನ್ ರೇಸ್ನಲ್ಲಿ ಚೈತ್ರಾ, ಅರ್ಜುನ್!
ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಜನ ಕ್ಯಾಪ್ಟನ್ಗಾಗಿ ಓಟ್ ಮಾಡಿದ್ದು, ಅರ್ಜುನ್ ಮತ್ತು ಚೈತ್ರಾ ಹಳ್ಳಿಕೇರಿ ಅವರಿಗೆ. ಈ ಇಬ್ಬರಿಗೆ ಹೆಚ್ಚಿನ ವೋಟ್ ಬಂದಿವೆ. ಇಬ್ಬರಿಗೂ ಮನೆ ಮಂದಿ ಕಡೆಯಿಂದ ಸಮನಾದ ಓಟುಗಳು ಬಂದಿವೆ. ತಲಾ 11 ಓಟ್ ಪಡೆದ ಕಾರಣ ಟೈ ಆಗಿದೆ. ಇವರನ್ನು ಬಿಟ್ಟರೆ ನಂದಿನಿ ಮತ್ತು ಸೋಮಣ್ಣ ಇಬ್ಬರಿಗೂ ತಲಾ 7 ಓಟುಗಳು ಬಂದಿವೆ. ಹಾಗೆ ಸಾನಿಯಾ ಮತ್ತು ಉದಯ್ಗೆ ಕಡಿಮೆ ಓಟ್ ಬಂದಿವೆ. ಸ್ಪೂರ್ತಿ ಗೌಡಗೆ ಯಾವುದೇ ಓಟ್ ಕೂಡ ಬಂದಿಲ್ಲ.
ಟಾಸ್ಕ್ ಗೆದ್ದ ಅರ್ಜುನ್ ರಮೇಶ್?
ಹೆಚ್ಚು ಓಟ್ ಪಡೆದ ನಾಲ್ಕು ಮಂದಿಗೆ ಕ್ಯಾಪ್ಟೆನ್ಸಿ ಟಾಸ್ಕ್ ನೀಡಲಾಯಿತು. ಈ ಟಾಸ್ಕ್ನಲ್ಲಿ ನಂದಿನಿ, ಸೋಮಣ್ಣ, ಚೈತ್ರಾ, ಅರ್ಜುನ್ ಭಾಗಿಯಾಗಿದ್ದಾರೆ. ವೃತ್ತದಲ್ಲಿ ನಂಬರ್ಗಳನ್ನು ಇಟ್ಟು. ಆ ನಂಬರ್ಗಳಲ್ಲಿ ಹೆಚ್ಚು ನಂಬರ್ ಸಂಗ್ರಹಿಸುವ ಸ್ಪರ್ಧಿ ಮನೆಯ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಟಾಸ್ಟ್ ಇತ್ತು. ಇದರಲ್ಲಿ ಎಲ್ಲರೂ ಸ್ಪೋರ್ಟಿವ್ ಆಗಿ ಆಟವಾಡಿದ್ದಾರೆ. ದೈಹಿಕವಾಗಿ ತೊಂದರೆ ಆದರೂ ಆಟವಾಡಿ ಪಟ್ಟು ಬಿಡದೇ ಎಲ್ಲರೂ ಟಾಸ್ಕ್ ಆಡಿದ್ದಾರೆ. ಈ ಆಟ ಅರ್ಧಕ್ಕೆ ನಿಂತರೂ ಮನೆಯ ಕ್ಯಾಪ್ಟನ್ ಆಗಿ ಅರ್ಜುನ್ ಆಯ್ಕೆಯಾಗಿದ್ದಾರೆ.
ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಅರ್ಜುನ್!
ಬಿಗ್ ಬಾಸ್ ಮನೆಗೆ ಬರುವ ಸ್ಪರ್ಧಿಗಳಲ್ಲಿ ಮನೆಯ ಕ್ಯಾಪ್ಟನ್ ಯಾರಾಗುತ್ತಾರೆ ಎನ್ನು ಕುತೂಹಲ ಒಂದು ಕಡೆ ಆದರೆ, ಕ್ಯಾಪ್ಟೆನ್ ಆಗುವ ಆಸೆ ಮನೆಯ ಎಲ್ಲರಿಗೂ ಇದ್ದೇ ಇರುತ್ತದೆ. ಮನೆಯಲ್ಲಿ ಎಲ್ಲರೂ ಕ್ಯಾಪ್ಟನ್ ಆಗುವ ತವಕದಲ್ಲಿ ಇರುತ್ತಾರೆ. ಆಟದ ಬರದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ ಅರ್ಜುನ್. ಹಾಗಾಗಿ ಅರ್ಧಕ್ಕೆ ಈ ಆಟವನ್ನು ನಿಲ್ಲಿಸಲಾಗಿತ್ತು. ಹಾಗಾಗಿ ಮನೆಯ ಕ್ಯಾಪ್ಟೆನ್ ಯಾರಾಗುತ್ತಾರೆ ಎನ್ನುವ ಕುತೂಹಲ ಇತ್ತು. ಅದಕ್ಕೆ ಬಿಗ್ ಬಾಸ್ ಉತ್ತರ ಕೊಟ್ಟದ್ದು. ಆಟದಲ್ಲಿ ಹೆಚ್ಚು ನಂಬರ್ ಕಲೆಕ್ಟ್ ಮಾಡಿದ ಅರ್ಜುನ್ ರಮೇಶ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.