Don't Miss!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- News ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದರು; ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada OTT: 'ಮದುವೆ ಆದ ವ್ಯಕ್ತಿ ಜೊತೆ ಸಂಬಂಧದಲ್ಲಿದ್ದೆ': ಅವರಿಗೆ ಕ್ಯಾನ್ಸರ್ ಬಂದ್ರೂ ಜೊತೆಲಿದ್ದೆ!
ಬಿಗ್ ಬಾಸ್ ಕನ್ನಡ ಓಟಿಟಿ ಹಿಂದೆಂದಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟಿದೆ ಅನ್ನೋದು ಎರಡೇ ದಿನದಲ್ಲಿ ಗೊತ್ತಾಗುತ್ತಿದೆ. ಮನೆಯೊಳಗೆ ಎಂಟ್ರಿ ಕೊಟ್ಟಿರೋ ಸ್ಪರ್ಧಿಗಳು ಪ್ರತಿ ದಿನ ಗುಟ್ಟುಗಳನ್ನು ಬಿಟ್ಟು ಕೊಡುತ್ತಿದ್ದಾರೆ. ಒಬ್ಬೊಬ್ಬರ ಕಥೆನೂ ಒಂದೊಂದು ರೀತಿ ವಿವಾದ ಹುಟ್ಟಿಸುವಂತೆಯೇ ಇದೆ.
ವೀಕ್ಷಕರಿಗೆ ಇದೂವರೆಗೂ ನೋಡಿರದ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಓಟಿಟಿಯಲ್ಲಿ ಸಿಗಬಹುದು ಎನಿಸುತ್ತಿದೆ. ಮನೆಯೊಳಗಿರುವ ಸ್ಪರ್ಧಿಗಳೂ ಕೂಡ ತಮ್ಮೊಳಗೆ ಅಡಗಿ ಕೂತಿದ್ದ ಸೀಕ್ರೆಟ್ಗಳನ್ನು ಕ್ಯಾಮರಾ ಮುಂದೆ ಬಿಚ್ಚಿಡುತ್ತಿದ್ದಾರೆ.
Jayashree Aradhya: ಮಾರಿಮುತ್ತು ಮೊಮ್ಮಗಳು ಜಯಶ್ರೀ ಆರಾಧ್ಯ 12ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ!
ಸದ್ಯ ಮಾರಿಮುತ್ತು ಖ್ಯಾತಿಯ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು ತಮ್ಮ ಬದುಕಿನ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಷಯವೇ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟ ರಹಸ್ಯವೇನು? ಆ ಬಗ್ಗೆ ಚರ್ಚೆಯಾಗುತ್ತಿರೋದು ಯಾಕೆ? ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕೆ ಮುಂದೆ ಓದಿ.
ಜಯಶ್ರೀ ಆರಾಧ್ಯ ಬಿಚ್ಚಿಟ್ಟ ಗುಟ್ಟೇನು?
ಈ ಬಾರಿ ಬಿಗ್ ಬಾಸ್ ಓಟಿಟಿಯಲ್ಲಿ ಹಲ್ಚಲ್ ಎಬ್ಬಿಸೋ ಹಾಗೇ ಹಾಗೆ ಕಾಣಿಸುತ್ತಿದೆ. ಮನೆಯೊಳಗಿರುವ 16 ಸ್ಪರ್ಧಿಗಳೂ ಎರಡೇ ದಿನಕ್ಕೆ ಒಂದೊಂದು ಸೀಕ್ರೆಟ್ ಬಿಟ್ಟುಕೊಡುತ್ತಿದ್ದಾರೆ. ಇವರಲ್ಲಿ ಜಯಶ್ರೀ ಆರಾಧ್ಯ ತಮ್ಮ ಬದುಕಿನಲ್ಲಿ ನಡೆದ ಘಟನೆಯನ್ನು ಉಳಿದ ಸ್ಪರ್ಧಿಗಳ ಮುಂದೆ ಇಟ್ಟಿದ್ದಾರೆ. ಅಂದ್ಹಾಗೆ ಜಯಶ್ರೀ ಆರಾಧ್ಯ ಮದುವೆಯಾದ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಇದ್ದರಂತೆ. ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ.
ದುಡ್ಡಿಗೋಸ್ಕರ ಅವರೊಂದಿಗಿರಲಿಲ್ಲ
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಬಗ್ಗೆ ಹೇಳಿಕೊಳ್ಳುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಕಥೆ. ಈ ಮಧ್ಯೆ ಜಯಶ್ರೀ ಆರಾಧ್ಯ ಸ್ಪರ್ಧಿಗಳ ಮುಂದೆ ತಮ್ಮ ಬದುಕಿನ ಒಂದು ಭಾಗವನ್ನು ತೆರೆದಿಟ್ಟಿದ್ದಾರೆ. 'ಮದುವೆಯಾದ ವ್ಯಕ್ತಿಯ ಜೊತೆ ನಾನು ಸಂಬಂಧದಲ್ಲಿದ್ದೆ. ಸುಮಾರು ಎರಡು ವರ್ಷಗಳ ಕಾಲ ಅವರೊಂದಿಗೆ ಇದ್ದೆ. ಹಾಗಂತ ನಾನು ಹಣಕ್ಕಾಗಿ ಅವರೊಂದಿಗೆ ಇರಲಿಲ್ಲ. ಅವರಿಗೆ ನನ್ನ ಸಪೋರ್ಟ್ ಬೇಕಿತ್ತು. ನನಗೆ ಅವರದ್ದು. ಅದಕ್ಕಾಗಿ ಜೊತೆಯಲ್ಲಿದ್ದೆವು." ಎಂದು ಜಯಶ್ರೀ ಆರಾಧ್ಯ ಹೇಳಿಕೊಂಡಿದ್ದಾರೆ.
ಕ್ಯಾನ್ಸರ್ ಬಂದರೂ ಬಿಡಲಿಲ್ಲ
ಮದುವೆಯಾದ ವ್ಯಕ್ತಿ ಜೊತೆ ಸಂಬಂಧದಲ್ಲಿ ಇದ್ದ ವೇಳೆನೇ ಜೂಜು ಆಡುವುದನ್ನು ಕಲಿತಿದ್ದರಂತೆ. ಸುಮಾರು ಒಂದೂವರೆ ವರ್ಷ ಜೂಜು ಅಡಿದ್ದೇನೆ ಎಂದು ಜಯಶ್ರೀ ಆರಾಧ್ಯ ಹೇಳಿಕೊಂಡಿದ್ದಾರೆ. ಬಳಿಕ ಅದನ್ನೂ ಬಿಟ್ಟಿದ್ದೇನೆ ಎಂದೂ ಹೇಳಿದ್ದಾರೆ. ಆ ವ್ಯಕ್ತಿಗೆ ಕ್ಯಾನ್ಸರ್ ಬಂದಿತ್ತು. ಆಗಲೂ ಅವರನ್ನು ಬಿಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ತುಂಬಾ ಕಷ್ಟದಲ್ಲಿ ಇದ್ದಿದ್ದರಿಂದ ಅವರನ್ನು ಬಿಡಲಿಲ್ಲ ಎಂದಿದ್ದಾರೆ.
ಜಯಶ್ರೀ ಆರಾಧ್ಯ 12ನೇ ಸ್ಪರ್ಧಿ
ಜಯಶ್ರೀ ಆರಾಧ್ಯ ಬಿಗ್ ಬಾಸ್ ಮನೆಯೊಳಗೆ 12ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದರು. ಉಪೇಂದ್ರ ಸಿನಿಮಾದಲ್ಲಿ ಮಾರಿಮುತ್ತು ಪಾತ್ರದಲ್ಲಿ ನಟಿಸಿದ ಪೋಷಕ ಕಲಾವಿದೆಯ ಮೊಮ್ಮಗಳು ಈಕೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಆದರೆ, ಇವರಿಗೆ ಕೈ ಹಿಡಿದಿದ್ದು ಉದ್ಯಮ. ಸೋಶಿಯಲ್ ಮೀಡಿಯಾ ಹಾಗೂ ತಮ್ಮದೇ ಉದ್ಯಮದಲ್ಲಿ ಜಯಶ್ರೀ ಆರಾಧ್ಯ ಜನಪ್ರಿಯರಾಗಿದ್ದಾರೆ. ಈ ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯರಾಗುತ್ತಿದ್ದಾರೆ.
Recommended Video