Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Bigg Boss Kannada OTT Live: ಆಬಿಗ್ಬಾಸ್ನಲ್ಲಿ ಶುರುವಾಯ್ತು ಹೊಸ ಲವ್ ಸ್ಟೋರಿ
ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ಮತ್ತೆ ಬಂದಿದೆ. ಆದರೆ ಈ ಬಾರಿ ತುಸು ಭಿನ್ನ ಮಾಧ್ಯಮದಲ್ಲಿ. ಕಳೆದ ಎಂಟು ಸೀಸನ್ಗಳಿಂದ ಟಿವಿಯಲ್ಲಿ ಪ್ರಸಾರವಾಗಿದ್ದ ಬಿಗ್ಬಾಸ್ ಇಂದಿನಿಂದ (ಆಗಸ್ಟ್ 06) ವೂಟ್ ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಹಿಂದಿ ಹೊರತುಪಡಿಸಿದರೆ ಇನ್ನಾವ ಭಾರತೀಯ ಭಾಷೆಯ ಬಿಗ್ಬಾಸ್ ಸಹ ಒಟಿಟಿಯಲ್ಲಿ ಪ್ರಸಾರವಾಗಿರಲಿಲ್ಲ. ಒಟಿಟಿಯಲ್ಲಿ 24*7 ಲೈವ್ನಲ್ಲಿ ಪ್ರಸಾರವಾಗಲಿರುವ ಮೊದಲ ಪ್ರಾದೇಶಿಕ ಭಾಷೆಯ ಬಿಗ್ಬಾಸ್ ಎಂಬ ಶ್ರೇಯ ಕನ್ನಡದ್ದಾಗಲಿದೆ. ಟಿವಿ ರಿಯಾಲಿಟಿ ಶೋ ನಿರೂಪಣೆ ಮೂಲಕ ದೊಡ್ಡ ಅಭಿಮಾನಿ ವರ್ಗ ಸಂಪಾದಿಸಿರುವ ಸುದೀಪ್ ಅವರೇ ಒಟಿಟಿಯ ಶೋ ಅನ್ನೂ ನಿರೂಪಣೆ ಮಾಡಲಿದ್ದಾರೆ.
ಇಂದು (ಆಗಸ್ಟ್ 06) ರ ಸಂಜೆ 07 ಗಂಟೆಗೆ ಬಿಗ್ಬಾಸ್ ಕನ್ನಡ ಒಟಿಟಿ ಲೈವ್ ಪ್ರಸಾರ ಕಾರಣಲಿದೆ. ವೂಟ್ನಲ್ಲಿ ಈ ಶೋ ಅನ್ನು ವೀಕ್ಷಿಸಬಹುದಾಗಿದೆ. ತಪ್ಪಿದಲ್ಲಿ, ಫಿಲ್ಮಿಬೀಟ್ನ ಈ ಲೈವ್ ಪುಟದಲ್ಲಿ ಬಿಗ್ಬಾಸ್ ಕನ್ನಡ ಒಟಿಟಿ ವೇದಿಕೆಯ ಮೇಲೆ ನಡೆಯುವ ಬೆಳೆವಣಿಗೆಗಳ ಕ್ಷಣ-ಕ್ಷಣದ ಲೈವ್ ಅಪ್ಡೇಟ್ಗಳು, ಸ್ಪರ್ಧಿಗಳು, ಸ್ಪರ್ಧಿಗಳ ಹಿನ್ನೆಲೆ, ಬಿಗ್ಬಾಸ್ ಮನೆಯ ವೈಶಿಷ್ಟ್ಯ ಇನ್ನಿತರೆ ವಿಷಯಗಳನ್ನು ಓದಬಹುದಾಗಿದೆ.
-
ಬಿಗ್ಬಾಸ್ ಸೀಸನ್ 9 ರ ಎರಡನೇ ಸ್ಪರ್ಧಿಯಾಗಿ ನಟಿ ಮಯೂರಿ ಆಗಮಿಸಿದ್ದಾರೆ. ಡ್ಯಾನ್ಸ್ ಮಾಡುವ ಮೂಲಕ ವೇದಿಕೆ ಏರಿದ ಮಯೂರಿಯವರನ್ನು ಕಿಚ್ಚ ಸುದೀಪ್ ಸ್ವಾಗತಿಸಿದರು. 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮಯೂರಿ, ಆ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು, ಇದೀಗ 'ಬಿಗ್ಬಾಸ್'ಗೆ ಬಂದಿದ್ದಾರೆ. ತಮ್ಮ ಒಂದುವರೆ ವರ್ಷದ ಮಗನನ್ನು ಬಿಟ್ಟು ಬರುತ್ತಿರುವುದು ಕಷ್ಟ ಎಂದು ಮಯೂರಿ ಹೇಳಿದ್ದಾರೆ.
-
''ನಮ್ಮಿಬ್ಬರ ಜೋಡಿ ಹೇಗಿರುತ್ತೆ? ನಮ್ಮ ಜಾತಕ ಹೊಂದಾಣಿಕೆ ಆಗುತ್ತಾ? ಎಂದು ಸ್ಪೂರ್ತಿ ಗೌಡ ಆರ್ವರ್ಧನ್ ಗುರೂಜಿಯನ್ನು ಕೇಳಿದ್ದಾರೆ. ನನಗಿದು ಮೊದಲ ಲವ್ ಎಂದೆಲ್ಲ ಸ್ಪೂರ್ತಿ, ಆರ್ಯವರ್ಧನ್ ಬಳಿ ಹೇಳಿದ್ದಾರೆ. ರಾಕೇಶ್ ಸಹ ಸ್ಪೂರ್ತಿ ಗೌಡ ಕೈ ಹಿಡಿದುಕೊಂಡು ಜಾತಕ ಹೇಳುವಂತೆ ನಟಿಸಿ ಪ್ರೀತಿ-ಪ್ರೇಮದ ಮಾತುಗಳನ್ನಾಡಿದ್ದಾರೆ. ಈ ಜೋಡಿಯ ಲವ್ ಸ್ಟೋರಿ ಎಲ್ಲಿಗೆ ತಲುಪುತ್ತದೆಯೋ ನೋಡಬೇಕು.
-
ಬಿಗ್ಬಾಸ್ ಕನ್ನಡ ಒಟಿಟಿಯಲ್ಲಿ ಹೊಸದೊಂದು ಲವ್ ಸ್ಟೋರಿ ಪ್ರಾರಂಭವಾಗುವ ಸೂಚನೆ ಸಿಕ್ಕಿದೆ. ನಟ ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಗೌಡ ನಡುವೆ ಲವ್ ಸ್ಟೋರಿ ಶುರುವಾಗುವ ಹಂತದಲ್ಲಿದೆ.
-
ಸ್ಪೂರ್ತಿ ಗೌಡಗೆ ವಿಶೇಷ ಟಾಸ್ಕ್ ಒಂದನ್ನು ಬಿಗ್ಬಾಸ್ ನೀಡಿದಂತಿದೆ. ಅದರಂತೆ ಆರ್ಯವರ್ಧನ್ ಗುರೂಜಿ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ ಸ್ಪೂರ್ತಿ ಗೌಡ. ನೀವು ವಯಸ್ಸಿನಲ್ಲಿ ಸ್ವಲ್ಪ ಚಿಕ್ಕವರಾಗಿದ್ದಿದ್ದರೆ ನಾನು ನಿಮಗೆ ಲೈನ್ ಹೊಡೆಯುತ್ತಿದ್ದೆ ಎಂದಿದ್ದಾರೆ. ಆರ್ವರ್ಧನ್ ಗುರೂಜಿ ಶೇವ್ ಮಾಡಿಕೊಂಡಿದ್ದಕ್ಕೆ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದೀರ ಎಂದಿದ್ದಾರೆ. ಇದಕ್ಕೆಲ್ಲಾ ರಾಕೇಶ್ ಅಡಿಗ ಸಹಾಯ ಸಹ ಮಾಡುತ್ತಿದ್ದಾರೆ. ಸ್ಪೂರ್ತಿ ಗೌಡರ ಬಲೆಗೆ ಆರ್ಯವರ್ಧನ್ ಬೀಳುತ್ತಾರಾ ನೋಡಬೇಕಿದೆ.
-
ಬಿಗ್ಬಾಸ್ ಮನೆಯಲ್ಲಿ ನಾಮಿನೇಶನ್ ಗುಮ್ಮ ಬಂದಿದ್ದು, ಆರ್ಯವರ್ಧನ್ ಗುರೂಜಿ ಸೇರಿದಂತೆ ಸೋನು ಶ್ರೀನಿವಾಸ್ ಗೌಡ ಹಾಗೂ ಹಲವರು ನಾಮಿನೇಟ್ ಆಗಿದ್ದಾರೆ. ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದು ಎಂಟರಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ.
-
ಒಟ್ಟು ಹದಿನಾರು ಜನ ವಿವಿಧ ವ್ಯಕ್ತಿತ್ವದ ಸ್ಪರ್ಧಿಗಳನ್ನು ಸುದೀಪ್ ಬಿಗ್ಬಾಸ್ ಮನೆಯ ಒಳಗೆ ಕಳಿಸಿದ್ದಾರೆ. ಒಬ್ಬರಿಗೊಬ್ಬರು ತಮ್ಮ ತಮ್ಮ ಪರಿಚಯಗಳನ್ನು ಮಾಡಿಕೊಳ್ಳುತ್ತಿದ್ದಾರೆ.
-
ಒಟ್ಟು ಹದಿನಾರು ಜನ ವಿವಿಧ ವ್ಯಕ್ತಿತ್ವದ ಸ್ಪರ್ಧಿಗಳನ್ನು ಸುದೀಪ್ ಬಿಗ್ಬಾಸ್ ಮನೆಯ ಒಳಗೆ ಕಳಿಸಿದ್ದಾರೆ.
-
ಬಿಗ್ಬಾಸ್ ಒಟಿಟಿ ಕನ್ನಡದ ಕೊನೆಯ ಸ್ಪರ್ಧಿಯಾಗಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಬಿಗ್ಬಾಸ್ ವೇದಿಕೆ ಏರಿದ್ದಾರೆ. ಸೆಲೆಬ್ರಿಟಿ ಪತ್ರಕರ್ತ ಎಂದು ಜನ ಹೇಳುತ್ತಾರೆ ಆದರೆ ನಾನು ಒಬ್ಬಂಟಿ ಎಂದಿದ್ದಾರೆ ಸೋಮಣ್ಣ ಮಾಚಿಮಾಡ. ಕಾಲೇಜಿನಲ್ಲಿ ಓದುವಾಗ ಪೇಪರ್ ಹಾಕುತ್ತಿದ್ದುದ್ದನ್ನು ನೆನಪು ಮಾಡಿಕೊಂಡ ಮಾಚಿಮಾಡ, ಪದವಿಯಲ್ಲಿ ಫೇಲ್ ಆಗಿದ್ದನ್ನು ನೆನಪು ಮಾಡಿಕೊಂಡರು. ಮದುವೆ ಮುರಿದುದ್ದು ಬಹಳ ಬೇಸರದ ಸಂಗತಿ ಎಂದು ಮಾಚಿಮಾಡ ಹೇಳಿದ್ದಾರೆ. ತಮ್ಮದೇ ವಿಟಿ ನೋಡಿ ಸೋಮಣ್ಣ ಮಾಚಿಮಾಡ ಕಣ್ಣೀರು ಸಹ ಹಾಕಿದ್ದಾರೆ. ತಮ್ಮ ಮದುವೆ ತುಸು ಕಾಂಪ್ಲೆಕೇಟೆಡ್ ಆಗಿದೆ ಎಂದಿದ್ದಾರೆ ಸೋಮಣ್ಣ.
-
ಹದಿನಾಲ್ಕನೇ ಕಂಟೆಸ್ಟ್ ಆಗಿ ಫುಟ್ಬಾಲ್ ಆಟಗಾರ್ತಿ ನಂದು ಹಾಗೂ ಮಾಡೆಲ್ ಆಗಿರುವ ಜಸ್ವಂತ್ ಜೋಡಿಗಳಿಬ್ಬರು ಒಟ್ಟಿಗೆ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಎಂಟಿವಿ ರೋಡೀಸ್ನಲ್ಲಿ ಇಬ್ಬರು ಭಾಗವಹಿಸಿ ಅಲ್ಲಿ ಒಬ್ಬರು ಗೆದ್ದರೆ ಇನ್ನೊಬ್ಬರು ರನ್ನರ್ ಅಪ್ ಆದರು. ಈಗ ದಕ್ಷಿಣ ಭಾರತದಲ್ಲಿ ಹೆಸರು ಮಾಡಲೆಂದು ಇಲ್ಲಿಗೆ ಬಂದಿದ್ದಾರೆ.
-
ಹದಿಮೂರನೇ ಕಂಟೆಸ್ಟ್ ಆಗಿ ಬಿಗ್ಬಾಸ್ ಮೇಲೆ ವೇದಿಕೆ ಮೇಲೆ ಬಂದವರು ಅರ್ಜುನ್ ರಮೇಶ್. ನಟ, ರಾಜಕಾರಣಿ ಎರಡೂ ಆಗಿರುವ ಅರ್ಜುನ್ ರಮೇಶ್ ಪುರಸಭಾ ಸದಸ್ಯರಾಗಿದ್ದಾರೆ. ಸಿನಿಮಾ ಹಾಗೂ ರಾಜಕಾರಣ ಎರಡನ್ನೂ ಬೇರೆ-ಬೇರೆ ಆಗಿಟ್ಟಿದ್ದೇನೆ. ಅವರು ಮಾಡಿದ ಶಿವನ ಪಾತ್ರ ಅವರನ್ನು ಬದಲಾಯಿಸಿತಂತೆ. ರಾಜಕೀಯ ಹಾಗೂ ನಟನಾ ವೃತ್ತಿ ಎರಡರಲ್ಲೂ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮ ಜೀವದ ಗೆಳೆಯರನ್ನು ಪರಿಚಯಿಸಿದರು.
-
ಹನ್ನೆರಡನೇ ಸ್ಪರ್ಧಿಯಾಗಿ ನಟಿ, ಮಾಜಿ ಡಾನ್ ಮಾರಿಮುತ್ತು ಮೊಮ್ಮಗಳು ಜಯಶ್ರೀ ಆಗಮಿಸಿದ್ದಾರೆ. ಮಾರಿಮುತ್ತು ಮೊಮ್ಮಗಳಾಗಿದ್ದರೂ ಅಜ್ಜಿಗೂ ಮೊಮ್ಮಗಳಿಗೂ ಅಜಗಜಾಂತರ ವ್ಯತ್ಯಾಸ. ಎಂಜಿನಿಯರ್ ಆಗಬೇಕು ಎಂದುಕೊಂಡಿದ್ದವರು, ಅಜ್ಜಿಯನ್ನು ಆದರ್ಶವಾಗಿಟ್ಟುಕೊಂಡು ನಟನೆ ಪ್ರಯತ್ನಿಸಿದರು. ಅದಕ್ಕಾಗಿ ಮನೆ ಬಿಟ್ಟು ಸಹ ಬಂದಿದ್ದರು. ನಂತರ ಕಾಸ್ಮೆಟಿಕ್ ಉದ್ಯಮಕ್ಕೆ ಸಹ ಕಾಲಿಟ್ಟರು. ಈಗ ಚೆನ್ನಾಗಿ ಉದ್ಯಮ ನಡೆಸುತ್ತಿದ್ದಾರೆ. ಮೂರು ಬ್ರ್ಯಾಂಚ್ ಮಾಡಿದ್ದಾರೆ. ಜನ ನನ್ನನ್ನು ಗುರುತಿಸುವುದು ನನಗೆ ಇಷ್ಟ ಅದೇ ಕಾರಣಕ್ಕೆ ಬಹುಷಃ ಬಿಗ್ಬಾಸ್ಗೆ ಬಂದಿದ್ದೇನೆ ಎಂದಿದ್ದಾರೆ ಜಯಶ್ರೀ.
-
ನಟ ಕಿರಣ್ ರಾಜ್ ಅವರು ಉದಯ್ ಅವರನ್ನು ಬಿಗ್ಬಾಸ್ ಮನೆಗೆ ಕಳಿಸಿಕೊಡಲು ಬಂದಿದ್ದು, ಉದಯ್ಗೆ ಶುಭಾಶಯ ತಿಳಿಸಿದರು. ಮುಂಬೈನಲ್ಲಿ ಸುದೀಪ್ಗೆ ಇರುವ ಅಭಿಮಾನಿ ವರ್ಗದ ಬಗ್ಗೆ ಸಣ್ಣ ಕತೆಯೊಂದನ್ನು ಸಹ ಹೇಳಿದರು.
-
ಹನ್ನೊಂದನೇ ಸ್ಪರ್ಧಿಯಾಗಿ ಉದಯ್ ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೂಲ ಕನ್ನಡಿಗರಲ್ಲದೇ ಇದ್ದರು ಕನ್ನಡವನ್ನು ಚೆನ್ನಾಗಿ ಮಾತನಾಡುವ ಉದಯ್, ನಟನೆ ಮಾಡುತ್ತಾರೆ. ಪುಟ್ಟಗೌರಿ ಮದುವೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಬಿಗ್ಬಾಸ್ ಆಡಿಷನ್ನಲ್ಲಿ ಪಾಲ್ಗೊಂಡಿದ್ದ ಉದಯ್ ಅಲ್ಲಿಂದ ವಾಪಸ್ ಬಂದಿದ್ದರು. ಈಗ ಬಿಗ್ಬಾಸ್ ನವರೇ ಉದಯ್ ಅನ್ನು ಕರೆದಿದ್ದಾರೆ. ಗೆದ್ದೇ ಹೊರಗೆ ಬರುತ್ತೀನಿ ಎಂಬ ನಂಬಿಕೆಯಲ್ಲಿದ್ದಾರೆ ಉದಯ್.
-
ಹತ್ತನೇ ಸ್ಪರ್ಧಿಯಾಗಿ ನಟಿ ಚೈತ್ರಾ ಹಳ್ಳಿಕೆರೆ ಮನೆ ಪ್ರವೇಶಿಸಿದ್ದಾರೆ. ರಂಗಭೂಮಿ ಕಲಾವಿದೆ ಆಗಿದ್ದ ಚೈತ್ರಾ. ಮಾಡೆಲಿಂಗ್ ಮಾಡಿದ್ದಾರೆ ನಂತರ ಸಿನಿಮಾಗಳಲ್ಲಿಯೂ ನಟಿಸಿದರು. ಒಳ್ಳೆ-ಒಳ್ಳೆ ಸಿನಿಮಾಗಳ ಅವಕಾಶ ಬಂದಿತ್ತು. ಆದರೆ ಅದೇ ಸಮಯದಲ್ಲಿ ಮದುವೆಯಾಗಿ ಸಿನಿಮಾದಿಂದ ದೂರವಾದರು. ಆದರೆ ಮದುವೆಯಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಕಾರಣ ಪತಿಯಿಂದ ದೂರಾಗಿದ್ದಾರೆ. ಇಬ್ಬರು ಮಕ್ಕಳಿರುವ ಚೈತ್ರಾ ಈಗ ಮತ್ತೊಮ್ಮೆ ಜೀವನ ಶುರು ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಬಿಗ್ಬಾಸ್ಗೆ ಬಂದಿದ್ದಾರೆ.
-
ಒಂಬತ್ತನೇ ಸ್ಪರ್ಧಿಯಾಗಿ ಮಾಡೆಲ್ ಕಿರಣ್ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಬಾಲ್ಯ ವಿವಾಹದಿಂದ ತಪ್ಪಿಸಿಕೊಳ್ಳಲು ಮನೆ ಬಿಟ್ಟು ಓಡಿ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟುಕೊಂಡಿದ್ದಾರೆ ಈ ಚೆಲುವೆ. ಏಳನೇ ವಯಸ್ಸಿನಲ್ಲೇ ಮದುವೆ ಮಾಡಲು ನೋಡಿದ್ದರು, ಆಗ ಮನೆ ಬಿಟ್ಟು ಹೋಟೆಲ್ನಲ್ಲಿ ಕೆಲಸ ಮಾಡಿದರು. 25 ರಲ್ಲಿ ಪ್ರವಾಸ ಮಾಡಿದರು. ಬೆಲ್ಲಿ ಡ್ಯಾನ್ಸ್ ಕ್ಲಾಸ್ ಸೇರಿಕೊಂಡರು. ಯಾವುದೋ ಚಿತ್ರ ಹಂಚಿಕೊಂಡು ಅದನ್ನು ನೋಡಿ ಮಾಡೆಲಿಂಗ್ಗೆ ಕರೆದರು. ಡ್ಯಾನ್ಸರ್ ಆಗಿಯೂ ಜನ ಇವರನ್ನು ಗುರಿತಿಸುತ್ತಾರೆ. ನನ್ನ ನಗು ಮುಖದ ಸಾಕಷ್ಟು ಗಟ್ಟಿ ವ್ಯಕ್ತಿತ್ವ ಇದೆ ಎಂದಿದ್ದಾರೆ ಕಿರಣ್.
-
ಸುದೀಪ್ ಜೊತೆ ಮಾತನಾಡಿದ ರಾಕೇಶ್ ಅಡಿಗ, ಈ ಹಿಂದಿನ ರಾಕೇಶ್ ಅಡಿಗ ಇಲ್ಲಿಲ್ಲ ಹೊಸ ರಾಕೇಶ್ ಆಗಿ ಬಂದಿದ್ದೇನೆ ಎಂದಿದ್ದಾರೆ. ಬಿಗ್ಬಾಸ್ ನಲ್ಲಿ ಯಾರಾದರೂ ಸಿಕ್ಕರೆ? ಎಂದು ಸುದೀಪ್ ಪ್ರಶ್ನೆ ಮಾಡಿದ್ದಕ್ಕೆ, ನಾನು ಎಲ್ಲದಕ್ಕೂ ಓಪನ್ ಆಗಿದ್ದೇನೆ ಎಂದಿದ್ದಾರೆ ರಾಕೇಶ್.
-
ಎಂಟನೇ ಸ್ಪರ್ಧಿಯಾಗಿ ನಟ ರಾಕೇಶ್ ಅಡಿಗ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. 13 ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದಾರೆ. ಸಾಕಷ್ಟು ಏರಿಳಿತಗಳನ್ನು ರಾಕೇಶ್ ಅಡಿಗ ಚಿತ್ರರಂಗದಲ್ಲಿ ಕಂಡಿದ್ದಾರೆ. ರಾಕೇಶ್ ಅಡಿಗ ಮಾದಕ ವ್ಯಸನಿ ಎಂಬ ಮಾತುಗಳು ಇವೆ ಅದನ್ನು ಸುಳ್ಳು ಮಾಡಲು ಬಿಗ್ಬಾಸ್ಗೆ ಬಂದಿದ್ದೇನೆ ಎಂದಿದ್ದಾರೆ ರಾಕೇಶ್ ಅಡಿಗ.
-
ಎಂಟನೇ ಸ್ಪರ್ಧಿಯಾಗಿ ಉತ್ತರ ಕರ್ನಾಟಕದ ಅಕ್ಷತಾ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಪಟ-ಪಟನೇ ಮಾತನಾಡುವ ಅಕ್ಷತಾ ಮೂಲತಃ ದಾಂಡೇಲಿಯವರು. ಚೆನ್ನಾಗಿ ಕಲಿಯುತ್ತಿದ್ದ ಅಕ್ಷತಾ, ಫ್ಯಾಷನ್ ಶೋ ಒಂದರ ಸ್ಟೇಜ್ ಹತ್ತಿದ ಮೂಲಕ ಬಣ್ಣದ ಲೋಕದ ಸೆಳೆತಕ್ಕೆ ಒಳಪಟ್ಟರು. ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಗ್ಬಾಸ್ ನಲ್ಲಿ ಭಾಗವಹಿಸುವ ಆಸಕ್ತಿ ಮೊದಲಿನಿಂದಲೂ ಅಕ್ಷತಾ ಇತ್ತಂತೆ.
-
ಲೋಕೇಶ್ ಅವರು ಮೂಕನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಮನೆಯಲ್ಲಿರುವವರೆಲ್ಲ ಲೋಕೇಶ್ ಅವರನ್ನು ಮೂಕನೆಂದು ಈಗಾಗಲೇ ನಂಬಿಬಿಟ್ಟಿದ್ದಾರೆ. ಟೇಬಲ್ ಮೇಲೆ ಬೆರಳಲ್ಲಿ ಬರೆದು ತಮ್ಮ ಹೆಸರು, ಕುಟುಂಬದ ಹೆಸರನ್ನು ಲೋಕೇಶ್ ಬರೆದು ತೋರಿಸುತ್ತಿದ್ದಾರೆ.
-
ಏಳನೇ ಸ್ಪರ್ಧಿ ಲೋಕೇಶ್ ಅವರಿಗೆ ಸುದೀಪ್ ಒಳ್ಳೆಯ ಸಲಹೆ ನೀಡಿದ್ದಾರೆ. ಒಂದು ದಿನದ ಕಾಲ ನೀವು ಮೂಗನ ರೀತಿ ನಟನೆ ಮಾಡು, ಒಳಗಿರುವವರಿಗೆ ಮೂಗ ಎಂದು ನಂಬಿಸು ಎಂದು ಹೇಳಿಕೊಟ್ಟಿದ್ದಾರೆ. ಓಕೆ ಎಂದಿದ್ದಾರೆ ಲೋಕೇಶ್.
-
ಆರನೇ ಸ್ಪರ್ಧಿಯಾಗಿ ಹಾಸ್ಯ ಕಲಾವಿದ ಲೋಕೇಶ್ ಮನೆ ಒಳಗೆ ಪ್ರವೇಶಿಸಿದ್ದಾರೆ. ಬಹಳ ಕರುಣಾಜನಕ ಹಿನ್ನೆಲೆಯನ್ನು ಲೋಕೇಶ್ ಹೊಂದಿದ್ದಾರೆ. ಭಿಕ್ಷೆ ಬೇಡಿಕೊಂಡು ಜೀವನ ಮಾಡಿದ ಲೋಕೇಶ್. ಕಬ್ಬನ್ ಪಾರ್ಕ್ನಲ್ಲಿ ಜಂಟಿಯಾಗಿ ಬಂದ ಜೋಡಿಗಳನ್ನು ಡಿಸ್ಟರ್ಬ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು. ಕೊನೆಗೆ ಡಾನ್ ಬಾಸ್ಕೊ ತಂಡ ಲೋಕೇಶ್ ಅವರನ್ನು ಕರೆದುಕೊಂಡು ಅವರಿಗೆ ಹೊಸ ಜೀವನ ನೀಡಿತು. ನಟನೆ, ಚಿತ್ರಕಲೆ ಎಲ್ಲವನ್ನೂ ಮಾಡಿದ್ದಾರೆ.
-
ಫಿಗರ್ ಗುರು ಅಂತ ನೋಡ್ಬೇಡಿ, ಮನುಷ್ಯಳಾಗಿ ನೋಡಿ ಎಂದು ಪವರ್ಫುಲ್ ಸಂದೇಶದ ಜೊತೆಗೆ ನಟಿ ನವ್ಯಾ ಐಯ್ಯರ್ ಮನೆಯ ಒಳಗೆ ಹೋಗಿದ್ದಾರೆ.
-
ಐದನೇ ಸ್ಪರ್ಧಿಯಾಗಿ ನಟಿ, ನೃತ್ಯಗಾರ್ತಿ ಸಾನ್ಯಾ ಐಯ್ಯರ್ ಬಿಗ್ಬಾಸ್ ಮನೆಗೆ ಪ್ರವೇಶಿಸುತ್ತಿದ್ದಾರೆ. ಕವಯಿತ್ರಿ ಆಗಿರುವ ಸಾನ್ಯಾ ಐಯ್ಯರ್ ಒಳ್ಳೆಯ ಡ್ಯಾನ್ಸರ್ ಸಹ ಹೌದು. ಸಣ್ಣ ವಯಸ್ಸಿನಲ್ಲೇ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಸಣ್ಣ ವಯಸ್ಸಿನ ಪುಟ್ಟಗೌರಿಯಾಗಿ ನಟಿಸಿದ್ದಾರೆ. ಇವರ ತಾಯಿ ಸಿಂಗಲ್ ಮದರ್ ಆಗಿದ್ದಾರೆ. ತಂದೆ ಎಲ್ಲಿ, ತಂದೆ ಯಾರು ಎಂಬ ಬಗ್ಗೆ ಅವರು ಎದುರಿಸಿರುವ ಪ್ರಶ್ನೆಗಳು ಅವರಿಗೆ ಬಹಳ ಬೇಸರ ತರಿಸಿವೆಯಂತೆ.
-
ಬಿಗ್ಬಾಸ್ ಮನೆಗೆ ಇದೀಗ ನಾಲ್ಕು ಜನ ಸೇರಿದ್ದಾಗಿದೆ. ಯಾರಿಗೆ ಅಡುಗೆ ಬರುತ್ತದೆ ಎಂಬ ಬಗ್ಗೆ ಚರ್ಚೆ ಸಾಗಿದೆ. ಈ ವರೆಗೆ ಬಂದವರೆಲ್ಲ ನಮಗೆ ಅಡುಗೆ ಬರದು ಎಂದಿದ್ದಾರೆ. ಇದರ ಜೊತೆಗೆ ಬಿಗ್ಬಾಸ್ ಮನೆಯಲ್ಲಿ ವಾಶ್ ರೂಂ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ.
-
ನಾಲ್ಕನೇ ಸ್ಪರ್ಧಿಯಾಗಿ ತೀರ್ಥಳ್ಳಿ ಹುಡುಗಿ ಸ್ಪೂರ್ತಿ ಗೌಡ. ಕೆಲವು ಧಾರಾವಾಹಿಗಳು ಹಾಗೂ ಪ್ಯಾಟೆ ಹುಡ್ಗಿ ಹಳ್ಳಿಗೆ ಬಂದ್ರು ಶೋ ಸೇರಿದಂತೆ ಇನ್ನೂ ಕೆಲವು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಕೆಟ್ಟ ಅಭ್ಯಾಸ ಎಂದರೆ ಎಲ್ಲದನ್ನೂ ಅರ್ಧಕ್ಕೆ ಬಿಟ್ಟು ಬರುತ್ತಾರಂತೆ. ಬಿಗ್ಬಾಸ್ ಶೋ ಸಹ ಅರ್ಧಕ್ಕೆ ಬಿಟ್ಟು ಹೋಗುತ್ತಾರೊ ಕಾದು ನೋಡಬೇಕು.
-
ಸಿಗರೇಟು ಸೇದಿ ಸೇದಿ ನನ್ನ ಧ್ವನಿ ಹೀಗಾಗಿಬಿಟ್ಟಿದೆ ಎಂದು ಸೋನು ಗೌಡ, ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿ ಬಳಿ ಹೇಳಿದರು. ಆದರು ನಾನು ಸಿಗರೇಟು ಹಾಗೂ ಮದ್ಯ ಸೇವಿಸುವುದಿಲ್ಲ ಎಂದು ರೂಪೇಶ್ ಹೇಳಿದರು. ಆ ನಂತರ ರೂಪೇಶ್ ಶೆಟ್ಟಿ ಒಂದು ಚುಟುಕು ಕವನವನ್ನು ಹೇಳಿದರು.
-
'ಗಿರ್ಗಿಟ್' ತುಳು ಸಿನಿಮಾದಲ್ಲಿ ನಟಿಸಿರುವ ಆರ್ಜೆ ಆಗಿರುವ ರೂಪೇಶ್ ಶೆಟ್ಟಿಯನ್ನು ಮೂರನೇ ಸ್ಪರ್ಧಿಯಾಗಿ ಆಹ್ವಾನಿಸಿದರು ಸುದೀಪ್. 32 ವರ್ಷದ ರೂಪೇಶ್ ಶೆಟ್ಟಿ ಇನ್ನೂ ಮದುವೆಯಾಗಿಲ್ಲ. ಏನಾದರೂ ಒಂದು ವಿಶೇಷವಾಗಿ ಮಾಡಬೇಕೆಂಬ ಆಸೆಯಲ್ಲಿ ಹಲವು ಯತ್ನಗಳನ್ನು ಮಾಡಿರುವ ರೂಪೇಶ್, ಆರ್ಜೆ ಆಗಿದ್ದಾರೆ, ಆಲ್ಬಂ ಹಾಡು ಮಾಡಿದ್ದಾರೆ, ಸಿನಿಮಾ ಮಾಡಿದ್ದಾರೆ ಎಲ್ಲದರಲ್ಲೂ ಅಲ್ಪ ಯಶಸ್ಸನ್ನಂತೂ ಕಂಡಿದ್ದಾರೆ ಆದರೆ ಸೋತಿಲ್ಲ.
-
ಎರಡನೇ ಸ್ಪರ್ಧಿಯಾಗಿ ಇನ್ಸ್ಟಾಗ್ರಾಂ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಅವರನ್ನು ಸುದೀಪ್ ಆಹ್ವಾನಿಸಿದರು. ಸೋನು ಶ್ರೀನಿವಾಸ್ ಗೌಡ ಅವರ ವಿಟಿಯನ್ನು ವೇದಿಕೆಯಲ್ಲಿ ಪ್ರಸಾರ ಮಾಡಲಾಯ್ತು. ತಮಗೆ ನಾಯಕಿ ಆಗಬೇಕೆಂಬ ಆಸೆಯಿತ್ತು ಎಂಬುದನ್ನು ಸೋನು ಗೌಡ ಹೇಳಿಕೊಂಡರು. ತಮ್ಮ ಹೆಸರು ಶಾಂಭವಿ ಎಂದಿತ್ತು, ನಂತರ ಯಾರೊ ನನ್ನನ್ನು ಸೋನು ಎಂದು ಕರೆದರು. ಅದು ಇಷ್ಟವಾಯಿತು ಅದನ್ನೇ ಹೆಸರಾಗಿ ಇಟ್ಟುಕೊಂಡೆ. ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಮಾಡುತ್ತಾರೆ ಎಂದಿದ್ದಾರೆ. ಫೋನ್ ಬಿಟ್ಟು ಇರುವುದು ಕಷ್ಟ ಎಂಬುದನ್ನು ಸಹ ಅವರು ಒಪ್ಪಿಕೊಂಡಿದ್ದರು.
-
ಮೊದಲ ಸ್ಪರ್ಧಿಯಾಗಿ ಜ್ಯೋತಿಷಿಯಾಗಿ ಒಳಹೋದ ಆರ್ಯವರ್ಧನ್ ಚಪ್ಲಲಿ ಹೊರಗೆ ಬಿಟ್ಟು ಒಳಗೆ ಹೋಗಿ, ಹೋಗುತ್ತಲೇ ಅಲ್ಲಿದ್ದ ದೇವರಿಗೆ ನಮಿಸಿ ಊದುಬತ್ತಿ ಹೊತ್ತಿಸಿದರು. ಅಲ್ಲದೆ ಅಲ್ಲಿದ್ದ ಕ್ಯಾಮೆರಾಗೆ ಸಹ ಪೂಜೆ ಮಾಡಿದರು. ಆ ನಂತರ ಅಡುಗೆ ಮನೆಗೆ ಹೋಗಿ ಅಲ್ಲಿಯೂ ಪೂಜೆ ಮಾಡಿದರು. ಬಿಗ್ಬಾಸ್ ಮನೆಯ ಕೊನೆ ತುತ್ತು ನಾನೇ ತಿನ್ನಬೇಕು ಎಂದರು.
-
ಮಗಳನ್ನು ಬಹಳ ಪ್ರೀತಿಸುವುದಾಗಿ ಹೇಳಿದ ಆರ್ಯವರ್ಧನ್, ಮಗಳನ್ನು ವೇದಿಕೆ ಕರೆದು ಅಪ್ಪಿಕೊಂಡರು. ಮಗಳನ್ನು ಬಿಟ್ಟು ಹೋಗಬೇಕಲ್ಲ ಎಂದ ಕಣ್ಣೀರು ಹಾಕಿದರು. ಕ್ರಿಕೆಟ್ ನೋಡುತ್ತಾ ನೋಡುತ್ತಾ ನಾನು ಜ್ಯೋತಿಷಿ ಕಲಿತೆ. ಕ್ರಿಕೆಟ್ ಆಟ ನೋಡುತ್ತಾ ಅದರ ಸಂಖ್ಯೆಗಳನ್ನು ಗಮನಿಸುತ್ತಾ ಗಮನಿಸುತ್ತಾ ನಾನು ಅದರ ಅಧ್ಯಯನ ಮಾಡಿದೆ. ಸಚಿನ್ ಹುಟ್ಟಿದ ದಿನದ ಅಧ್ಯಯನ ಮಾಡಿದೆ ಹಾಗೇ ಮಾಡುತ್ತಾ ಮಾಡುತ್ತಾ ಕ್ರಿಕೆಟ್ ಬಗ್ಗೆ ಹೆಚ್ಚು ಜ್ಯೋತಿಷ್ಯ ಹೇಳಿದೆ ನಾನು ಹೇಳಿದ್ದೆಲ್ಲವೂ ಯಶಸ್ವಿಯಾಗಿದೆ ಎಂದರು.
-
ಬಿಗ್ಬಾಸ್ ಒಟಿಟಿ ಕನ್ನಡದ ಮೊದಲ ಸ್ಪರ್ಧಿ ಆರ್ಯವರ್ಧನ್ ಅನ್ನು ವೇದಿಕೆಗೆ ಆಹ್ವಾನಿಸಿದ್ದಾರೆ. ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಕುರಿತ ವಿಟಿ ಪ್ರಸಾರವಾಗಿದ್ದು, 'ನಂಬರ್ ಅಂದ್ರೆ ನಾನು ನಾನು ಅಂದ್ರೆ ನಂಬರ್' ಎಂದಿದ್ದಾರೆ. ತಾನು ಕ್ರಿಕೆಟ್ ಆಟದ, ವಿನಾಶಗಳ ಬಗ್ಗೆಯೂ ನಾನು ಭವಿಷ್ಯ ಹೇಳುತ್ತೇನೆ. ಜೀರೋ ಬ್ಯಾಲೆನ್ಸ್ ಅವನನ್ನು ಕೋಟ್ಯಧಿಪತಿ ಮಾಡುತ್ತೇನೆ ನಾನು ಎಂದಿದ್ದಾರೆ.
-
ವಾಸುಕಿ ವೈಭವ್ ಅನ್ನು ಮನೆ ಒಳಕ್ಕೆ ಕರೆದುಕೊಂಡು ಹೋಗಿ ಮನೆಯನ್ನೆಲ್ಲ ಒಂದು ರೌಂಡ್ ಹೊಡೆದು ಬಂದರು ಸುದೀಪ್. ಮನೆ ಚೆನ್ನಾಗಿದೆ ಎಂದರು.
-
ಬಿಗ್ಬಾಸ್ ಒಟಿಟಿ ಕನ್ನಡ ಸೀಸನ್ 1 ಅಧಿಕೃತವಾಗಿ ಚಾಲನೆಗೊಂಡಿದೆ. ವೂಟ್ನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಸುದೀಪ್ ವೇದಿಕೆಗೆ ಆಗಮಿಸಿದ್ದು, ಒಟಿಟಿ ಹಾಗೂ ಟಿವಿ ಬಿಗ್ಬಾಸ್ ನಡುವಿನ ಅಂತರದ ಬಗ್ಗೆ ಹೇಳಿದರು.
-
ನಟ ರಾಕೇಶ್ ಅಡಿಗ ಸಹ ಬಿಗ್ಬಾಸ್ ಮನೆಗೆ ಹೋಗುವುದು ಬಹುತೇಕ ಖಚಿತವಾಗಿದೆ. 'ಜೋಶ್' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪರಿಚಿತವಾದ ರಾಕೇಶ್ ಅಡಿಗ ಆ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಅರ್ಬಲ್ ಲ್ಯಾಡ್ಸ್' ಮೂಲಕ ಕನ್ನಡಕ್ಕೆ ಮೊದಲ ರ್ಯಾಪ್ ನೀಡಿದ ಶ್ರೇಯ ಸಹ ಅವರದ್ದೇ. ಇದೀಗ ರಾಕೇಶ್ ಅಡಿಗ ಬಿಗ್ಬಾಸ್ ಮನೆ ಪ್ರವೇಶಿಸಲಿದ್ದಾರೆ.
-
ಮಿಮಿಕ್ರಿ ಕಲಾವಿದ ಗೋಪಿನಾಥ್ ಸಹ ಬಿಗ್ಬಾಸ್ ಕನ್ನಡ ಒಟಿಟಿ ಸೀಸನ್ 1ಕ್ಕೆ ಪ್ರವೇಶ ಪಡೆದಿದ್ದಾರೆ. ರಾಜಕೀಯ ವ್ಯಕ್ತಿಗಳ ಮಿಮಿಕ್ರಿ ಮಾಡುವುದರಲ್ಲಿ ಗೋಪಿನಾಥ್ ಪರಿಣಿತರು. ಕಿರುತೆರೆಯ ಹಲವು ಶೋಗಳಲ್ಲಿ ಸಹ ಗೊಪಿನಾಥ್ ಭಾಗವಹಿಸಿದ್ದಾರೆ. ಇವರು ಬಿಗ್ಬಾಸ್ ಮನೆಯಲ್ಲಿ ಪಕ್ಕಾ ಮನೊರಂಜನೆ ಒದಗಿಸಲಿದ್ದಾರೆ.
-
ಬಿಗ್ಬಾಸ್ ಕನ್ನಡ ಒಟಿಟಿಯ ಸೀಸನ್ ಒಂದರಲ್ಲಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಸೋಮಣ್ಣ ಮಾಚಿಮಾಡ ಸಿನಿಮಾ ಪತ್ರಿಕೋದ್ಯಮದ ಮೂಲಕ ಜನಪ್ರಿಯರಾದವರು. ಹಲವು ನಟ-ನಟಿಯರ ಸಂದರ್ಶನಗಳನ್ನು ಮಾಡಿರುವ ಅವರು ನ್ಯೂಸ್ ಫರ್ಸ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
-
ಬಿಗ್ಬಾಸ್ ಕನ್ನಡ ಒಟಿಟಿಯ ಮೊದಲ ಮೂರು ಸ್ಪರ್ಧಿಗಳಾಗಿ ಜ್ಯೋತಿಷಿ ಆರ್ಯವರ್ಧನ್, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ ಗೌಡ ಮತ್ತು ತುಳು ನಟ ರೂಪೇಶ್ ಶೆಟ್ಟಿ ಮನೆಯೊಳಗೆ ಹೋಗಿದ್ದಾರೆ.
-
ಬಿಗ್ಬಾಸ್ ಮನೆಯ ಮೂರನೇ ಸ್ಪರ್ಧಿಯಾಗಿ ತುಳು ಮತ್ತು ಕೊಂಕಣಿ ಸಿನಿಮಾಗಳಲ್ಲಿ ನಟಿಸಿರುವ ರೂಪೇಶ್ ಶೆಟ್ಟಿ ಮನೆ ಪ್ರವೇಶಿಸಿದ್ದಾರೆ. ಬಿಗ್ಬಾಸ್ ವೇದಿಕೆ ಏರುತ್ತಲೇ ತಮ್ಮದೇ ಭಾಷೆಯಲ್ಲಿ ಎಲ್ಲರಿಗೂ ಧನ್ಯವಾದ ಹೇಳಿದ ಇವರು ಸುದೀಪ್ ಅನ್ನು ಆಶ್ಚರ್ಯಚಕಿತಗೊಳಿಸಿದರು. ಮಂಗಳೂರು ಮೂಲದ ಇವರು ಆರ್ಜೆ ಸಹ ಆಗಿದ್ದಾರೆ.
-
ಬಿಗ್ಬಾಸ್ನ ಎರಡನೇ ಸ್ಪರ್ಧಿಯಾಗಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ ಗೌಡ ಮನೆ ಪ್ರವೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಿರು ವಿಡಿಯೋಗಳ ಮೂಲಕ ಸೋನು ಶ್ರೀಣಿವಾಸ ಗೌಡ ಬಹಳ ಜನಪ್ರಿಯ.
-
ಬಿಗ್ಬಾಸ್ ಕನ್ನಡ ಒಟಿಟಿಯ ಮೊದಲ ಸ್ಪರ್ಧಿ ಆರ್ಯವರ್ಧನ್ ಗುರೂಜಿಯನ್ನು ಸುದೀಪ್ ಪರಿಚಯಿಸಿದ್ದಾರೆ. ಜ್ಯೋತಿಷಿ ಆಗಿರುವ ಆರ್ಯವರ್ಧನ್, ತಮ್ಮ ಬಿಡು ಬೀಸು ರೀತಿಯ ಮಾತುಗಳಿಗೆ ಜನಪ್ರಿಯರು. ಆರ್ಸಿಬಿ ಬಗ್ಗೆ ಭವಿಷ್ಯ ಹೇಳಿ ಆರ್ಯವರ್ಧನ್ ಸಖತ್ ಟ್ರೋಲ್ ಆಗಿದ್ದರು.
-
ಬಿಗ್ಬಾಸ್ ಒಟಿಟಿಯ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಮನೆ ಸೇರಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
-
ಬಿಗ್ಬಾಸ್ ಮಾಜಿ ಸ್ಪರ್ಧಿ, ಸಂಗೀತಗಾರ ವಾಸುಕಿ ವೈಭವ್, ಇಂದಿನ ಬಿಗ್ಬಾಸ್ ಉದ್ಘಾಟನೆ ಶೋನ ಅತಿಥಿಯಾಗಿದ್ದು ವೇದಿಕೆ ಮೇಲೆ ಬಿಗ್ಬಾಸ್ ಒಟಿಟಿಗಾಗಿ ಹಾಡೊಂದನ್ನು ಹಾಡಿದ್ದಾರೆ.
-
ಬಿಗ್ಬಾಸ್ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ವೂಟ್ನಲ್ಲಿ 'ಬಿಗ್ಬಾಸ್ ಕರ್ಟನ್ ರೈಸರ್' ಹೆಸರಿನಲ್ಲಿ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿದ್ದು, ಬಿಗ್ಬಾಸ್ನ ಈ ಹಿಂದಿನ ಸೀಸನ್ಗಳ ವಿನ್ನರ್ಗಳನ್ನು ಕರೆಸಿ ಸಂದರ್ಶನ ಮಾಡಲಾಗಿದೆ. ವಿಜಯ ರಾಘವೇಂದ್ರ, ಶಶಿ, ಒಳ್ಳೆ ಹುಡುಗ ಪ್ರಥಮ್, ಚಂದನ್ ಶೆಟ್ಟಿ, ಶ್ರುತಿ, ಮಂಜು ಪಾವಗಡ ಇನ್ನೂ ಹಲವರ ಸಂದರ್ಶನ ಮಾಡಲಾಗಿದ್ದು, ಅವರು ಬಿಗ್ಬಾಸ್ ಮನೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
-
ನಿನ್ನೆ ಸಂಜೆಯಿಂದಲೇ ಬಿಗ್ಬಾಸ್ ಕನ್ನಡ ಒಟಿಟಿಯ ಚಿತ್ರೀಕರಣ ಜಾರಿಯಲ್ಲಿದೆ. ನಿನ್ನೆ ಮಧ್ಯರಾತ್ರಿವರೆಗೆ ಚಿತ್ರೀಕರಣ ನಡೆದಿದೆ. ಮತ್ತೆ ಇಂದು ಬೆಳಿಗ್ಗಿನಿಂದಲೂ ಚಿತ್ರೀಕರಣ ನಡೆಯುತ್ತಿದೆ. ಆ ಎಲ್ಲ ದೃಶ್ಯಾವಳಿಗಳನ್ನು ಇಂದು ಸಂಜೆಯಿಂದ ವೂಟ್ನಲ್ಲಿ ಪ್ರಸಾರ ಮಾಡಲಾಗುವುದು.
-
ಸುದೀಪ್, ಬಿಗ್ಬಾಸ್ ಮನೆಯ ಒಳಗೆ ಪ್ರವೇಶಿಸಿ, ಮನೆಯನ್ನೆಲ್ಲ ನೋಡಿ, ವೀಕ್ಷಕರಿಗೆ ಮನೆಯ ಪರಿಚಯ ಮಾಡಿಸಿರುವ ವಿಡಿಯೋವನ್ನು ನಿನ್ನೆ ರಾತ್ರಿಯೇ ವೂಟ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷವೆಂದರೆ ಬಿಗ್ಬಾಸ್ ಮನೆಯ ಒಳಗೆ, ಸುದೀಪ್ ಜೊತೆಗೆ ವಾಸುಕಿ ವೈಭವ್ ಸಹ ಹೋಗಿದ್ದರು.
-
ಬಿಗ್ಬಾಸ್ ಕನ್ನಡ ಒಟಿಟಿ ಇಂದು ಸಂಜೆ ಅಧಿಕೃತವಾಗಿ ಆರಂಭವಾಗಲಿದೆ. ಆದರೆ ಈಗಾಗಲೇ ಬಿಗ್ಬಾಸ್ನ ಉದ್ಘಾಟನೆ ಕಾರ್ಯಕ್ರಮದ ಚಿತ್ರೀಕರಣ ಮುಗಿದಿದ್ದು ಸ್ಪರ್ಧಿಗಳ ಪರಿಚಯದ ಭಾಗದ ಚಿತ್ರೀಕರಣವನ್ನೂ ಮಾಡಲಾಗಿದೆ.