Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್ಬಾಸ್ ಮನೆಯ ಹೆಣ್ಮಕ್ಳ ದೂರು
ಬಿಗ್ಬಾಸ್ ಮನೆಯಲ್ಲಿ ಹೈಪರ್ ಆಕ್ಟಿವ್ ಸದಸ್ಯ ಎಂದೇ ಖ್ಯಾತಿಯಾಗಿರುವ ಉದಯ್ ಸೂರ್ಯ ವಿರುದ್ದ ಗಂಭೀರ ಆರೋಪ ಮನೆಯ ಕೆಲವು ಹೆಣ್ ಮಕ್ಳು ಮಾಡಿದ್ದಾರೆ.
ಉದಯ್ ಸೂರ್ಯ, ಹಿಂದಿನಿಂದ ಬಂದು ತಬ್ಬಿಕೊಳ್ಳುತ್ತಾನೆ ಕಿವಿಯ ಬಳಿ ಮುತ್ತು ಕೊಡ್ತಾನೆ ಎಂದು ಸಾನ್ಯಾ ಐಯ್ಯರ್ ಮೊದಲಿಗೆ ನಂದು ಬಳಿ ಹೇಳಿದರು. ಬಳಿಕ ನಂದು ಸಹ ಅದೇ ಅನುಭವ ನನಗೂ ಆಗಿದೆ. ಜಶ್ವಂತ್ ಎದುರು ಸಹ ನನಗೆ ಮಾಡಿದ. ನಾನಂತೂ ಕೆಲವು ಬಾರಿ ಆತನಿಂದ ತಪ್ಪಿಸಿಕೊಂಡಿದ್ದೇನೆ ಎಂದಿದ್ದಾರೆ.
ಅಕ್ಷತಾ ಸಹ ಇದೇ ಬಗ್ಗೆ ನೇರವಾಗಿ ಉದಯ್ ಜೊತೆ ಮಾತನಾಡಿದ್ದಾರೆ. ಉದಯ್, ತಮ್ಮನ್ನು ಹಿಂದಿನಿಂದ ತಬ್ಬಿಕೊಂಡು ಕಿವಿಗೆ ಮುತ್ತುಕೊಟ್ಟಿದ್ದನ್ನೇ ಉದಾಹರಣೆಯಾಗಿ ಇಟ್ಟುಕೊಂಡು, ತಪ್ಪು ತಿಳಿದುಕೊಳ್ಳಬೇಡ, ನೀನು ಹೀಗೆ ಹಿಂದಿನಿಂದ ತಬ್ಬಿಕೊಳ್ಳುತ್ತೀಯಲ್ಲ ಅದನ್ನು ಮನೆಯ ಜನ ತಪ್ಪಾಗಿ ತಿಳಿದುಕೊಳ್ಳಬಹುದು. ಬೇರೆಯವರು ನಿನ್ನ ಬಗ್ಗೆ ಹಾಗೆ ಮಾತನಾಡುವುದು ಇಷ್ಟವಿಲ್ಲ ಅದಕ್ಕೆ ಇದನ್ನು ನಿನಗೆ ಹೇಳಿದೆ ಎನ್ನುತ್ತಾರೆ.
ಇದನ್ನು ಕೇಳಿಸಿಕೊಂಡ ಉದಯ್ ಬೇಸರ ಮಾಡಿಕೊಳ್ಳುತ್ತಾರೆ. ಸಾನಿಯಾ ಸಹ ಉದಯ್ ಜೊತೆ ಇದರ ಬಗ್ಗೆ ನೇರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ನಾಳೆ ಸುದೀಪ್ ಬೇರೆ ಬರಲಿದ್ದಾರೆ, ಉದಯ್ರ ಈ ಅಭ್ಯಾಸದ ಬಗ್ಗೆ ಸುದೀಪ್ ಏನು ಹೇಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ.
ಎರಡನೇ ವಾರ ಮುಗಿಯುತ್ತಾ ಬಂದಿದೆ. ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಚಾಲ್ತಿಯಲ್ಲಿದೆ. ಕ್ಯಾಪ್ಟೆನ್ಸಿ ಟಾಸ್ಕ್ಗೆ ಕಂಟೆಸ್ಟೆಂಟ್ಗಳಾಗಿ ಚೈತ್ರಾ, ಜಸ್ವಂತ್ ಹಾಗೂ ಆರಾಧ್ಯ ಆಯ್ಕೆಯಾಗಿದ್ದಾರೆ. ಯಾರು ಕ್ಯಾಪ್ಟೆನ್ಸಿ ಟಾಸ್ಕ್ಗೆ ಆಯ್ಕೆಯಾಗುತ್ತಾರೊ ಅವರ ನಡುವೆ ಸ್ಪರ್ಧೆ ನಡೆಯಲಿದೆ.
ಅರ್ಜುನ್ರ ಕ್ಯಾಪ್ಟೆನ್ಸಿ ಅವಧಿ ಮುಗಿದಿದ್ದು, ಇದೀಗ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಿದೆ. ಸುದೀಪ್ ಅವರು ನಾಳೆ ಸಂಜೆ ಬರುವ ವೇಳೆಗೆ ಹೊಸ ಕ್ಯಾಪ್ಟನ್ ಆಯ್ಕೆ ಆಗಿರುತ್ತದೆ. ಮತ್ತು ಈ ವಾರದ ಕಳಪೆ ಆಟಗಾರ ಯಾರು ಎಂಬುದು ನಿಶ್ಚಯ ಆಗುವ ಜೊತೆಗೆ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಸಹ ನಿಶ್ಚಯ ಆಗಲಿದೆ.