Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'Why I killed Gandhi' ಚಿತ್ರವನ್ನು ಬ್ಯಾನ್ ಮಾಡುವಂತೆ ಕಾಂಗ್ರೆಸ್ ಒತ್ತಡ: ಸಿನಿಮಾ ವರ್ಕರ್ಸ್ನಿಂದ ಮೋದಿಗೆ ಪತ್ರ
1948, ಜನವರಿ 30 ಭಾರತಕ್ಕೆ ಕರಾಳ ದಿನ. ದೇಶದ ಇತಿಹಾಸದಲ್ಲೊಂದು ಕಪ್ಪು ಚುಕ್ಕೆ. ಇದು ಮಹಾತ್ಮಾ ಗಾಂಧಿಯನ್ನು ನಾಥುರಾಮ್ ಗೋಡ್ಸೆ ಗುಂಡಿಕ್ಕಿ ಕೊಂದ ದಿನ. ಈ ದಿನದಂದೇ, ಅಂದರೆ, 2022 ಜನವರಿ 30ನೇ ತಾರೀಕಿನಂದು ಮಹಾತ್ಮಾ ಗಾಂಧಿ ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆಯ ಚರಿತ್ರೆಯನ್ನು ಆಧರಿಸಿದ ಸಿನಿಮಾ ಬಿಡುಗಡೆಗೆ ಸಜ್ಜಾಗದೆ. ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಆ ಸಿನಿಮಾವೇ 'ವೈ ಐ ಕಿಲ್ಡ್ ಗಾಂಧಿ'.
'ವೈ ಐ ಕಿಲ್ಡ್ ಗಾಂಧಿ' ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ವಿಚಾರವಾಗಿ ಮತ್ತೆ ವಿವಾದಗಳು ಎದ್ದಿವೆ. ಜನವರಿ 30ರಂದು ರಿಲೀಸ್ಗೆ ಸಜ್ಜಾಗಿದ್ದ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದು ಕೂತಿದೆ. ಇನ್ನೊಂದೆಡೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಈ ಚಿತ್ರವನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದೆ.
'ವೈ ಐ ಕಿಲ್ಡ್ ಗಾಂಧಿ' ಬ್ಯಾನ್ ಮಾಡಲು ಮೋದಿಗೆ ಪತ್ರ
2022, ಜನವರಿ 30 ರಂದು ಬಿಡುಗಡೆ ಸಜ್ಜಾಗಿರುವ 'ವೈ ಐ ಕಿಲ್ಡ್ ಗಾಂಧಿ' ಸಿನಿಮಾವನ್ನು ಸಂಪೂರ್ಣ ಬಂದ್ ಮಾಡುವಂತೆ ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ಪ್ರಧಾನಿ ಮೋದಿಗೆ ಪತ್ರ ಬರೆದಿದೆ. 'ವೈ ಐ ಕಿಲ್ಡ್ ಗಾಂಧಿ' ಸಿನಿಮಾದಲ್ಲಿ ಮಹಾತ್ಮ ಗಾಂಧಿಯನ್ನು ಕೊಂದ ವ್ಯಕ್ತಿ ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಲಾಗಿದೆ. ಹೀಗಾಗಿ ಈ ಸಿನಿಮಾವನ್ನು ಸಂಪೂರ್ಣ ಬ್ಯಾನ್ ಮಾಡುವಂತೆ ಕೇಳಿಕೊಳ್ಳಲಾಗಿದೆ.
ನಾಥೂರಾಮ್ ಗೋಡ್ಸೆ ಗೌರವಕ್ಕೆ ಅರ್ಹನಲ್ಲ
" ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಚಿಕ್ಕದೊಂದು ಗೌರವಕ್ಕೂ ಅರ್ಹನಲ್ಲ. ಜನವರಿ 30, 1948ರಲ್ಲಿ ನಡೆದ ಕೃತ್ಯದ ಈ ಸಿನಿಮಾವೇನಾದರೂ ಬಿಡುಗಡೆಯಾದರೆ ಇಡೀ ದೇಶವೇ ದೊಡ್ಡ ಶಾಕ್ಗೆ ಒಳಗಾಗುತ್ತೆ." ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಸಿನಿಮಾ ಬ್ಯಾನ್ ಕಾಂಗ್ರೆಸ್ ಆಗ್ರಹ
'ವೈ ಐ ಕಿಲ್ಡ್ ಗಾಂಧಿ' ಸಿನಿಮಾ ಬಿಡುಗಡೆಯನ್ನು ಕಾಂಗ್ರೆಸ್ ಪಕ್ಷ ಕೂಡ ವಿರೋಧಿಸಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಮುಖಂಡ ನಾನಾ ಪಟೋಲ್ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯನ್ನು ಭೇಟಿ ಮಾಡಲಿದ್ದು, 'ವೈ ಐ ಕಿಲ್ಡ್ ಗಾಂಧಿ' ಸಿನಿಮಾವನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಇಕ್ಕಟಿಗೆ ಸಿಲುಕಿದ ಗೋಡ್ಸೆ ಪಾತ್ರಧಾರಿ
'ವೈ ಐ ಕಿಲ್ಡ್ ಗಾಂಧಿ' ಸಿನಿಮಾದಲ್ಲಿ ನಾಥೂರಾಮ್ ಗೋಡ್ಸೆ ಪಾತ್ರವನ್ನು ನಿರ್ವಹಿಸಿದ್ದ ಮರಾಠಿ ನಟ ಅಮೂಲ್ ಕೊಲ್ಹೆ. ಸದ್ಯ ಎನ್ಸಿಪಿ ಪಕ್ಷದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. 'ವೈ ಐ ಕಿಲ್ಡ್ ಗಾಂಧಿ' ಬಿಡುಗಡೆ ಸಜ್ಜಾಗುತ್ತಿದ್ದಂತೆ ಅಮೂಲ್ ಕೊಲ್ಹೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸ್ವಂತ ಪಕ್ಷದ ಸದಸ್ಯರೇ ಅಮೂಲ್ ಕೊಲ್ಹೆ ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ಸಂಸದ ಇಕ್ಕಟ್ಟಿಗೆ ಸಿಲುಕಿದ್ದು, ಟೀಕೆಗಳಿಂದ ತಪ್ಪಿಸಿಕೊಳ್ಳಬೇಕಾಗಿದೆ.