Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದ ಭ್ರಷ್ಟ ಕೋಟ್ಯಧಿಪತಿಗಳ ಕುರಿತಾದ 'ತನಿಖಾ ಡಾಕ್ಯುಮೆಂಟರಿ'ಗೆ ಕೋರ್ಟ್ ತಡೆ!
ವಿಜಯ್ ಮಲ್ಯ, ನೀರವ್ ಮೋದಿ, ಸುಬ್ರತೋ ರಾಯ್ ಇವರೆಲ್ಲ ಭಾರತದ ಕೋಟ್ಯಧಿಪತಿಗಳಲ್ಲಿ ಒಬ್ಬರಾಗಿದ್ದವರು. ಆದರೆ ಈಗ ಆರ್ಥಿಕ ಅಪರಾಧಿಗಳು.
ತಮ್ಮ ಚಾಕಚಕ್ಯತೆ, ಬುದ್ಧಿಶಕ್ತಿಯಿಂದ ಉದ್ಯಮದಲ್ಲಿ ಜಯಿಸಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದ ಮಲ್ಯ, ನೀರವ್ ಮೋದಿ ಅವರುಗಳು ಇಂದು ಬಂಧನ ಭೀತಿಯಿಂದ ನಡುಗುತ್ತಿದ್ದಾರೆ.
ಸಾಯಿ ಪಲ್ಲವಿ ಸಿನಿಮಾ ಖರೀದಿಗೆ ಮುಗಿಬಿದ್ದ ಒಟಿಟಿ
ಅರಸರಂತೆ ಬಾಳಿದ್ದ ವಿಜಯ್ ಮಲ್ಯ, ನೀರವ್ ಮೋದಿ ದೇಶದಿಂದಲೇ ಪರಾರಿಯಾಗಿ, ಅಜ್ಞಾತವಾಗಿ ಎಲ್ಲಿಯೋ ವಾಸಿಸುತ್ತಿದ್ದಾರೆ. ಇವರ ಈ ಸ್ಥಿತಿಗೆ ಕಾರಣವೇನು? ಅಷ್ಟು ದೊಡ್ಡ ಸಾಮ್ರಾಜ್ಯ ಒಮ್ಮೆಲೆ ಕುಸಿದಿದ್ದು ಹೇಗೆ? ಹೀಗೆ ಹಲವು ವಿಷಯಗಳನ್ನು ಒಳಗೊಂಡ ಡಾಕ್ಯುಮೆಂಟರಿ ಒಂದು ಬಿಡುಗಡೆ ಆಗಿದೆ.
The Social Dilemma: ಸ್ಮಾರ್ಟ್ಫೋನ್ ಉಳ್ಳವರು ನೋಡಲೇಬೇಕಾದ ಡಾಕ್ಯುಮೆಂಟರಿ
ಬ್ಯಾಡ್ಬಾಯ್ಸ್ ಬಿಲಿಯನೇರ್; ಇಂಡಿಯಾ ಬಿಡುಗಡೆ
ನೆಟ್ಫ್ಲಿಕ್ಸ್ ಒಟಿಟಿಯಲ್ಲಿ 'ಬ್ಯಾಡ್ಬಾಯ್ ಬಿಲಿಯನೇರ್; ಇಂಡಿಯಾ' ಎಂಬ ಡಾಕ್ಯುಮೆಂಟರಿ ಬಿಡುಗಡೆ ಆಗಿದೆ. ಈ ಡಾಕ್ಯುಮೆಂಟರಿ ಬಿಡುಗಡೆಗೆ ತಡೆ ನೀಡಬೇಕೆಂದು ಮೆಹುಲ್ ಚೋಕ್ಸಿ, ಬಿ ರಾಮಲಿಂಗ ರಾಜು, ಸುಬ್ರತೊ ರಾಯ್ ಅವರುಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ನಾಲ್ಕನೇ ಎಪಿಸೋಡ್ನಲ್ಲಿ ರಾಮಲಿಂಗ ರಾಜು ಕುರಿತ ಮಾಹಿತಿ
ಹಲವು ಎಪಿಸೋಡ್ಗಳನ್ನು ಈ ಡಾಕ್ಯುಮೆಂಟರಿ ಹೊಂದಿದ್ದು, ಒಂದೊಂದು ಎಪಿಸೋಡ್ನಲ್ಲಿ ಒಬ್ಬೊಬ್ಬ ಕೋಟ್ಯಧಿಪತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಾಲ್ಕನೇ ಎಪಿಸೋಡ್ನಲ್ಲಿ ಸತ್ಯಂ ಕಂಪ್ಯೂಟರ್ನ ರಾಮಲಿಂಗ ರಾಜು ಕುರಿತ ಮಾಹಿತಿ ಇದೆ.
ನ್ಯಾಯಾಲಯದಿಂದ ತಡೆ ತಂದ ರಾಮಲಿಂಗ ರಾಜು
ರಾಮಲಿಂಗಾ ರೆಡ್ಡಿ ಮತ್ತು ಇತರ ಕೆಲವರು ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ನಾಲ್ಕನೇ ಎಪಿಸೋಡ್ ಅನ್ನು ಬಿಡುಗಡೆ ಮಾಡದಂತೆ ಹೈದರಾಬಾದ್ನ ನ್ಯಾಯಾಲಯವು ತಡೆ ನೀಡಿದೆ. ಆದರೆ ನ್ಯಾಯಾಲಯದ ಆದೇಶದ ವಿರುದ್ಧ ನೆಟ್ಫ್ಲಿಕ್ಸ್ ಸಹ ನ್ಯಾಯಾಲಯಕ್ಕೆ ಹೋಗಲಿದೆ.
Recommended Video
ಮೂರು ಎಪಿಸೋಡ್ಗಳು ಮಾತ್ರವೇ ಬಿಡುಗಡೆ
ಪ್ರಸ್ತುತ ಮೂರು ಎಪಿಸೋಡ್ಗಳಷ್ಟೆ ಬಿಡುಗಡೆ ಆಗಿದ್ದು, ಮೊದಲನೇಯ ಎಪಿಸೋಡ್ನಲ್ಲಿ ವಿಜಯ್ ಮಲ್ಯ ಹಾಗೂ ಆತನ ಏಳು-ಬೀಳು. ಎರಡನೇ ಎಪಿಸೋಡ್ನಲ್ಲಿ ನೀರವ್ ಮೋದಿಯ ಏಳು-ಬೀಳು. ಮೂರನೇ ಎಪಿಸೋಡ್ನಲ್ಲಿ ಸುಬ್ರತೋ ರಾಯ್ ಕುರಿತು ಮಾಹಿತಿ ನೀಡಲಾಗಿದೆ.