Don't Miss!
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪತ್ರಕರ್ತನ ಪಾತ್ರದಲ್ಲಿ ನಾಗಚೈತನ್ಯ ಓಟಿಟಿಗೆ ಪದಾರ್ಪಣೆ!
ಕೆಲವು ವರ್ಷಗಳ ಕೆಳಗೆ ನಾಗಚೈತನ್ಯ ಹಾಗೂ ಸಮಂತಾ ಅವರದು ಮೋಸ್ಟ್ ರೊಮ್ಯಾಂಟಿಕ್ ಕಪಲ್ ಅಂತ ಕರೆಸಿಕೊಂಡ ಜೋಡಿ. ಪ್ರೀತಿಸಿ ಮದುವೆಯಾದ ಈ ಕಪಲ್ ನಡುವಿನ ತುಂಟಾಟ, ಕಾಲೆಳೆಯುವ ಮಾತುಗಳು, ಮುದ್ದಾಟಗಳನ್ನೆಲ್ಲ ಅವರ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದರು. ಆವಾಗಿನ ಅವರ ಲೈಫನ್ನ ಕಂಡವರು ಯಾರೂ ಈ ಜೋಡಿ ಬೇರ್ಪಡಬಹುದು ಅಂತ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಕಳೆದ ವರ್ಷ ಈ ಜೋಡಿ ಸಡನ್ನಾಗಿ ಬೇರ್ಪಟ್ಟಿತು. ಇದಕ್ಕೇನು ಕಾರಣ ಅನ್ನೋದನ್ನು ಈ ಇಬ್ಬರೂ ಬಾಯಿಬಿಟ್ಟು ಹೇಳಿಲ್ಲಾ. ಆದರೆ ಡಿವೋರ್ಸ್ ನಂತರ ಸಮಂತಾ ಮತ್ತು ನಾಗಜೈತನ್ಯ ಇಬ್ಬರು ತಮ್ಮ ತಮ್ಮ ಸಿನಿಮಾಗಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ.
ಶುರು ಶುರುವಿನಲ್ಲಿ ಇವರಿಬ್ಬರೂ ಬೇರ್ಪಡೋದಕ್ಕೆ ಸಮಂತಾನೇ ಕಾರಣ ಅಂತ ಈ ಜನಪ್ರಿಯ ನಟಿಯ ತೇಜೋವಧೆಯನ್ನೂ ಮಾಡಲಾಯ್ತು. ಆದರೆ ಸ್ವಲ್ಪ ದಿನದಲ್ಲೇ ಇದರಲ್ಲಿ ಸಮಂತಾಗಿಂತ ನಾಗಚೈತನ್ಯ ತಪ್ಪೇ ಹೆಚ್ಚಿದೆ ಅಂತ ಅನಿಸಿದ್ದೇ ಎಲ್ಲರೂ ಸೈಲೆಂಟಾದರು. ನಂತರ ನಾಗ ಚೈತನ್ಯ ಅವರ ಲವ್ ಸ್ಟೋರಿ ಸಿನಿಮಾ ರಿಲೀಸ್ ಆಗಿ ತಕ್ಕ ಮಟ್ಟಿಗೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಬಾಲಿವುಡ್ನಲ್ಲಿ ನಾಗ ಚೈತನ್ಯ ಡೆಬ್ಯೂ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಹೊರತಾಗಿ ಈಗ ನಾಗಚೈತನ್ಯ ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ನಾಗ ಚೈತನ್ಯ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದುವೇ ಓಟಿಟಿ ಎಂಟ್ರಿ.
ಹೌದು ನಾಗ ಚೈತನ್ಯ ಈ ವರ್ಷ ಓಟಿಟಿಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ವಿಕ್ರಮ್ ಕೆ. ಕುಮಾರ್ ನಿರ್ದೇಶಿಸಲಿರುವ ಸಾಹಸಮಯ ವೆಬ್ ಸರಣಿಯು ಶೀಘ್ರದಲ್ಲೇ ಸೆಟ್ಟೇರಲಿದೆ. ಮೂಲಗಳ ಪ್ರಕಾರ ಹಲವಾರು ಖಾಸಗೀ ಮ್ಯಾಗಝಿನ್ಗಳು ಈ ಬಗ್ಗೆ ಈಗಾಗಲೇ ವರದಿ ನೀಡಿದ್ದು ಶೀರ್ಷಿಕೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಖಾಸಗೀ ಮ್ಯಾಗಝಿನ್ಗಳ ಉಲ್ಲೇಖದ ಪ್ರಕಾರ ನಾಗ ಚೈತನ್ಯ ಡೆಬ್ಯು ಓಟಿಟಿ ವೆಬ್ ಸರಣಿಯ ಟೈಟಲ್ ಬಂದು 'ದೂತ' ಅಂದರೆ ಸಂದೇಶವಾಹಕ ಎಂಬ ಶೀರ್ಷಿಕೆಯ ಇರಲಿದೆ ಎಂದು ಅಂದಾಜಿಸಲಾಗಿದೆ.