Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಟಿಟಿಗಿಲ್ಲ ಸರ್ಕಾರದ ಮೂಗುದಾರ, ಟಿವಿ ಮಾಧ್ಯಮಗಳಿಗೆ ಸ್ವಯಂ ಲಗಾಮು
ಒಟಿಟಿ, ಆನ್ಲೈನ್ ಸುದ್ದಿ ಮಾಧ್ಯಮಗಳು, ಆನ್ಲೈನ್ ಕಂಟೆಂಟ್ ಡೆವೆಲಪರ್ಗಳು ಇನ್ನೂ ಹಲವನ್ನು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಧೀನಕ್ಕೆ ತರಲು ಆದೇಶಸ ಹೊರಡಿಸಲಾಗಿತ್ತು.
ಒಟಿಟಿ ಹಾಗೂ ಆನ್ಲೈನ್ ಕಂಟೆಂಟ್, ಸುದ್ದಿಗಳ ಮೇಲೆ ಇನ್ನು ಮುಂದೆ ಕೇಂದ್ರ ಸರ್ಕಾರವು ನಿಗಾ ವಹಿಸಲಿದೆ, ಆನ್ಲೈನ್ ಕಂಟೆಂಟ್ ಅನ್ನು ನಿಯಂತ್ರಿಸಲಿದೆ ಎನ್ನಲಾಗಿತ್ತು. ಇಂದು ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟನೆ ನೀಡಿದ್ದಾರೆ.
ಪ್ರಕಾಶ್ ಜಾವಡೇಕರ್ ಹೇಳಿರುವಂತೆ, ಒಟಿಟಿಗಳ ಮೇಲೆ ಅವುಗಳ ಕಂಟೆಂಟ್ಗಳ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂದಿದ್ದಾರೆ. ಆ ಮೂಲಕ ಒಟಿಟಿ ಕಂಟೆಂಟ್ ಮೇಲೆ ಸೆನ್ಸಾರ್ ಹೂಡಬೇಕು ಎನ್ನುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ.
ಒಟಿಟಿ ಕಂಟೆಂಟ್ ಮೇಲೆ ನಿಯಂತ್ರಣವಿಲ್ಲ
ಒಟಿಟಿ ಕಂಟೆಂಟ್ ನಿಯಂತ್ರಣ ಮಂಡಳಿ ಇರುವುದಿಲ್ಲ ಜೊತೆಗೆ ಒಟಿಟಿಗೆ ಸ್ವಯಂ ನಿಯಂತ್ರಣ ಮಂಡಳಿ ಸಹ ಇರುವುದಿಲ್ಲ. ಆದರೆ ಕಂಟೆಂಟ್ ತಯಾರಕರು ತಾವೇ ಸ್ವತಃ ಯೋಚಿಸಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳದೆ ಸಭ್ಯ ಕಂಟೆಂಟ್ ಅನ್ನು ನೀಡಬೇಕು ಎಂದಿದ್ದಾರೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್.
ನಿಗಾವಣೆ ಸಹ ಇರುವುದಿಲ್ಲ: ಪ್ರಕಾಶ್ ಜಾವಡೇಕರ್
ಒಟಿಟಿಗಳಲ್ಲಿ ಪ್ರಸಾರವಾಗುವ ಕಂಟೆಂಟ್ ಅನ್ನು ನಿಯಂತ್ರಿಸಲು ಯಾವುದೇ ಸಮಿತಿ ರಚಿಸಿಲ್ಲ, ಯಾವುದೇ ನಿಗಾವಣೆ ಸಹ ಇರುವುದಿಲ್ಲ. ಒಟಿಟಿ ಕಂಟೆಂಟ್ ಅನ್ನು ನಿಯಂತ್ರಣಕ್ಕೆ ಒಳಪಡಿಸುವಂತೆ ಸಾಕಷ್ಟು ಒತ್ತಾಯ ಸರ್ಕಾರದ ಮೇಲೆ ಬಂದಿತ್ತು ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಟಿವಿ ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ
ಟಿವಿ ಮಾಧ್ಯಮಗಳಿಗೂ ಸರ್ಕಾರದ ವತಿಯಿಂದ ಯಾವುದೇ ನಿಯಂತ್ರಣ ಅಥವಾ ನಿಗಾ ಇರುವುದಿಲ್ಲ. ಬದಲಿಗೆ ಟಿವಿ ಮಾಧ್ಯಮಗಳು ಒಟ್ಟಾಗಿ ಸ್ವಯಂ ನಿಯಂತ್ರಣ ಮಂಡಳಿಯೊಂದನ್ನು ಸ್ಥಾಪಿಸಿಕೊಂಡು ಅದರ ನಿಯಮಗಳಿಗೆ ಒಳಪಡಬೇಕು ಎಂದಿದ್ದಾರೆ ಪ್ರಕಾಶ್ ಜಾವಡೇಕರ್.
ಮಾಧ್ಯಮ ನಿಯಂತ್ರಣಕ್ಕೆ ಒತ್ತಡವಿತ್ತು: ಜಾವಡೇಕರ್
ಮುಂದುವರೆದು, ನ್ಯಾಯಮೂರ್ತಿ ಎಕೆ ಶಿಕ್ರಿ ಸಮಿತಿ ವರದಿಯು ಟಿವಿ ಮಾಧ್ಯಮಗಳನ್ನು ನಿಯಂತ್ರಿಸಲು ಸಲಹೆ ನೀಡಿದೆ. ಬೇರೆ ಕೆಲವು ಸಲಹೆಗಳಲ್ಲಿಯೂ ಟಿವಿ ಮಾಧ್ಯಮಗಳನ್ನು ನಿಯಂತ್ರಿಸುವಂತೆ ಹೇಳಲಾಗಿದೆ. ಆದರೆ ಟಿವಿ ಮಾಧ್ಯಗಳು ತಮ್ಮದೇ ಆದ ಸ್ವಯಂ ನಿಯಂತ್ರಣ ಮಂಡಳಿ ಅಧೀನಕ್ಕೆ ಒಳಪಡುವುದು ಉತ್ತಮವೆಂಬ ಅಭಿಪ್ರಾಯವನ್ನು ಸಚಿವರು ಹೊರಹಾಕಿದ್ದಾರೆ.