Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಯ್ಯನ ಮುಂದೆ ವಿಶೇಷ ಬೇಡಿಕೆ ಇಟ್ಟ ನಿರ್ದೇಶಕ RGV!
ನಟ ನಂದಮೂರಿ ಬಾಲಕೃಷ್ಣ ಸದ್ಯ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಒಂದು ಕಡೆ ಬಾಲಯ್ಯ ಅಭಿನಯದ ಅಖಂಡ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಮತ್ತೊಂದು ಕಡೆ ಬಾಲಯ್ಯ ನಿರೂಪಣೆಯ 'ಬಾಲಯ್ಯ ಅನ್ ಸ್ಟಾಪಬಲ್' ಕಾರ್ಯಕ್ರಮಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
Recommended Video
ಈಗ ವಿಚಾರ ಇರುವುದು 'ಬಾಲಯ್ಯ ಅನ್ ಸ್ಟಾಪಬಲ್' ಕಾರ್ಯಕ್ರಮದ ಬಗ್ಗೆ. ಹೌದು ಈ ಕಾರ್ಯಕ್ರಮ ಒಟಿಟಿ ವೇದಿಕೆಯಾದ ಆಹಾದಲ್ಲಿ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ಗಳು ಭಾಗಿ ಆಗುತ್ತಿದ್ದಾರೆ. ಸಾಕಷ್ಟು ಸ್ವಾರಸ್ಯಕರ ಸಂಗತಿಗಳನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲೇಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ರಾಮ್ ಗೋಪಾಲ್ ವರ್ಮಾ ಅವರಿಗೆ ಇಲ್ಲಿ ತನಕ ಆಹ್ವಾನ ಬಂದಿಲ್ಲವಂತೆ. ಹಾಗಾಗಿ ಅವರೇ ಬೇಡಿಕೆ ಇಟ್ಟಿದ್ದಾರೆ. ಆರ್ ಜಿ ವಿ ಏನು ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ.....
ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಬಾಲಯ್ಯನಿಗೆ ಬೇಡಿಕೆ!
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಬಾಲಯ್ಯು ಅವರು ನಡೆಸಿಕೊಡುವ ಈ ಕಾರ್ಯಕ್ರಮವನ್ನು ನೋಡುತ್ತಾರೆ ಅಂತೆ. ಹಾಗಾಗಿ ತಮಗೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಇಂಗಿತ ಇದೆಯಂತೆ. ಇದನ್ನು ಟ್ವೀಟ್ ಮಾಡುವ ಮೂಲಕ ಸ್ವತಃ ಆರ್ ಜಿ ವಿ ಹೊರ ಹಾಕಿದ್ದಾರೆ. "ನಾನು 'ಆಹಾ'ದ 'ಅನ್ಸ್ಟಾಪಬಲ್' ಕಾರ್ಯಕ್ರಮವನ್ನು ಇಷ್ಟ ಪಡುತ್ತೇನೆ. ಮತ್ತು ನಾನು ಶೋನಲ್ಲಿರಲು ಬಯಸುತ್ತೇನೆ , ಬಾಲಯ್ಯ ಅವರು ನನಗೆ ಈ ಅವಕಾಶವನ್ನು ನೀಡುತ್ತಾರೆ ಎಂದು ನಾನು ಭಾವಿಸುತ್ತೇನೆ " ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ನಲ್ಲಿ ಬರೆದುಕೊಂಡಿದ್ದಾರೆ.
ರಾಜಮೌಳಿ, ಮಹೇಶ್ ಬಾಬು, ರವಿತೇಜ, ಅಲ್ಲು ಅರ್ಜುನ್ ಭಾಗಿ!
ಈಗಾಗಲೇ ಈ ಕಾರ್ಯಕ್ರಮದಲ್ಲಿ ಹಲವಾರು ಸಿನಿಮಾ ತಾರೆಯರು ಭಾಗಿ ಆಗಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಾಜಮೌಳಿ, ರವಿತೇಜ, ಮಹೇಶ್ ಬಾಬು, ನಾನಿ ಸೇರಿದಂತೆ ಹಲವು ಸ್ಟಾರ್ಗಳು ಈ ಕಾರ್ಯಕ್ರಮದಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಬಾಲಯ್ಯ ಅವರು ತಮಾಷೆಯಾಗಿ ನಡೆಸಿಕೊಡುತ್ತಾರೆ. ಬಾಲಯ್ಯ ಅವರ ಮಾತುಗಳನ್ನು ಕೇಳಲೆಂದೆ ಹಲವರು ಈ ಕಾರ್ಯಕ್ರಮವನ್ನು ನೋಡುತ್ತಾರೆ. ಅಲ್ಲದೆ ಇದಕ್ಕೆ ಹೆಚ್ಚಿನ ಅಭಿಮಾನಿಗಳು ಕೂಡ ಇದ್ದಾರೆ.
ಬಾಲಯ್ಯ, ರವಿತೇಜ ಕೋಲ್ಡ್ ವಾರ್ ಗಾಪಿಸ್ಗೆ ಬ್ರೇಕ್!
ಇನ್ನು ಕಾರ್ಯಕ್ರಮದಲ್ಲಿ ನಟ ಮಾಸ್ ಮಹಾರಾಜ ರವಿತೇಜ ಅವರು ಕೂಡ ಭಾಗಿ ಆಗಿದ್ದರು. ರವಿತೇಜ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣ ಆಗಿತ್ತು. ಯಾಕೆಂದರೆ ಬಾಲಯ್ಯ ಮತ್ತು ರವಿತೇಜ ನಡುವೆ ಕೋಲ್ಡ್ ವಾರ್ ಇದೆ ಎನ್ನುವ ಸುದ್ದಿ ಹಲವು ದಿನಗಳಿಂದ ಜೀವಂತವಾಗಿ ಇತ್ತು. ಅದಕ್ಕೆಲ್ಲಾ ಈ ಕಾರ್ಯಕ್ರಮ ಬ್ರೇಕ್ ಹಾಕಿತು. ಕಾರ್ಯಕ್ರಮದಲ್ಲಿ ಇಬ್ಬರು ನಟರು ಆಪ್ತವಾಗಿಯೇ ಇದ್ದದ್ದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿತ್ತು.
RGV ಸಿಗುತ್ತಾ ಬಾಲಯ್ಯನ ಆಹ್ವಾನ?
ಇನ್ನು ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಾವೇ ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲು ಕೇಳಿಕೊಂಡಿದ್ದಾರೆ. ಆದರೆ ಬಾಲಯ್ಯ ಕಡೆಯಿಂದ, ಕಾರ್ಯಕ್ರಮ ಆಯೋಜಕರ ಕಡೆಯಿಂದ ರಾಮ್ ಗೋಪಾಲ್ ವರ್ಮಾ ಅವರಿಗೆ ಆಹ್ವಾನ ಹೋಗುತ್ತಾ?. ಹಾಗೆ ಒಂದು ವೇಳೆ ಈ ಕಾರ್ಯಕ್ರಮದಲ್ಲಿ ಆರ್ಜಿವಿ ಭಾಗಿ ಆಗಿದ್ದೇ ಆದರೆ ಏನೆಲ್ಲಾ ಮಾತನಾಡಬಹುದು ಎನ್ನುವ ಕುತೂಹಲ ಸೃಷ್ಟಿ ಆಗಿದೆ.