Don't Miss!
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಣ್ ಜೋಹರ್ ಶೋನಲ್ಲಿ ಮದುವೆಯನ್ನು 'ಕೆಜಿಎಫ್'ಗೆ ಹೋಲಿಸಿದ ಸಮಂತಾ! ಕಾರಣ?
ನಟಿ ಸಮಂತಾ-ನಾಗ ಚೈತನ್ಯ ವಿಹಾವ ವಿಚ್ಛೇಧನ ಅವರ ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾಗಿಲ್ಲ. ದಕ್ಷಿಣ ಭಾರತದ ಅತ್ಯಂತ ಕ್ಯೂಟ್ ಜೋಡಿ ಎಂದೇ ಹೆಸರಾಗಿದ್ದ ಈ ಜೋಡಿ ಯಾವುದೇ ಸಣ್ಣ ಸುಳಿವೂ ಸಹ ಇಲ್ಲದೆ ಒಮ್ಮೆಲೆ ವಿಚ್ಛೇಧನ ಘೋಷಿಸಿತು.
ಇವರಿಬ್ಬರ ವಿಚ್ಛೇಧನವಾಗಿ ಒಂದು ವರ್ಷಕ್ಕೆ ಇನ್ನೆರಡು ತಿಂಗಳಷ್ಟೆ ಬಾಕಿ ಇದೆ. ಇಷ್ಟು ಸಮಯವಾದರೂ ವಿಚ್ಛೇಧನ ಕುರಿತಾದ ಚರ್ಚೆ ಇನ್ನೂ ಜಾರಿಯಲ್ಲಿದೆ.
ಈಗಲೂ ಸಮಂತಾ-ನಾಗಚೈತನ್ಯರ ವಿಚ್ಛೇಧನ ಅವರ ಈ ಹಿಂದಿನ ಸಂಬಂಧದ ಬಗ್ಗೆ ಮಾತುಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಸಮಂತಾ ಹಾಗೂ ನಾಗ ಚೈತನ್ಯ ಪರಸ್ಪರ ವಿಚ್ಛೇಧನ ಘೋಷಿಸಿದರಾದರು ಅದಕ್ಕೆ ಕಾರಣವನ್ನು ಈವರೆಗೆ ಹೇಳಿಲ್ಲ. ಇದೀಗ ಸಮಂತಾ, ಹಿಂದಿಯ ಜನಪ್ರಿಯ ಟಾಕ್ ಶೋ ಕಾಫಿ ವಿತ್ ಕರಣ್ನಲ್ಲಿ ಅತಿಥಿಯಾಗಿ ಭಾಗವಹಿಸಿದ್ದು, ಅಲ್ಲಿ 'ಅತೃಪ್ತ ಮದುವೆ' ಅಥವಾ ಅಸಂತುಷ್ಟ ಮದುವೆಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಭಾರತದಲ್ಲಿ ಮದುವೆಗಳು ಹೀಗೆ ವೈಫಲ್ಯತೆ ಅನುಭವಿಸುತ್ತಿರುವದಕ್ಕೆ ಕರಣ್ ಜೋಹರ್ ಕಾರಣ ಎಂದಿದ್ದಾರೆ.
ಕಾಫಿ ವಿತ್ ಕರಣ್ನಲ್ಲಿ ಸಮಂತಾ ಅತಿಥಿ
ಈ ಬಾರಿಯ 'ಕಾಫಿ ವಿತ್ ಕರಣ್' ನಲ್ಲಿ ನಟಿ ಸಮಂತಾ ಅತಿಥಿಯಾಗಿ ಎಪಿಸೋಡ್ ಒಂದರಲ್ಲಿ ಭಾಗವಹಿಸಿದ್ದು, ಈಗ ಬಿಡುಗಡೆ ಆಗಿರುವ ಕಾರ್ಯಕ್ರದ ಟ್ರೈಲರ್ನಲ್ಲಿ ಸಮಂತಾರ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಟ್ರೈಲರ್ನಲ್ಲಿ ಕಂಡು ಬರುತ್ತಿರುವಂತೆ ನಟಿ ಸಮಂತಾ, ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಕರಣ್ ಜೋಹರ್ರ ಪ್ರಶ್ನೆಗಳಿಗೆ ಕಾನ್ಫಿಡೆಂಟ್ ಆಗಿ ಉತ್ತರ ನೀಡಿದ್ದಾರೆ.
ಮದುವೆ ಎಂಬುದು 'ಕೆಜಿಎಫ್' ಇದ್ದಂತೆ: ಸಮಂತಾ
ಶೋನಲ್ಲಿ ಕರಣ್, ಮದುವೆ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಸಮಂತಾ ಉತ್ತರಿಸಿರುವ ಸಣ್ಣ ತುಣುಕನ್ನು ಟ್ರೈಲರ್ನಲ್ಲಿ ಸೇರಿಸಲಾಗಿದೆ. ಭಾರತದಲ್ಲಿ ಅಸಂತುಷ್ಟ ಮದುವೆಗಳಿಗೆ (ಅನ್ಹ್ಯಾಪಿ ಮ್ಯಾರೇಜಸ್)ಗೆ ನೀವೇ ಕಾರಣ ಎಂದು ಕರಣ್ ಜೋಹರ್ ಅನ್ನು ದೂರಿದ್ದಾರೆ ಸಮಂತಾ. ಮದುವೆಗಳು 'ಕೆ3ಜಿ' (ಕಭಿ ಖುಷಿ ಕಭಿ ಗಮ್) ರೀತಿಯಲ್ಲಿರುತ್ತವೆ ಎಂದು ತೋರಿಸಿದ್ದೀರಿ. ಆದರೆ ನಿಜ ಜೀವನದಲ್ಲಿ ಅವು 'ಕೆಜಿಎಫ್' ಆಗಿರುತ್ತವೆ ಎಂದಿದ್ದಾರೆ ಸಮಂತಾ.
'ಕೆಜಿಎಫ್' ಅನ್ನು ನೆನಪಿಸಿಕೊಂಡರೇಕೆ ಸಮಂತಾ
'ಕಭಿ ಖುಷಿ ಕಭಿ ಗಮ್' ಕರಣ್ ಜೋಹರ್ ಸಿನಿಮಾನೇ ಆಗಿದ್ದು, ಅದರಲ್ಲಿ ಸುಂದರ ಕುಟುಂಬ, ಸಂತೋಶವೇ ತುಂಬಿರುವ ದಂಪತಿ ಇನ್ನಿತರೆಗಳನ್ನು ತೋರಿಸಲಾಗಿದೆ. ಹಾಗಾಗಿಯೇ ಸಮಂತಾ ಆ ಸಿನಿಮಾದ ಉದಾಹರಣೆ ತೆಗೆದುಕೊಂಡಿದ್ದಾರೆ. ನಮ್ಮ ಜೀವನ ಸಹ 'ಕೆ3ಜಿ' ರೀತಿ ಇರುತ್ತದೆಂದು ಮದುವೆ ಆಗುತ್ತಾರೆ, ಆದರೆ ಆ ನಂತರ ಗೊತ್ತಾಗುತ್ತದೆ ಮದುವೆ ಎಂಬುದು 'ಕೆಜಿಎಫ್' ಮಾದರಿ ಎಂದು. ಅಂದರೆ ಜಗಳ, ಮುನಿಸು, ಕಾದಾಟ ಎಲ್ಲವೂ ಇರುತ್ತದೆ ಎಂಬರ್ಥದಲ್ಲಿ ಸಮಂತಾ ಈ ಮಾತು ಹೇಳಿದ್ದಾರೆ.
ಶೋಭಿತಾ ಅನ್ನು ವಿವಾಹವಾಗಲಿರುವ ನಾಗ ಚೈತನ್ಯ!
ಸಮಂತಾ ಹಾಗೂ ನಾಗಚೈತನ್ಯ ಸತತ ಹತ್ತು ವರ್ಷ ಜೊತೆಗಿದ್ದರು. 2017 ರಲ್ಲಿ ವಿವಾಹವಾಗಿದ್ದ ಇವರು ಅದಕ್ಕೂ ಮುನ್ನ ಸುಮಾರು ಆರು ವರ್ಷ ಪ್ರೀತಿಸುತ್ತಿದ್ದರು. ಅಂತಿಮವಾಗಿ 2021 ರಲ್ಲಿ ವಿಚ್ಛೇಧನ ಪಡೆದುಕೊಂಡು ದೂರಾದರು. ಇವರಿಬ್ಬರ ವಿಚ್ಛೇಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಮಂತಾರನ್ನು ದೋಷಿ ಎಂಬಂತೆ ಟೀಕಿಸಲಾಯಿತು. ಸತತ ಮೂದಲಿಕೆಗೆ ಗುರಿಪಡಿಸಲಾಯಿತು. ಆದರೆ ಸಮಂತಾ ಶಾಂತ ರೀತಿಯಿಂದ ಉತ್ತರಗಳನ್ನು ನೀಡಿದರು. ಇದೀಗ ಪೂರ್ಣವಾಗಿ ತಮ್ಮ ವೃತ್ತಿಯ ಬಗ್ಗೆ ಗಮನ ವಹಿಸಿರುವ ಸಮಂತಾ ಹಲವು ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಗ ಚೈತನ್ಯ, ಶೋಭಿತಾ ಧುಲಿಪಾಲ ಅನ್ನು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.