Don't Miss!
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
The Family Man-2; ವಿವಾದದ ಬಳಿಕ 'ರಾಜಿ' ಪಾತ್ರದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸಮಂತ?
ಭಾರಿ ಕುತೂಹಲ ಮೂಡಿಸಿದ್ದ 'ದಿ ಫ್ಯಾಮಿಲಿ ಮ್ಯಾನ್-2' ವೆಬ್ ಸರಣಿ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಆಗಿದೆ. ಈ ಸರಣಿ ಮೂಲಕ ಟಾಲಿವುಡ್ ಸ್ಟಾರ್ ನಟಿ ಸಮಂತಾ ಡಿಜಿಟಲ್ ಲೋಕದಲ್ಲೂ ಸ್ಟಾರ್ ಆಗಿದ್ದಾರೆ. ಸಮಂತಾ, ರಾಜಿ ಆಗಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
'ದಿ ಫ್ಯಾಮಿಲಿ ಮ್ಯಾನ್-2'ನಲ್ಲಿ ಪ್ರೇಕ್ಷಕರನ್ನು ಹೆಚ್ಚು ಕಾಡಿದ ಪಾತ್ರ ರಾಜಿ. ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ವೆಬ್ ಸರಣಿ ಜೊತೆಗೆ ತನ್ನ ಪಾತ್ರವೂ ಸೂಪರ್ ಸಕ್ಸಸ್ ಆದ ಖುಷಿಯನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
'ಫ್ಯಾಮಿಲಿ ಮ್ಯಾನ್-2' ಟ್ವಿಟ್ಟರ್ ವಿಮರ್ಶೆ; ಮನೋಜ್ ಬಾಜಪೇಯಿ-ಸಮಂತಾಗೆ ಅಭಿಮಾನಿಗಳು ಫಿದಾ
ಅಂದಹಾಗೆ ವೆಬ್ ಸರಣಿ ಬಿಡುಗಡೆಗೂ ಮೊದಲು ಭಾರಿ ವಿವಾದ ಸೃಷ್ಟಿ ಮಾಡಿತ್ತು. ಸಮಂತಾ ಪಾತ್ರದ ಬಗ್ಗೆ ಈಳಂ ತಮಿಳರು ಆಕ್ರೋಶ ಹೊರಹಾಕಿದ್ದರು. ಆದರೆ ಸಮಂತಾ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ. ಇದೀಗ ಮೊದಲ ಬಾರಿಗೆ ತನ್ನ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ರಾಜಿ ಪಾತ್ರದ ಬಗ್ಗೆ ಸಮಂತಾ ಹೇಳಿದ್ದೇನು? ಮುಂದೆ ಓದಿ..
ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
'ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ತುಂಬಾ ಸಂತೋಷವಾಗಿದೆ. ರಾಜಿ ಯಾವಾಗಲು ವಿಶೇಷ. ಈ ಪಾತ್ರ ಮಾಡಲು ರಾಜ್ ಮತ್ತು ಡಿಕೆ ಸಂಪರ್ಕಿಸಿದಾಗ, ಈ ಪಾತ್ರವನ್ನು ನಿಭಾಯಿಸಲು ಸೂಕ್ಷ್ಮತೆ ಮತ್ತು ಬ್ಯಾಲೆನ್ಸ್ ಆಗಿರಬೇಕು ಎನ್ನುವುದು ಗೊತ್ತಾಯಿತು' ಎಂದಿದ್ದಾರೆ.
ಸಾಕ್ಷ್ಯಚಿತ್ರಗಳನ್ನು ನೋಡಿ ಶಾಕ್ ಆಗಿದ್ದೆ
'ಸೃಜನಶೀಲ ತಂಡವೂ ಕೆಲವು ಸಾಕ್ಷ್ಯಚಿತ್ರಗಳನ್ನು ಕಳುಹಿಸಿ ನೋಡಲು ಹೇಳಿದರು. ಅದರಲ್ಲಿ ಈಳಂ ಯುದ್ಧದಲ್ಲಿ ತಮಿಳು ಮಹಿಳೆಯರ ಸಾವು ನೋವಿನ ಕಥೆಗಳು ಇತ್ತು. ನಾನು ಸಾಕ್ಷ್ಯಚಿತ್ರಗಳನ್ನು ನೋಡಿದಾಗ ಈಳಂ ತಮಿಳರು ದೀರ್ಘಕಾಲದವರೆಗೆ ಅನುಭವಿಸಿದ ತೊಂದರೆ ಮತ್ತು ಕಷ್ಟ ನೋಡಿ ಶಾಕ್ ಆದೆ.'
ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದಾರೆ
'ಈ ಸಾಕ್ಷ್ಯಚಿತ್ರಗಳು ಕೆಲವೇ ಸಾವಿರ ವೀಕ್ಷಣೆ ಕಂಡಿದ್ದನ್ನು ಗಮನಿಸಿದೆ. ಈಳಂ ಸಾವಿರಾರು ಜನ ಪ್ರಾಣ ಕಳೆದುಕೊಂಡಾಗ ಜಗತ್ತು ಸುಮ್ಮನೆ ದೂರದಿಂದ ನೋಡುತ್ತಿತ್ತು. ಲಕ್ಷಾಂತರ ಜನರು ತಮ್ಮ ಜೀವನ ಕಳೆದುಕೊಂಡಿದ್ದಾರೆ. ಅಸಂಖ್ಯಾತ ಜನರು ದೂರ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಆ ಗಾಯ ಅವರ ಹೃದಯದಲ್ಲಿ, ಮನಸ್ಸಿನಲ್ಲಿ ಇನ್ನೂ ಹಾಗೆ ಇದೆ.'
ಯುದ್ಧದಲ್ಲಿ ಮಡಿದವರಿಗೆ ಈ ಪಾತ್ರ ಗೌರವ ಸಲ್ಲಿಸುತ್ತದೆ
'ರಾಜಿ ಕಥೆ ಒಂದು ಕಾಲ್ಪನಿಕವಾಗಿದ್ದರೂ, ಅಸಮಾನತೆ ಯುದ್ಧದಲ್ಲಿ ಮರಣಹೊಂದಿದವರಿಗೆ ಮತ್ತು ಯುದ್ಧದ ನೋವಿನ ನೆನಪಿನಲ್ಲಿ ಇರುವವರಿಗೆ ಈ ಪಾತ್ರ ಗೌರವ ಸಲ್ಲಿಸುತ್ತದೆ. ರಾಜಿ ಪಾತ್ರವನ್ನು ಸೂಕ್ಷ್ಮವಾಗಿ ಬಿಂಬಿಸುವುದು ನನ್ನ ಉದ್ದೇಶವಾಗಿತ್ತು. ಒಂದು ವೇಳೆ ನಾವು ವಿಫಲವಾಗಿದ್ದರೆ ಅವರು ಅಸಂಖ್ಯಾತ ಜನರ ತಿರಸ್ಕಾರಕ್ಕೆ ಒಳಗಾಗುತ್ತಿದ್ದರು' ಎಂದು ಸಮಂತಾ ಹೇಳಿದ್ದಾರೆ.
Recommended Video
ತಮಿಳ ವಿರೋಧ ವ್ಯಕ್ತವಾಗಿತ್ತು
ಈ ವೆಬ್ ಸರಣಿಯ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ತಮಿಳು ಜನಸಮುದಾಯದ ಮನೋಭಾವನೆಗೆ ನೋವುಂಟುಮಾಡುವ ದೃಶ್ಯಗಳು ಹೊಂದಿದೆ ಎಂದು ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ ಬಿಡುಗಡೆ ಬಳಿಕ ಎಲ್ಲರೂ ಮೆಚ್ಚಿಕೊಂಡು ಹಾಡಿ ಹೊಗಳುತ್ತಿದ್ದಾರೆ.