Don't Miss!
- News ಗುರುವಾರ ಚುನಾವಣೆ ಅಧಿಸೂಚನೆ: ಇನ್ನೂ ಅಭ್ಯರ್ಥಿ ಘೋಷಣೆ ಮಾಡದ ಪಕ್ಷಗಳು
- Finance ಗೋವಾ-ತಮ್ನಾರ್ ವಿದ್ಯುತ್ ಯೋಜನೆ ತಿರಸ್ಕರಿಸಿದ ಕರ್ನಾಟಕ
- Lifestyle ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಹಸು..! ₹40 ಕೋಟಿಗೆ ಹರಾಜು..!
- Sports CSK vs GT: ಚೆಪಾಕ್ನಲ್ಲಿ ನಡೆಯದ 'ಶುಭ' ಆಟ; ಸಿಎಸ್ಕೆ ವಿರುದ್ಧ ಮಕಾಡೆ ಮಲಗಿದ ಗುಜರಾತ್ ಟೈಟನ್ಸ್
- Automobiles ಆಕರ್ಷಕ ಬೆಲೆ: ಭಾರೀ ಬೇಡಿಕೆಯ ಕಿಯಾ ಸೆಲ್ಟೋಸ್ ಎಸ್ಯುವಿಯ ಹೊಸ ರೂಪಾಂತರಗಳು ಬಿಡುಗಡೆ
- Technology Lenovo: ಭಾರತದಲ್ಲಿ ಲೆನೊವೊ ಟ್ಯಾಬ್ M11 ಲಾಂಚ್! 8GB RAM ... ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿಪ್ಪಾರಳ್ಳಿ ತರ್ಲೆಗಳೇ ನಿಮಗಿದೋ ನಮಸ್ಕಾರ!
ಒಬ್ಬ ತರಲೆಗಿರಿಯ ಪರಮಾವಧಿ. ಇನ್ನೊಬ್ಬ ಮಿದುಳಿಗೇ ಜಿರಲೆ ಬಿಡುವ ಬಂಡಲ್ ಬಡಾಯಿ. ಮತ್ತೊಬ್ಬ ಮೂಗಿನ ತುದಿಗೆ ತುಪ್ಪಸವರಿ ಚಂದ ನೋಡುವ ಮಿಸ್ಟರ್ ಬಕರಾ ಸೋದರ!ಯಾರು ಹಿತವರು ನಿಮಗೆ ಈ ಮೂವರೊಳಗೆ? ಒಮ್ಮೆ ಮೂವರೂಇಷ್ಟವಾಗುತ್ತಾರೆ. ಇನ್ನೊಮ್ಮೆ ಇವರ ವಾಕ್ ಚಿತ್ರವನ್ನು ಸಹಿಸಿಕೊಳ್ಳುವುದುಕಷ್ಟವಾಗುತ್ತದೆ.
ಇನ್ನೇನು ಹಾಸ್ಯದ ಮಳೆ ಸುರಿಯಬೇಕು; ಅಲ್ಲಿ ಅತಿರೇಕದ ತುತ್ತತುದಿ ಗೋಚರವಾಗುತ್ತದೆ! ಇದು ಜಸ್ಟ್ ನೋಡಿ, ಎಂಜಾಯ್ ಮಾಡಿ, ಮರೆತುಬಿಡಿ... ಎಂಬಸಿದ್ಧಾಂತ ಆಧರಿಸಿದ ಚಿತ್ರ. ಕೆಲವೆಡೆ ತಮಾಷೆ ಹೋಗಿ ಅಮಾವಾಸ್ಯೆಯಾಗುತ್ತದೆ. ಇಲ್ಲಿ ವ್ಯಂಗ್ಯವಿದೆ, ವಿಡಂಬನೆಯಿದೆ. ರಾಜಕೀಯ ಆಚಾರ, ವಿಚಾರ,ಶಿಷ್ಟಾಚಾರ ಹಾಗೂ ಭ್ರಷ್ಟಾಚಾರಕ್ಕೆ 'ಭೂತ"ಕನ್ನಡಿ ಹಿಡಿದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
ಆದಿಯಿಲ್ಲದ 'ಅಂತ"ವನ್ನು ಅತ್ಯಂತ ಅವಾಂತರಶೈಲಿಯಲ್ಲಿ ಹೇಳಿದ್ದಾರೆ. ತಿಪ್ಪಾರಳ್ಳಿಯ ತರಲೆಗಳೇ ನಿಮಗಿದೋ ನಮಸ್ಕಾರ!ಕೋಮಲ್ ಕಾಮಿಡಿ ಸಹಿಸಿಕೊಳ್ಳಬಹುದು. ಎಸ್.ನಾರಾಯಣ್ 'ಅತಿ "ಮಧುರಾ ಅನುರಾಗಾ... ಓಂ ಪ್ರಕಾಶ್ ರಾವ್ ಮತ್ತೆ ಡಕೋಟಾ ಎಕ್ಸ್ ಪ್ರೆಸ್ ಓಡಿಸುತ್ತಾರೆ. ಮೂವರು ನಾಯಕಿಯರು ನಕ್ಕರೆ ಅತ್ತಂತೆ, ಅತ್ತರೆ ಸುಮ್ಮನಿದ್ದಂತೆ, ಸುಮ್ಮನಿದ್ದರೆ ನಕ್ಕಂತೆ ಕಾಣುತ್ತಾರೆ. ಕನ್ವರ್ಲಾಲ್ ಅಂಬರೀಷ್ ನಡೆದದ್ದೇ ಹಾದಿ. ಅವರ 'ಗಜ"ಗಾಂಭೀರ್ಯ, ನಡುಗೆ, ಉಡುಗೆ, ತೊಡುಗೆ,ಕೊಡುಗೆ... ಎಲ್ಲ ಉಘೇ ಉಘೇ...ಸಾಧುಕೋಕಿಲಾಗೆ ಹೊಸ ಥರ ಕಾಮಿಡಿ ಮಾಡಕ್ಕೇ ಬರಾಕಿಲ್ಲಾ ಕಣಣ್ಣೋ...