Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ರಾವಣ,ಸೈಕಿಕ್ ಪ್ರೀತಿಯ ಆರ್ಭಟ
ಈ ಚಿತ್ರದ ಹೆಸರು ಕೇಳಿದ ತಕ್ಷಣ ಇದರಲ್ಲಿ ಒಂದು ನೆಗೆಟಿವ್ ಭಾವ ಮೂಡಿಸುವ ಆಂಶ ಇರೋದು ಗೊತ್ತಾಗುತ್ತದೆ. ಹೀಗಾಗಿ ಕತೆಯ ಎಳೆಯೂ ಸಿಗುತ್ತದೆ. ಅದೇ ರಾವಣ. ಇದು ತಮಿಳಿನ ಕಾದಲ್ ಕೊಂಡೇನ್ ಚಿತ್ರದ ರೀಮೇಕು.
ಅಲ್ಲಿ ಧನುಶ್ ಎಂಬ ತೆಳ್ಳಗಿನ ಹುಡುಗ ಮಾಡಿದ ಪಾತ್ರವನ್ನು ಇಲ್ಲಿ ಯೋಗೀಶ್ ಮಾಡಿದ್ದಾರೆ. ಪ್ರೀತಿಯಲ್ಲಿ ಬಿದ್ದ ಹುಡುಗ ಆಕೆ ಇನ್ನೊಬ್ಬನಿಗೆ ದಕ್ಕುತ್ತಿದ್ದಾಳೆ ಎಂದು ಗೊತ್ತಾದಾಗ ಸೈಕ್ ಆಗುತ್ತಾನೆ. ಆಕೆಗಾಗಿ ಕೊಲೆಗಳನ್ನು ಮಾಡುತ್ತಾನೆ. ಕೊನೆಗೆ ಏನಾಗುತ್ತಾನೆ ಎಂದು ತೆರೆ ಮೇಲೆ ನೋಡಿ...
ಗಿರಿ ಕ್ಯಾಮೆರಾ ಇಡೀ ಚಿತ್ರದ ಜೀವಾಳ. ಅದೇ ಒಂದು ಪಾತ್ರವಾಗಿ ಕಾಡುತ್ತದೆ. ಹಾಗೇ ಅಭಿಮನ್ ರಾಯ್ ಸಂಗೀತದಲ್ಲಿ ಮೂರು ಹಾಡುಗಳು ಅದ್ಭುತ. ಮೂಲ ಚಿತ್ರದ ಟ್ಯೂನ್ ಕದಿಯದೆ ಪಕ್ಕಾ ಹೊಸದಾಗಿ ಸಂಗೀತ ಸಂಯೋಜನೆ ಮಾಡಿ ಗೆದ್ದಿರುವುದನ್ನು ಅಭಿನಂದಿಸಲೇಬೇಕು. ಯೋಗೀಶ್ ಹುಣಸೂರ್ ಚಿತ್ರಕತೆಯಲ್ಲಿ ಇನ್ನೊಂದಿಷ್ಟು ವೇಗ ತರಲು ಯತ್ನಿಸಬಹುದಿತ್ತು.
ಇನ್ನಷ್ಟು ಟ್ರಿಮ್ಮಿಂಗ್ ಅಗತ್ಯ ಇತ್ತು. ಆದರೂ ಮೂಲಕ್ಕೆ ಮೋಸ ಮಾಡಿಲ್ಲ. ನಾಯಕ ಯೋಗೀಶ್ಗೆ ಅಭಿನಯ ತೋರಿಸಲು ಸಿಕ್ಕ ಉತ್ತಮ ಪಾತ್ರ ಇದು. ಅದಕ್ಕಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಾಧ್ಯ ವಾದಷ್ಟು ಪ್ರೀತಿ ಮತ್ತು ಶ್ರದ್ಧೆಯಿಂದ ನಟಿಸಿದ್ದಾರೆ. ನಾಯಕಿ ಸಂಚಿತಾ ಪಾತ್ರಕ್ಕೆ ಜೀವ ತುಂಬಿದ್ದಾಳೆ. ಮತ್ತೊಬ್ಬ ನಾಯಕ ಸಂತೋಷ್ ಕೂಡ ಸೈ. ಪ್ರೀತಿಗಾಗಿ ಸೈಕಿಕ್ ಆಗುವುದು. ಅದಕ್ಕಾಗಿ ಕೊಲೆ ಮಾಡುವುದು, ಅಂಥವರಿಗೆ ಪ್ರೀತಿಯ ಹುಚ್ಚ ಅಂತ ಕರೆಯುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದು ಸಮಾಜದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಬಂಧಪಟ್ಟವರು ಯೋಚಿಸುವುದೇ ಇಲ್ಲ. ಇದು ರಾವಣ ಚಿತ್ರಕ್ಕೂ ಅನ್ವಯಿಸುತ್ತದೆ...