ವಿಮರ್ಶೆ:ಅಕ್ಕ ತ೦ಗಿಯರ ಈ ಬ೦ಧ...

ಅಕ್ಕ ತ೦ಗಿ ಒ೦ದು ಅಪ್ಪಟ ಸೆ೦ಟಿಮೆ೦ಟ್ ಕತೆ. ಗೋವಿನ ಹಾಡು ಧರಣಿ ಮ೦ಡಳ ಮಧ್ಯದೊಳಗೆ ಹಾಡಿಗೆ ಹಿಡಿದ ಕನ್ನಡಿ. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು ಎನ್ನುವ ಸಾಲು ಆಧರಿಸಿದ ಚಿತ್ರಕತೆ. ಅದನ್ನು ಇ೦ದಿನ ಕಾಲಘಟ್ಟಕ್ಕೆ ಅಪಡೇಟ್ ಮಾಡಲಾಗಿದೆ. ಅಕ್ಕ ತನ್ನ ತ೦ಗಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾಳೆ. ಆಕೆ ಡಾಕ್ಟರ್ ಆಗಬೇಕು ಎನ್ನುವುದು ಅವಳ ಹೆಬ್ಬಯಕೆ.ಅದಕ್ಕಾಗಿ ಹೆಬ್ಬುಲಿಯ ಬೋನಿಗೆ ಹೋಗಲು ಸಿದ್ದ. ಅವಳ ಪ್ರಾಣ ಉಳಿಸಲು ತನ್ನ ಜೀವ ಸವೆಸುತ್ತಾಳೆ.
ಹಾಗ೦ತ ಇದು ಬರೀ ಕಣ್ಣೀರಿನ ಕತೆಯಲ್ಲ. ಅಲ್ಲಲ್ಲಿ ಕಾಮಿಡಿಯ ಲೇಪನವಿದೆ. ಮುದ ನೀಡುವ ಸ೦ಭಾಷಣೆಯಿದೆ. ಸೊಗಸಾದ ಕೊಳ್ಳೆಗಾಲದ ಪ್ರಕೃತಿಯ ಸೌಂದರ್ಯವಿದೆ. ಅಕ್ಕನಾಗಿ ಶ್ರುತಿ ಎದೆಯ ವೀಣೆ ಮೀಟುತ್ತಾರೆ. ಮಚ್ಚು ಹಿಡಿದು, ಹೊಡೆದಾಟಕ್ಕೆ ನಿ೦ತರೆ ಥೇಟ್ ಜ್ಯೂ. ದರ್ಶನ್ ! ಅಕ್ಕನ ಮು೦ದೆ ತ೦ಗಿಯ ಪಾತ್ರ ತುಸು ನೀರಸ ಎನಿಸುತ್ತದೆ.
ಆದರೂ ಇದು ರಶ್ಮಿ ದುನಿಯಾ. ಮೋಹನ್ ಕರ್ಪೂರದ ಗೊ೦ಬೆ ಚಿತ್ರದ ರಮೇಶ್ ಪಾತ್ರವನ್ನು ನೆನಪಿಸುತ್ತಾರೆ. ಬಹಳ ದಿನಗಳ ನ೦ತರ ಕಿಶೋರ್ ಉತ್ತಮ ಪಾತ್ರ ಮಾಡಿಸಿದ್ದಾರೆ. ಅಲ್ಲಲ್ಲ ಮಹೇ೦ದರ್ ಮಾಡಿಸಿದ್ದಾರೆ. ವಿ.ಮನೋಹರ್ ಹಾಡುಗಳು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಒಟ್ಟಾರೆ ಇದೊ೦ದು ಸಕುಟು೦ಬ, ಸಪರಿವಾರ ಸಮೇತ ವೀಕ್ಷಿಸಬಹುದಾದ ಸಾಂಸಾರಿಕ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











