Don't Miss!
- News "ಅಲ್ಲಾ ಹೋ ಅಕ್ಬರ್" ಕೂಗಬೇಕು ಎಂದು ಮುಸ್ಲಿಂ ಗೂಂಡಾಗಳಿಂದ ಧಮ್ಕಿ ; ನಾವು ಪಾಕಿಸ್ತಾನದಲ್ಲಿ ಇದ್ದೇವಾ - ಆರ್.ಅಶೋಕ್
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಲಾಜಿಲ್ಲದೆ ನೋಡಬಹುದಾದ ಚಿತ್ರ ಅಲೆಮಾರಿ
ಎಲ್ಲ ಪ್ರೇಮ ಕತೆಗಳಲ್ಲಿರುವಂತೆ ಇಲ್ಲೂ ಒಂದಷ್ಟು ತಿರುವುಗಳಿವೆ, ಹೊಡೆದಾಟ, ಬದಿದಾಟಗಳಿವೆ. ಸೆಂಟಿಮೆಂಟು, ಹಾಡು ಕುಣಿತ, ಡಿಶುಂ ಡಿಶುಂಗೂ ಬರವಿಲ್ಲ.
ಪಕ್ಕಾ ಮಾಸ್ ಚಿತ್ರಕ್ಕೆ ಬೇಕಾದ ಎಲ್ಲಾ ಮಸಾಲೆಗಳನ್ನು ನಿರ್ದೇಶಕ ಸಂತು ಚೆನ್ನಾಗಿ ಅರಿದು ಕೊಟ್ಟಿದ್ದಾರೆ. ಅಲೆಮಾರಿ ಚಿತ್ರಕ್ಕೆ ಚಿತ್ರಕತೆಯೇ ಉಸಿರು, ಸಂಭಾಷಣೆಯೇ ಜೀವ. ಲೂಸ್ ಮಾದ ಅಲಿಯಾಸ್ ಯೋಗೇಶ್ ಮತ್ತೆ 'ಅಂಬಾರಿ'ಯನ್ನು ನೆನಪಿಸಿದ್ದಾರೆ.
ಕೂಲಿ ಕಾರ್ಮಿಕ ಪರದೇಶಿಯಾಗಿ ಯೋಗೇಶ್ ಹಾಗೂ ನೀಲಿಯಾಗಿ ರಾಧಿಕಾ ಪಂಡಿತ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೆಳ ಮತ್ತು ಮೇಲ್ಜಾತಿಯ ಸಂಘರ್ಷಗಳ ತಾಕಲಾಟದಲ್ಲಿ ಕತೆ ಸಾಗುತ್ತದೆ. ಕಡೆಗೆ ಬ್ರಾಹ್ಮಣರ ಹುಡುಗಿ ನೀಲಿ ಹಾಲು ಮಾರುವ ಮೋಹನನಿಗೆ ಸಿಗುತ್ತಾಳಾ ಎಂಬುದೇ ಚಿತ್ರದ ಕತೆ.
ಮಧ್ಯಂತರದಲ್ಲಿ ಕತೆ ಸ್ವಲ್ಪ ಹಿಗ್ಗಿ ಜಗ್ಗಾಡಿದ್ದಾರೆ ಅನ್ನಿಸುತ್ತದೆ. ವಿರಾಮದ ಬಳಿಕ ಕತೆ ಸ್ಪಲ್ಪ ಡಲ್ ಅನ್ನಿಸಿದರೂ ಕೆಲವು ಸನ್ನಿವೇಶಗಳು ಮನಸ್ಸಿಗೆ ಮುದ ನೀಡುತ್ತವೆ. ಕ್ಲೈಮ್ಯಾಕ್ಸ್ ಸನ್ನಿವೇಶಕ್ಕೂ ಕತ್ತರಿ ಹಾಕಬಹುದಿತ್ತು.
ಹದಿನೈದು ಇಪ್ಪತ್ತು ನಿಮಿಷಗಳಷ್ಟು ಕತೆಯನ್ನು ಕಡಿಮೆ ಮಾಡಿದ್ದರೆ ಪ್ರೇಕ್ಷಕರನ್ನು ನಿದ್ರಾದೇವಿ ಆವರಿಸುತ್ತಿರಲಿಲ್ಲ. ಪ್ರೇಮ್ ಅಡ್ಡಾದಲ್ಲಿ ಪಳಗಿರುವ ಸಂತು ಇಲ್ಲೂ ಒಂದಷ್ಟು ಜೋಗಿ ಛಾಯೆಗಳನ್ನು ಉಳಿಸಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸಂತು ಗೆದ್ದಿದ್ದಾರೆ. ಉಳಿದಂತೆ ರಾಜು ತಾಳಿಕೋಟೆ, ಉಮಾಶ್ರೀ ಸಂಭಾಷಣೆ ಚುರುಕಾಗಿದೆ. ಆದಿ ಲೋಕೇಶ್ ಹಾಗೂ 'ಜೋಶ್' ಖ್ಯಾತಿಯ ರಾಕೇಶ್ ಅವರ ಅಭಿನಯ ಮೆಚ್ಚುವಂತಿದೆ. ಅರ್ಜುನ್ ಜನ್ಯಾ ಅವರ ಕೆಲವು ಟ್ಯೂನುಗಳು ಮತ್ತೆ ಮತ್ತೆ ಗುನುಗುವಂತಿವೆ. ಒಟ್ಟಿನಲ್ಲಿ ಒಮ್ಮೆ ಯಾವುದೇ ಮುಲಾಜಿಲ್ಲದಂತೆ ನೋಡಬಹುದಾದ ಸಿನೆಮಾ.