Don't Miss!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರವಿಮರ್ಶೆ: ಪ್ರೀತಿಯ ತೇರು , ಪ್ರೇಕ್ಷಕ ಪಾರು
ಗಂಟೆಗೆ 3 ಹೊಡೆದಾಟ. ಮತ್ತೆ ನಾಯಕನ ಪರದಾಟ. ಅಲ್ಲಿಗೆ ಎಂಟ್ರಿ ಕೊಡುತ್ತಾಳೆ ನಾಯಕಿ. ರೌಡಿಯೊಬ್ಬ ಹುಡುಗಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾನೆ. ಕೊನೆಗೆ ಆಕೆ ತನಗೆ ಮೋಸ ಮಾಡ್ತವ್ಳೆ ಎಂದು ಗೊತ್ತಾಗಿ, ಹುಚ್ಚನಾಗುತ್ತಾನೆ. ಹುಡುಗಿಗೆ ತನ್ನ ತಪ್ಪಿನ ಅರಿವಾಗಿ ಗಳ ಗಳಗಳ ಅಂತ ಅಳೋಕೆ ಶುರು ಮಾಡ್ತಾಳೆ...
ಇಲ್ಲಿ ನಾಯಕ ತಾನಿಲ್ ನಕ್ಕರೆ ಅತ್ತಂತೆ, ಅತ್ತರೆ ನಕ್ಕಂತೆ, ಸುಮ್ಮನಿದ್ದರೆ ನಟಿಸಿದಂತೆ, ಬಾಯಿ ಬಿಟ್ಟರೆ ಚ್ಯೂಯಿಂಗ್ ಗಮ್ ಅಗೆದಂತೆ ಭಾಸವಾಗುತ್ತದೆ. ಫೈಟಿಂಗ್ ಮಾಡುವಾಗ ಸಿಕ್ಕಾಪಟ್ಟೆ ಕಾಮಿಡಿಯೋ ಕಾಮಿಡಿ. ನಿರ್ದೇಶಕರು ತಾನಿಲ್ ಕಡೆಯಿಂದ ಅಭಿನಯ ತೆಗೆಸಲು 'ಬೆವರಿನ ಹೊಳೆ' ಹರಿಸಿದ್ದಾರೆ. ಚಿತ್ರದಲ್ಲಿ ಭಯಂಕರ ಅದ್ದೂರಿತನ ತೋರಿಸಲು ನಿರ್ಮಾಪಕರು 'ನೋಟಿನ ಹೊಳೆ' ಹರಿಸಿದ್ದಾರೆ. ಅಲ್ಲಲ್ಲಿ ಹೆಲಿಕಾಪ್ಟರ್ ಬಳಸುವುದೇನು? ಹೊಸ ಹೊಸ ಕಾರುಗಳನ್ನು ಬಳಸುವುದೇನು? ನಾಲ್ಕು ಕೋಟಿ ಸಿನಿಮಾ ಮಾಡುವುದು ಎಂದರೆ ಹುಡುಗಾಟಿಕೆಯಾ? ಇದು ಪ್ರೀತಿಯ ತೇರು ಅಲ್ಲ, ಕಾಸಿನ ತೇರು ಎನ್ನಬಹುದು. ಬಹುಶಃ ಒಬ್ಬ ಹೊಸ ನಾಯಕನಿಗೆ ಇಷ್ಟೊಂದು ಹೈ ಬಜೆಟ್ ಸುರಿದು ಸಿನಿಮಾ ಮಾಡಿದ್ದು ಇದೇ ಮೊದಲೇನೊ?!
ನಿರ್ದೇಶಕ ಪ್ರಸಾದ್ಗೆ ಕತೆಯಲ್ಲಿ ಹಿಡಿತವಿಲ್ಲ. ಆದರೆ ಪ್ರತಿಯೊಂದನ್ನೂ ಅದ್ದೂರಿಯಾಗಿ ತೋರಿಸಬೇಕು ಎಂಬ ಮಿಡಿತವಿದೆ. ಚಿತ್ರಕತೆಯನ್ನು ನೆಟ್ಟಗೆ ಹೆಣೆಯಲು ಗೊತ್ತಿಲ್ಲ, ಆದರೆ ಪೋಷಕ ಪಾತ್ರಗಳಿಂದ ಕೆಲಸ ತೆಗೆಸಿಕೊಳ್ಳುವ ಸಾಮರ್ಥ್ಯವಿದೆ. ಸಂಗೀತ, ಕತೆ, ಚಿತ್ರಕತೆ, ಸಂಭಾಷಣೆಯ ಜತೆ ನಿರ್ದೇಶನವನ್ನೂ ಮಾಡಿದ್ದಾರೆ ಎಂದರೆ ಪ್ರಸಾದ್ ಜ್ಯೂ. ಕಲಾ ಸಾಮ್ರಾಟೇ! ಇಬ್ಬರು ನಾಯಕಿಯರೂ ಕೆಲಸಕ್ಕೆ ಮೋಸ ಮಾಡಿಲ್ಲ. ಮೈಕೊನಾಗರಾಜ್, ಧರ್ಮ ಮೊದಲಾದವರು ಇರುವುದರಿಂದ ಒಂದಷ್ಟು ಹೊತ್ತು ಕಣ್ಣರಳಿಸಿಕೊಂಡು ನೋಡಬಹುದು. ಹೀರೋ ಬಂದಾಗ ಮಾತ್ರ ಹಿರೋಷಿಮಾದಲ್ಲಿ ಬಾಂಬ್ ಬಿದ್ದ ಅನುಭವ! 'ತೇರು' ಏರಿ ಥೇಟರ್ದಾಗೆ ಪ್ರೇಕ್ಷಕ ನಗುತಾನೆ... ಮರ ಗಿಡ ತೂಗ್ಯಾವೇ ಹಕ್ಕೀ ಹಾರ್ಯಾವೇ... ನೋಡಿ ನಲಿಯೋಣ' ತಮ್ಮ...