Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರವಿಮರ್ಶೆ:ಈ ಚಿತ್ರ ನಿಜಕ್ಕೂ ವಿಸ್ಮಯ
ಕನ್ನಡದಲ್ಲಿ ಪ್ರೀತಿಗೆ ಸಂಬಂಧಿಸಿದ ಚಿತ್ರಗಳು ಅದೆಷ್ಟೋ ಬಂದಿವೆ. ಬರುತ್ತಿವೆ. ಬರುತ್ತಲೇ ಇರುತ್ತವೆ. ಆದರೆ, ಎಲ್ಲ ಹೊಡೆತಗಳೂ ತೆಂಡೂಲ್ಕರ್ ಹೊಡೆತ ಆಗುವುದಿಲ್ಲ. ಅದೇ ರೀತಿ ಇತ್ತೀಚೆಗೆ ಬರುತ್ತಿರುವ ಲವ್ ಸ್ಟೋರಿಗಳು ಖಂಡಿತ 'ಒಲವೇವಿಸ್ಮಯ' ಆಗುವುದಿಲ್ಲ. ಚೊಚ್ಚಲ ನಿರ್ದೇಶನದಲ್ಲೇ ಟಿ.ಎನ್. ನಾಗೇಶ್ ಅಚ್ಚರಿ ಮೂಡಿಸುತ್ತಾರೆ.
ಒಂದು ಮಂದ ಹಾಗೂ ಸ್ವಾದಿಷ್ಟ ಚಿತ್ರವನ್ನು ನೋಡಿದ ಅನುಭವ ಆಗುವಂತೆ ನಿರೂಪಿಸಿದ್ದಾರೆ. ಪ್ರೀತಿಯಿಂದ ಪರದೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಂತರ ಅದು ಮದುವೆಗೆ ತಿರುಗುತ್ತದೆ. ಇನ್ನೇನು ಎಲ್ಲ ಆಗಿಬಿಟ್ಟಿತು ಎನ್ನುವ ಹೊತ್ತಿಗೆ ಒಲವು ವಿಸ್ಮಯ ರೀತಿಯಲ್ಲಿ ಸೋಲುತ್ತದೆ. ವಿಧಿ ವಿಲನ್ ಆಗುತ್ತದೆ. ಆಕೆ ಆಕಡೆ, ಈತ ಈ ಕಡೆ...
ಕತೆಗೆ ತಕ್ಕ ಛಾಯಾಗ್ರಹಣ, ಛಾಯಾಗ್ರಹಣಕ್ಕೆ ತಕ್ಕ ಸಂಗೀತ, ಸಂಗೀತಕ್ಕೆ ತಕ್ಕ ನಿರೂಪಣೆ, ಚಿತ್ರಕತೆ ಸಿನಿಮಾಗೆ ಮತ್ತಷ್ಟು ಮೆರಗು ನೀಡಿದೆ. ವೀರಸಮರ್ಥ್ ಸಂಗೀತದಲ್ಲಿ ಮೂರು ಹಾಡುಗಳು ಮಂದ ಸ್ಮಿತದಂತಿವೆ. ಮೊದಲ ಬಾರಿಗೆ ನಾಯಕನ ಪಟ್ಟ ಅಲಂಕರಿಸಿರುವ ಧರ್ಮ ಕೀರ್ತಿರಾಜ್ ಥೇಟ್ ಕನ್ನಡದ ರಣಬೀರ್ ಕಪೂರ್.
ಒಲವೇ ವಿಸ್ಮಯ ಚಿತ್ರದ ಮೂಲಕ ನಮ್ಮಲ್ಲೊಬ್ಬ ಚಾಕೊಲೇಟ್ ಹೀರೋ ಹುಟ್ಟಿಕೊಂಡಿದ್ದಾನೆ. ನಾಯಕಿ ಪ್ರತಿಭಾ ರಾಣಿ ಸದ್ಯದ ನಾಯಕಿಯರಿಗೆ ಸಡ್ಡು ಹೊಡೆಯುವಂತೆ ನಟಿಸಿದ್ದಾಳೆ. ದ್ವಿತಿಯಾರ್ಧದಲ್ಲಂತೂ ವಂಡರ್ಫುಲ್ ನಟನೆ. ಇನ್ನೊಬ್ಬಾಕೆ ಸ್ಫೂರ್ತಿ ಸ್ನೇಹ ಪೂರ್ವಕವಾಗಿ ಬಂದು ನಿಮ್ಮ ಸ್ನೇಹಿತೆಯಾಗುತ್ತಾಳೆ.
ಅನಂತನಾಗ್ ನಟ ನೆಗೆ ಹ್ಯಾಟ್ಸ್ ಆಫ್. ರಾಜು ತಾಳೀಕೋಟೆಯನ್ನು ಸರಿ ಯಾಗಿ ಬಳಸಿಕೊಂಡಿಲ್ಲ. ಕುರಿ ಪ್ರತಾಪನ ಪ್ರಲಾಪ ಕೊಂಚ ಜಾಸ್ತಿ ಆಯ್ತು. ಮೊದಲಾರ್ಧವನ್ನು ಇನ್ನಷ್ಟು ಟ್ರಿಮ್ ಮಾಡಿದ್ದರೆ ಚೆನ್ನಾಗಿತ್ತು. ಹಾಗೇ ಮಿತ್ರ, ಸಂಗ ಮೇಶ ಉಪಾಸೆ, ಸುಧಾ ಬೆಳವಾಡಿ, ಪದ್ಮಜಾ ರಾವ್ ಎಲ್ಲರೂ ತಮ್ಮ ಕೆಲಸಕ್ಕೆ ಅನ್ಯಾಯ ಮಾಡಿಲ್ಲ.
ಮೊದ ಲಾರ್ಧಕ್ಕಿಂತ ದ್ವಿತಿಯಾರ್ಧ ಮನಸ್ಸಿನಲ್ಲಿ ಉಳಿಯುತ್ತದೆ. ಎಲ್ಲಿಯೂ ರೀಮೇಕ್ ವಾಸನೆ ಹೊಡೆಯುವುದಿಲ್ಲ. ಪಕ್ಕಾ ಕನ್ನಡ ಮಣ್ಣಿನ ಘಮಲು ಘಮ ಘಮಿಸುತ್ತದೆ... ಇದು ನಿಜಕ್ಕೂ ವಿಸ್ಮಯ...