Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಜನಗೂಡು ನಂಜುಂಡ ಚಿತ್ರ ವಿಮರ್ಶೆ
ಹೆಂಡತಿಯ ಮೇಲೆ ಅನವಶ್ಯಕ ಅನುಮಾನ ಪಡುವುದರಿಂದ ಏನೆಲ್ಲ 'ಗಂಡಾಂತರ'ಆಗುತ್ತದೆ ಎಂದು ಎಲ್ಲರಿಗೂ ಗೊತ್ತು. ಎಲ್ಲದಕ್ಕೂ ಮದ್ದಿದೆ, ಆದರೆ ಅನುಮಾನ ಎಂಬ ಪಿಶಾಚಿಗೆ ಔಷಧ ವಿಲ್ಲ. ಅಂಥದ್ದೇ ಅನುಮಾನ ಪಡುವ ಒಬ್ಬ ಯಜಮಾನನ ಕತೆಯೇ ನಂಜನಗೂಡು ನಂಜುಂಡ.
ಇಡೀ ಚಿತ್ರ ಬೋರ್ಗಲ್ಲ ಮೇಲೆ ನೀರು ಸುರಿದಂತೆ. ಕತೆ ಎಲ್ಲಿಂದಲೋ ಹುಟ್ಟಿ ಇನ್ನೆಲ್ಲೋ ಮಧ್ಯಂತರಗೊಂಡು ಮತ್ತೆಲ್ಲೋ ಲಿಂಗೈಕ್ಯವಾಗುತ್ತದೆ. ಈ ನಡುವೆ ಪ್ರೇಕ್ಷಕನಿಗೆ ನಿಜವಾಗಿಯೂ ನಂಜುಂಡ ಅನುಭವ. ನಿರ್ದೇಶಕ ಶ್ರೀನಿವಾಸ್ ಪ್ರಸಾದ್ ಒಂದೊಳ್ಳೆ ಕತೆಯನ್ನು ರಿಮೇಕ್ ಮಾಡುವಲ್ಲೂ ಸೋತಿದ್ದಾರೆ.
ಇಡೀ ಚಿತ್ರದ ಒಂದೇ ಒಂದು ಸ್ಪೆಷಾಲಿಟಿ-ರವಿಶಂಕರ್ ನಟನೆ. ಸಿಲ್ಲಿಲಲ್ಲಿಯಲ್ಲಿ ಮನೆಮಂದಿಯನ್ನು ಹೇಗೆ ನಿರಂತರವಾಗಿ ನಗಿಸುತ್ತಿದ್ದರೋ ಇಲ್ಲಿ ಅದಕ್ಕಿಂತ ಹತ್ತು ಪಟ್ಟು ಮಜಾ ಕೊಡುತ್ತಾರೆ. ಶ್ರದ್ಧೆಯಿಟ್ಟು ನಟಿಸುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಸೀರಿಯಸ್ ಆಗಿದ್ದುಕೊಂಡೇ ನಗಿಸುತ್ತಾರೆ. ಹಾಸ್ಯದ ಅಲೆಯನ್ನು ಸುನಾಮಿ ರೂಪದಲ್ಲಿ ಏಳಿಸುತ್ತಾರೆ.
ಒಟ್ಟಾರೆ ರವಿಶಂಕರ್ ಕನ್ನಡ ಚಿತ್ರರಂಗಕ್ಕೆ ಮುಂದೊಂದು ದಿನ ದೊಡ್ಡ ಆಸ್ತಿಯಾಗುವುದಂತೂ ನಿಜ. ಒಳ್ಳೆ ಕತೆ, ನಿರ್ದೇಶಕ ಸಿಕ್ಕರೆ ಅವರು ನಿಜಕ್ಕೂ ಸ್ಕೋರ್ ಮಾಡುತ್ತಾರೆ. ಪರಭಾಷೆಯಿಂದ ಆಮದು ಮಾಡಿಕೊಂಡಿರು ಹಂಸಿಣಿ ನಗುವುದೊಂದನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ.
ಸಂಗೀತ ಸಾಮಾನ್ಯ, ಸಂಕಲನ ಸರ್ವೇಸಾಮಾನ್ಯ. ಛಾಯಾಗ್ರಹಣ ಡಿಮ್ಮೋಡಿಮ್ಮು. ಸಂಭಾಷಣೆ ನಿರ್ದೇಶಕರ ಮತ್ತೊಂದು ಹರ ಸಾಹಸಕ್ಕೆ ಹಿಡಿದ ಕನ್ನಡಿ. ಚಿತ್ರಕತೆ ಚುರುಕಾಗಿಲ್ಲ.
ಮಾಮೂಲಿ ಎನಿಸುವ ನಿರೂಪಣೆ... ನಿರ್ದೇಶಕರು ಮುಂದಿನ ತಯಾರಿಯಲ್ಲಿ ಬೇಕಾದಷ್ಟು ಬದಲಾವಣೆ ಮಾಡಿಕೊಂಡರೆ ಒಂದು ಉತ್ತಮ ಚಿತ್ರ ಕೊಡಬಹುದು.