Don't Miss!
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಟ್ಟರು ಇಂಥ ಕತೆಯಿಂದಾಚೆ ಬರುವ ಸಮಯ ಬಂದಿದೆ
ಸಂತೋಷ್ ಪಾತಾಜೆ ಟಾಪ್ ಆಂಗಲ್ಲಿನಲ್ಲಿ ಜಗತ್ತನ್ನೇ ತೋರಿಸುತ್ತಾರೆ. ಅವರ ಕೆಮರಾ ನಮ್ಮ ಕಣ್ಣಾಗುತ್ತದೆ. ಪುನೀತ್ ಕುಣಿಯುವಾಗಲೂ ತನ್ಮಯರಾಗುವುದನ್ನು ನೀವು ಯಾವಾನಿಗೊತ್ತು ಹಾಡಲ್ಲಿ ನೋಡಬಹುದು. ಹಳೆಯ ಗೆಳೆಯರ ಹಾಗಿರುವ ಅವಿನಾಶ್, ಅನಂತ್ನಾಗ್, ದತ್ತಣ್ಣ ಇವರೆಲ್ಲ ಕಾಣಿಸಿಕೊಂಡು ಸಿನಿಮಾವನ್ನು ಆಪ್ತವಾಗಿಸುತ್ತಾರೆ.
ಭಟ್ಟರ ಸಾಹಸ ಮತ್ತು ಸಂಕೋಚಗಳು ಚಿತ್ರದಲ್ಲೂ ಕಾಣಿಸುತ್ತವೆ. ಕರಡಿ ಪರಮ್ ಏಟು ತಿನ್ನುವುದು, ಅದನ್ನು ಅವಳು ನೋಡುವುದು, ಅವಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು, ಅನಂತ್ನಾಗ್ ಪಾತ್ರ ಸಾಯದೇ ಸತ್ತ ಎಫೆಕ್ಟ್ ಸೃಷ್ಟಿಸುವುದು ಇಂಥ ದೃಶ್ಯಗಳಲ್ಲಿ ಅತಿರೇಕ ಸಾಧ್ಯವಿತ್ತು. ಭಟ್ಟರು ಅವನ್ನೆಲ್ಲ ನಿಗ್ರಹಿಸಿದ್ದಾರೆ. ತುಂಬ ಭಾವುಕರಾದರೆ, ದಾಂಪತ್ಯದಲ್ಲಿ ಗಾಢ ನಂಬಿಕೆ ಇದ್ದರೆ ನಿಮಗಿದು ಇಷ್ಟವಾಗುತ್ತದೆ. ತಮಾಷೆಗೆ ಹಾಡುಗಳಿವೆ. ಹೊಡೆದಾಟವೂ ಇದೆ. ಚಿತ್ರವನ್ನು ಸುಖಿಸುತ್ತಾ ಹೊರಬಂದು ಯೋಚಿಸಿದರೆ ಎರಡು ಸಂಗತಿಗಳು ಕಣ್ಣೆದುರು ಸುಳಿಯುತ್ತವೆ.
ಭಟ್ಟರು ಇಂಥ ಕತೆಯಿಂದಾಚೆ ಬರುವ ಸಮಯ ಬಂದಿದೆ. ತಮಾಷೆ ಒಂದು ಹಂತದ ತನಕ ನಿರ್ದೇಶಕನನ್ನು ಕಾಪಾಡುತ್ತದೆ. ಭಟ್ಟರು ಬರಹಗಾರನೂ ಆಗಿರೋದರಿಂದ ಗೋಡೆ ಜಿಗಿಯಲೇ ಬೇಕು. ಜಿಗಿದಾಗೆಲ್ಲ ನೆಲವೇ ಸಿಗಬೇಕು ಎಂದು ಕಾಯುತ್ತಾ ಕೂರುವುದು ಜಾಣತನವಾಗುತ್ತದೆಯೇ ಹೊರತು ಸೃಜನಶೀಲತೆಯಲ್ಲ. (ಉದಯವಾಣಿಯಲ್ಲಿ ಪ್ರಕಟವಾದ ವಿಮರ್ಶೆ)