Don't Miss!
- News Agniveer: 'ಅಗ್ನಿವೀರ್' ಯೋಜನೆಗೆ ಬದಲಾವಣೆ ತರಲು ಕೇಂದ್ರ ಮುಕ್ತ: ರಕ್ಷಣಾ ಸಚಿವ
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಶಾಸ್ತ್ರೀ’ಯ ರಕ್ತಪಾತ ಶಿಬಿರ
- ಚೇತನ್ ನಾಡಿಗೇರ್
ಎಲ್ಲೇ, ಯಾರೇ ಶಾಸ್ತ್ರಿ ಅಂತ ಕರೆದ್ರೂ ಅಲ್ಲಿ ಶಾಸ್ತ್ರಿ ಇರ್ತಾನೆ. ಎಲ್ಲೆಲ್ಲಿ ತಪ್ಪು ನಡೆಯುತ್ತೋ ಅಲ್ಲೆಲ್ಲಾ ಶಾಸ್ತ್ರಿ ಇರ್ತಾನೆ. ಇದು ಶಾಸ್ತ್ರಿ ತಪ್ಪುಲ್ಲ. ಏಕೆಂದರೆ ಚಿತ್ರದ ಪೂರಾ ತಪ್ಪು ನಡೆಯುತ್ತಿರುವಾಗ ಮತ್ತು ಆ ತಪ್ಪನ್ನು ಸರಿಪಡಿಸಲು ಯಾರಾದರೂ ಕರೆದಾಗ ಶಾಸ್ತ್ರಿಯಂಥವನು ಸುಮ್ಮನೆ ಇರಲು ಸಾಧ್ಯವೇ? ಹಾಗಾಗಿ ಶಾಸ್ತ್ರಿ ಚಿತ್ರದ ತುಂಬಾ ಆವರಿಸಿಕೊಂಡಿರುತ್ತಾನೆ. ಆಗಾಗ ನ್ಯಾಯ, ನೀತಿ, ಧರ್ಮಗಳ ಬಗ್ಗೆ ಒಳ್ಳೊಳ್ಳೆ ಡೈಲಾಗ್ ಹೊಡೆಯುತ್ತಾನೆ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುತ್ತಾನೆ. ಉಚಿತ ರಕ್ತಪಾತ ಶಿಬಿರವನ್ನೇ ಏರ್ಪಡಿಸುತ್ತಾನೆ. ರುಂಡ-ಮುಂಡ ಚಂಡಾಡಿ ತೃಪ್ತನಾಗುತ್ತಾನೆ. ಮತ್ತಷ್ಟೂ ಬೇಜಾರಾದಾಗ ಹಾಡಿ ಕುಣಿಯುತ್ತಾನೆ. ಎರಡು ಬಾರಿ ಸಾವಿನ ಮನೆಯ ಕದ ತಟ್ಟಿ ಅಜೇಯನಾಗಿ ಉಳಿದು ಬರುತ್ತಾನೆ. ಈ ಎಲ್ಲಾ ಆರ್ಭಟಗಳ ಮಧ್ಯೆ ಕಥೆ ಕೂಡಾ ಮೆಲ್ಲಗೆ ಸದ್ದಿಲ್ಲದೆ ಹಾದು ಹೋಗುತ್ತದೆ. ಆ ಕಥೆಯನ್ನು ಸಾಧ್ಯವಾದರೆ ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿ.
ಶಾಸ್ತ್ರಿ ಪಾತ್ರ ದರ್ಶನ್ಗೆ ಹೇಳಿ ಮಾಡಿಸಿದ ಹಾಗಿದೆ. ಕೆಲವು ದೃಶ್ಯಗಳಲ್ಲಿ ಅವರ ಅಭಿನಯದಲ್ಲಿ ಸಾಯಿಕುಮಾರ್ ಇಣುಕುವುದೂ ಇದೆ. ನಾಲ್ಕೈದು ಹಾಡುಗಳಲ್ಲಿ, ಕಾಮೆಂಟರಿ ಕೊಡುತ್ತಾ ಫೈಟ್ ಮಾಡುವ ದೃಶ್ಯವಂತೂ ಅಭಿಮಾನಿಗಳಿಗೆ ಹಬ್ಬ. ಬೇರೆ ಯಾರಿಗಲ್ಲದಿದ್ದರೂ ಅವರು ತಮ್ಮ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ. ನಾಯಕಿ ಮಾನ್ಯ ಮುದ್ದಾಗಿ ಕಾಣಿಸುತ್ತಾರೆ. ಅಭಿನಯವೂ ಸಲೀಸು. ಚಿತ್ರ ಶೆಣೈ, ಜಿ.ಕೆ. ಗೋವಿಂದರಾವ್, ಬಿ.ವಿ.ರಾಧಾ, ಆದರ್ಶ ಮುಂತಾದ ಕಲಾವಿದರೂ ಈ ಚಿತ್ರದಲ್ಲಿದ್ದಾರೆ. ಆದರೆ ದರ್ಶನ್ರ ಅಭಿನಯದ ದರ್ಶನ(!)ದ ಮುಂದೆ ಅವರೆಲ್ಲಾ ತುಸು ಡಲ್ಲು.
ಕಥೆ, ಚಿತ್ರಕಥೆ, ಸಂಭಾಷಣೆ ಜತೆ ಸತ್ಯು ನಿರ್ದೇಶನವನ್ನೂ ಮಾಡಿದ್ದಾರೆ. ಆದರೆ, ಗೆಲ್ಲುವುದು ಮಾತ್ರ ಸಂಭಾಷಣೆಯಲ್ಲಿ,‘ಬೇಡಿದ ವರ ಕೊಡೋವ್ನು ದೇವ್ರು’, ‘ಪ್ರಾಣ ಉಳಿಸೋನು ಶಾಸ್ತ್ರಿ’, ‘ಮಹಾತ್ಮ ಕಟ್ಟಿದ್ದು ದೇಶಾನ, ಈ ಶಾಸ್ತ್ರಿ ಕಟ್ಟಿದ್ದು ಸ್ನೇಹಾನ’, ‘ಪೊಲೀಸ್ ಸ್ಕೆಚ್ ಹಾಕಿದ್ರೆ ಬೇಲ್ ಸಿಗುತ್ತೆ’, ‘ಶಾಸ್ತ್ರಿದೀಪಾವಳಿ ರಾಕೆಟ್ ಅಲ್ಲ , ರಾಮನ ಬತ್ತಳಿಕೇಲಿರೋ ಬಾಣ’ ಎಂದು ಶಾಸ್ತ್ರಿಯ ಬಗ್ಗೆ ಅವನು ಹಾಗೂ ವೈರಿಗಳು ಹೇಳುವ ಶಾಸ್ತ್ರ ಚಪ್ಪಾಳೆ ಗಿಟ್ಟಿಸುತ್ತದೆ.
ವೀನಸ್ ಮೂರ್ತಿಯವರ ಛಾಯಾಗ್ರಹಣದಲ್ಲಿ ಹೊಡೆದಾಟದ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಅದೇ ರೀತಿ ಸಂಕಲನಕಾರ ಎಸ್. ಮನೋಹರ್ ಕೂಡಾ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇದೊಂದು ಮಾರಾಮಾರಿ ಚಿತ್ರವೆಂದೋ ಏನೋ ಸಾಧು ಕೋಕಿಲ ಸಂಗೀತದಲ್ಲಿ ಸಾಕಷ್ಟು ಮಾರಾಮಾರಿ ತುಂಬಿದ್ದಾರೆ. ಅದು ಅವರ ಸಂಗೀತದ ತಪ್ಪೋ, ಚಿತ್ರಮಂದಿರದ ಮಿಸ್ಟೇಕೋ ಗೊತ್ತಿಲ್ಲ? ಒಟ್ಟಿನಲ್ಲಿ ಹಾಡುಗಳುದ್ದಕ್ಕೂ ಬರೀ ಆರ್ಭಟ ತುಂಬಿದೆ. ಅಲ್ಲದೆ ಈ ಚಿತ್ರದಲ್ಲೂ ಅವರು ತಮ್ಮ ಎಂದಿನ ಚೋರಿ ಚೋರಿ ಚುಪ್ಕೆ ಚುಪ್ಕೆ ಮುಂದುವರಿಸಿದ್ದಾರೆ. ಒಂದು ಹಾಡಿನಲ್ಲಂತೂ ಹಿಂದಿಯ‘ಕಾಂಟೆ’ ಚಿತ್ರದ ‘ಜಾನೆ ಕ್ಯಾ ಹೋಗಾ ರಾಮಾ ರೆ’ಹಾಡಿನ ಟ್ಯೂನನ್ನು ನೇರವಾಗಿ ಬಳಸಿಕೊಂಡಿದ್ದಾರೆ. ಇನ್ನು ನೇರವಾಗಿರುವ ಹಾಡುಗಳಿದ್ದರೂ ಅದು ಸರಿಯಾಗಿ ಅರ್ಥವಾಗುವುದಿಲ್ಲ. ಒಟ್ಟಿನಲ್ಲಿ ಈಗಾಗಲೇ ಒಮ್ಮೆ ಹೇಳಿದ ಹಾಗೆ ಶಾಸ್ತ್ರಿ ಅಭಿಮಾನಿಗಳಿಗಂತೂ ಮೋಸ ಮಾಡುವುದಿಲ್ಲ. ಹಾಗಾಗಿ ಅಭಿಮಾನಿಗಳೂ ಕೂಡಾ ಒಂದು ಬಾರಿ ಚಿತ್ರ ನೋಡಿದರೆ ಅಡ್ಡಿಯಿಲ್ಲ!
(ಸ್ನೇಹ ಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್