Don't Miss!
- Technology Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ: ತರಂಗಿಣಿ, ಹಳ್ಳಿ ಪರಿಸರದ ಚಿತ್ರ
ಒಂದು ವಿಷಯಾಧಾರಿತ ಚಿತ್ರ ಮಾಡುವುದು ಸುಲಭದ ಮಾತಲ್ಲ. ಅಲ್ಲಿ ಒಂದಷ್ಟು ಪೂರ್ವತಯಾರಿ ಬೇಕು. ಅಂಥದ್ದೊಂದು 'ಕಲಾತ್ಮಕ'ತೆ ತರಂಗಿಣಿ ಚಿತ್ರಕ್ಕಿದೆ. ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಗೆದ್ದಿರುವುದೇ ಇಲ್ಲಿ. ಹಳ್ಳಿಯೊಂದರಲ್ಲಿ ಕೈಗಾರಿಕೆಯೊಂದು ಉದ್ಭವಿಸಿದರೆ ಜನಕ್ಕೆ ಏನೆಲ್ಲಾ ತೊಂದರೆಯಾಗುತ್ತದೆ. ಅದು ಉಗುಳುವ ತ್ಯಾಜ್ಯ ವಸ್ತುಗಳು ಹಳ್ಳಿಗರ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಉಂಟುಮಾಡುತ್ತವೆ. ಅದರಿಂದಾಗುವ ಸಾಧಕ ಬಾಧಕಗಳೇನು...? ಹೀಗೆ ಪ್ರತಿಯೊಂದನ್ನೂ
'ಡಾಕ್ಯುಮೆಂಟರಿ' ರೂಪದಲ್ಲಿ ತೆರೆದಿಡುತ್ತದೆ ತರಂಗಿಣಿ.
ಊರಿಗೆ ಊರು ಕೈಗಾರಿಕೆಯ ಕೈಗೊಂಬೆಯಾಗುವ ಮುನ್ನ ನಾಯಕ ಎತ್ತೆಚ್ಚುಕೊಳ್ಳುತ್ತಾನೆ. ಜನರನ್ನು ಬಡಿದೆಚ್ಚರಿಸುತ್ತಾನೆ. ಮುಂದೆ ಆಗುವ ಅನಾಹುತ ವಿವರಿಸುತ್ತಾನೆ. ಹೋರಾಡುತ್ತಾನೆ. ಕೋರ್ಟ್ ಮೆಟ್ಟಿಲೇರುತ್ತಾನೆ. ಅವನಿಗೆ ಬೆಂಗಾವಲಾಗಿ ಪತ್ರಕರ್ತೆ ರೂಪದ ನಾಯಕಿ ನಿಲ್ಲುತ್ತಾಳೆ. ಅಲ್ಲಿಂದ ಇನ್ನೊಂದು ವ್ಯೂಹ. ಬಿಗಡಾಯಿಸಿದ ಪರಸ್ಥಿತಿ... ಮೋಹನ್ ಎಂದಿನಂತೆ ಅಚ್ಚುಕಟ್ಟಾಗಿ ನಟಿಸಿದ್ದಾರೆ.
ತೇಜಸ್ವಿನಿ ನಟನೆಯಲ್ಲಿ ಸುಧಾರಣೆ ಇಲ್ಲ ಎನ್ನುವುದನ್ನು ಬಿಟ್ಟರೆ ಉಳಿದದ್ದೆಲ್ಲ ಸೊಗಸು. ಶ್ರೀನಿವಾಸಮೂರ್ತಿ, ಬಿ.ಸಿ.ಪಾಟೀಲ್ ಮೊದಲಾದವರಿಂದ ಕೆಲಸ ತೆಗೆಸುವಲ್ಲಿ
ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಂಗೀತ ಪರವಾಗಿಲ್ಲ. ಛಾಯಾ ಗ್ರಹಣ ನೋಡಿಸಿಕೊಂಡು ಹೋಗುತ್ತದೆ. ಸಂಕಲನ ಕತ್ತರಿಗೇ 'ಸವಾಲು' ಹಾಕುವಷ್ಟು ಜಾಳಾಗಿದೆ! ಒಟ್ಟಾರೆ ತರಂಗಿಣಿ ಒಂದು ಹಂತ ಮುಟ್ಟುವವರೆಗೆ ಅದ್ಭುತ ಸಾಕ್ಷ್ಯ ಚಿತ್ರ. ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮೂರನೇ ವಾರವೂ ಸಾಕ್ಷಿಯಾಗಿದ್ದರೆ ಅದು ಯಶಸ್ವೀ ಚಿತ್ರ... ಇಲ್ಲವಾದರೆ...