Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕ ರಮೇಶ್ ಪ್ರತಿಭೆಯ ತಾಜಾ ಸೆಳಕು, ದರ್ಶನ್-ಓಂಪುರಿ ಉತ್ತಮ ಅಭಿನಯ, ಚುರುಕು ಸಂಭಾಷಣೆ, ಸಾಧು ಕೋಕಿಲ ಕಿಲಕಿಲ.. ಇಂತಿಪ್ಪ ಧ್ರುವ ನೋಡಬಲ್ ಚಿತ್ರ.
ಮಾತಿನಲ್ಲಿ ರಮೇಶ್ ಮಿಂಚಿದ್ದಾರೆ. ಎಷ್ಟೋ ಕಡೆ ಬಿದ್ದು ಹೋಗುವ ದೃಶ್ಯಗಳನ್ನು ಸಂಭಾಷಣೆಯೇ ಎತ್ತಿ ಹಿಡಿದಿದೆ. ಹಾಗೆಯೇ ದರ್ಶನ್, ರಾಜಕೀಯ ಪುಢಾರಿಯನ್ನು ತನ್ನ ಕುಟುಂಬ ಮತ್ತು ಸ್ನೇಹಿತರಿಗೆ ಪರಿಚಯ ಮಾಡಿಸಿ, ಏನಾದರೂ ಮಾಡಿಕೋ ಎಂದು ಹೇಳುವ ದೃಶ್ಯ ಅವರ ಹೊಸತನದ ನಿರ್ದೇಶನಕ್ಕೆ ತಾಜಾ ಉದಾಹರಣೆ. ಆದರೆ ದರ್ಶನ್ ರಾಜಕೀಯ ನಾಯಕನಾಗಿ ಹೊರಹೊಮ್ಮುವ ರೀತಿಯಲ್ಲೇ ಇನ್ನೂ ಸ್ವಲ್ಪ ವೇಗ ಬೇಕಾಗಿತ್ತು . ಯಾರು ಬೇಕಾದರೂ ರಾಜಕೀಯ ನಾಯಕನಾಗಬಹುದು ಎಂಬಂತೆ ಚಿತ್ರಿಸಿರುವುದು ನೀರಸವಾಗುತ್ತದೆ.
ದರ್ಶನ್ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಡೈಲಾಗ್ ಡೆಲಿವರಿಯಲ್ಲಿ ಇನ್ನಷ್ಟು ಫೋರ್ಸ್ ರೂಢಿಸಿಕೊಳ್ಳಬೇಕು. ದತ್ತಣ್ಣನ ಪಾತ್ರ ಚಿಕ್ಕದಾದರೂ ನೆನಪಿನಲ್ಲಿ ಉಳಿಯುತ್ತದೆ. ಕಾರ್ಯವಾಸಿ ಕತ್ತೆಕಾಲು ಹಿಡಿಯುವವನಾಗಿ ಅವಿನಾಶ್, ಅಂಡರ್ ವರ್ಲ್ಡ್ ಡಾನ್ ಧರ್ಮ, ನಗಿಸುವ ಸಾಧು ಕೋಕಿಲ ಮೋಸ ಮಾಡುವುದಿಲ್ಲ . ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ‘ಧ್ರುವ’ ಹಾಗಾಗದಂತೆ ತಡೆದಿರುವುದು ರಮೇಶ್ಗೆ ಸಿಗುವ ಕ್ರೆಡಿಟ್. ಇದು ಇವರ ಪ್ರಥಮ ನಿರ್ದೇಶನದ ಚಿತ್ರ. ಅದೂ ಅಪ್ಪಟ ಸ್ವಮೇಕ್. ಇದೆಲ್ಲ ಪ್ಲಸ್ ಪಾಯಿಂಟ್ಗಳಿಗಾದರೂ ‘ಧ್ರುವ’ನನ್ನು ಒಮ್ಮೆ ನೋಡಬಹುದು ; ನೋಡಿ.
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್