Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಸಂಚಾರಿ ಸುಪಾರಿ ಕಿಲ್ಲರ್ ಸ್ಟೋರಿ
ನಿರ್ದೇಶನ ಚೆನ್ನಾಗಿದೆ, ಸಂಗೀತ ಸೂಪರ್ ಆಗಿದೆ. ಛಾಯಾಗ್ರಹಣ ಭಿನ್ನ ಎನಿಸುತ್ತದೆ. ಕತೆ ತಕ್ಕ ಮಟ್ಟಿಗೆ ಇದೆ. ಆದರೂ ಚಿತ್ರದಲ್ಲಿ ಕೆಲ ಮೈನಸ್ ಪಾಯಿಂಟ್ ಕಾಣುತ್ತದೆ-ಕಾಡುತ್ತದೆ-ಕಾಡುತ್ತಲೇ ಇರುತ್ತದೆ!
ಹಾಗಾಗಲು ಕಾರಣ ನಾಯಕ ರಾಜ್. ದೂರದಲ್ಲಿ ಕ್ಯಾಮೆರಾ ಇಟ್ಟರೂ ಅವರನ್ನು ಸಹಿಸಿಕೊಳ್ಳುವುದು ಕಷ್ಟ ಕಷ್ಟ. ಇಲ್ಲಿ ನೋಡುತ್ತಾರೆ, ಅಲ್ಲೆಲ್ಲೋ ಮಾತನಾಡುತ್ತಾನೆ.ಅಲ್ಲಿ ನೋಡುತ್ತಾ, ಇಲ್ಲಿ ಹೊಡೆಯುತ್ತಾನೆ. ಮುಂದಿನ ಚಿತ್ರದಲ್ಲಿ ಅವರ ನಟನೆಯಲ್ಲಿ ಸಾಕಷ್ಟು ತಿದ್ದುಪಡಿಯಾಗ ಬೇಕಿದೆ.
ಸಂಚಾರಿ-ಇದೊಂದು ಸುಪಾರಿ ಕಿಲ್ಲರ್ ಸ್ಟೋರಿ. ಅನ್ಯಾಯದ ವಿರುದ್ಧ ಹೋರಾಡುವ ಹುಡುಗನ ಡವ ಡವ ಕತೆ. ನಿರ್ದೇಶಕರು ಎಲ್ಲ ಹಂತದಲ್ಲೂ ಇಷ್ಟವಾಗುತ್ತಾರೆ. ಆದರೆ, ನಾಯಕ ರಾಜ್ನ ಅಸಹನೀಯ ಅಭಿನಯದಿಂದ ಚಿತ್ರ ಸೊರಗಿದೆ. ವಿಶೇಷ ಎನ್ನುವಂತೆ ನಾಯಕಿ ಬಿಯಾಂಕಾ ದೇಸಾಯಿ ಕೂಡ ಚೆನ್ನಾಗಿ ನಟಿಸಿದ್ದಾರೆ.
ರಂಗಾಯಣ ರಘು ಎಂದಿನಂತೇ ಹರಟುತ್ತಾರೆ. ಸಂಗೀತ ನಿರ್ದೇಶಕ ಅರ್ಜುನ್ ಮತ್ತೊಮ್ಮೆ 'ಬಿರುಗಾಳಿ' ಎಬ್ಬಿಸಿದ್ದಾರೆ. 'ದೀಪವೇ ನೋಡುಬಾ... ಗಾಳಿಯಾ ನರ್ತನ...' ಹಾಡಂತೂ ಮಾಧುರ್ಯಕ್ಕೆ ಬರೆದ ಮುನ್ನುಡಿ. ರೀರೆಕಾರ್ಡಿಂಗ್ ಕೂಡ ಲವಲವಿಕೆಯಿಂದ ಕೂಡಿದೆ.