Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೃತ್ಯವಿದೆ, ಹಾಡಿದೆ. ಫೆಂಟಾಸ್ಟಿಕ್ ಫ್ಯಾಂಟಸಿಗಳಿವೆ. ಗ್ರಾಫಿಕ್ ಮಾಂತ್ರಿಕ ಸ್ಪರ್ಶವಿದೆ.. ರಜನಿ ಚಿತ್ರದಲ್ಲಿ ಏನೇನಿರಬೇಕೋ ಅವಷ್ಟೂ ಇವೆ. ಜೊತೆಗೆ ರಾಜಕೀಯಕ್ಕಿಳಿಯುವ ಪೂರ್ವ ಸೂಚನೆಯೂ ಚಿತ್ರದಲ್ಲಿದೆ.
ಪೆರಿಯಾರ್ ರಾಮಸ್ವಾಮಿಯವರಿಗೆ ತದ್ವಿರುದ್ಧವಾದ ತತ್ವಗಳನ್ನು ಬೋಧಿಸುವ ಪಾಠಗಳಿವೆ. ಮೂಢನಂಬಿಕೆಯ ಹತ್ತಿರ ಹೋಗಿ ನಂತರ ಅದನ್ನು ವಾಸ್ತವಕ್ಕೆ ತಂದು ನಿಲ್ಲಿಸುವ ತಂತ್ರಗಳಿವೆ. ಎಂಜಿಆರ್, ಶಿವಾಜಿಗಣೇಶನ್ ಅವರನ್ನು ಲೇವಡಿಯಾಡುವ ದೃಶ್ಯಗಳಿವೆಯಾದರೂ ಕೊನೆಯಲ್ಲಿ ಒಳ್ಳೆಯ ತತ್ವಗಳನ್ನು ಸ್ವೀಕರಿಸುವ ಮೂಲಕ ಅವರ ಅಭಿಮಾನಿಗಳ ಕೃಪೆಗೆ ಪಾತ್ರವಾಗುವ ಸಂದರ್ಭಗಳಿವೆ. ಕರುಣಾನಿಧಿ ಇದ್ದಾರೆ, ಅಣ್ಣಾದೊರೈ ಇದ್ದಾರೆ. ಅಷ್ಟೇ ಏಕೆ, ಚಿತ್ರದ ತುಂಬಾ ಜಯಲಲಿತಾ ಇದ್ದಾರೆ. ಕಾಣುವ ಕಣ್ಣಿಗೆ ಇದೊಂದು ಪೊಲಿಟಿಕಲ್ ಸಟೈರ್. ಕಾಣದ ಕಣ್ಣಿಗೆ ಟಿಪಿಕಲ್ ರಜನಿ ಚಿತ್ರ.
ಅಭಿನಯದಲ್ಲಿ ರಜನಿಯದ್ದು ಟಿಪಿಕಲ್ ರಜನಿ ಸ್ಟೈಲ್! ಸುಜಾತಾ, ನಂಬಿಯಾರ್, ಸೆಂದಿಲ್, ಡೆಲ್ಲಿ ಗಣೇಶ್, ಆಶಿಷ್ ವಿದ್ಯಾರ್ಥಿ, ಅಮರೀಶ್ಪುರಿ ಅಭಿನಯ ಖುಷಿ ಕೊಡುತ್ತದೆ. ಮನೀಷಾ ಒಂದು ಚೆಂದದ ಗೊಂಬೆ. ರೆಹಮಾನ್ರ ಸಂಗೀತ ಪೂರಕ. ಕ್ಯಾಮರಾ ಕೆಲಸ ಚೇತೋಹಾರಿ.
ಒಟ್ಟಿನಲ್ಲಿ ಕ್ರಿಯೇಟರ್ ಗಾಡ್ಫಾದರ್ ಆಗಿದ್ದಾತ ಅಧಿಕಾರದ ಚುಕ್ಕಾಣಿ ಹಿಡಿಯುವ ಸೂಚನೆಯವರೆಗೆ ಬಂದು ಚಿತ್ರ ನಿಲ್ಲುತ್ತದೆ. ಕೊನೆಯಲ್ಲಿ ಇದು ಆರಂಭ ಎಂಬ ಘೋಷ ವಾಕ್ಯ. ರಜನಿ ರಾಜಕೀಯಕ್ಕಿಳಿಯುವುದು ಇಲ್ಲಿ ಸಾಬೀತಾಗುತ್ತದೆ.
(ವಿಜಯ ಕರ್ನಾಟಕ)
ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್ವುಡ್