Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರ ವಿಮರ್ಶೆ: ಚಿರು ಪರಿಚಿತ ಮಾಮೂಲಿ ಕಥೆ
ಚಿರು ಮತ್ತೊಂದು ಆಕಾಶ್"- ಚಿತ್ರ ಬಿಡುಗಡೆಗೆ ಮುಂಚಿನ ಪತ್ರಿಕಾಗೋಷ್ಠಿಯಲ್ಲಿ ಹಾಗೆಂದು ಹೇಳಿಕೊಂಡಿದ್ದರು ನಿರ್ದೇಶಕ ಮಹೇಶ್ ಬಾಬು. ಅದು ಅಕ್ಷರಶಃ ಸತ್ಯ ಎಂಬುದು ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಮಧು ಗೃಹ ಮಂತ್ರಿಯ ಮಗಳು. ಆಕೆ ಚಿರುವಿನನನ್ನು ಇಷ್ಟಪಡುತ್ತಿದ್ದಾಳೆ ಎಂದು ತಪ್ಪಾಗಿ ಭಾವಿಸಿ ಇನ್ನಿಲ್ಲದ ಕಷ್ಟ ಕೊಡುತ್ತಾನೆ.
ಆದರೆ ವಾಸ್ತವವೇ ಬೇರೆ. ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ ಸಿನಿಮಾ. ಚಿತ್ರದ ಕೊನೆಯವರೆಗೂ ನಾಯಕ, ನಾಯಕಿ 'ಐ ಲವ್ ಯೂ" ಹೇಳಿಕೊಳ್ಳುವುದಿಲ್ಲ. ಚಿತ್ರ ನೋಡುತ್ತಾ ಹೋದಂತೆ ಇಬ್ಬರ ಮೇಲೂ ಅನುಕಂಪ ಮೂಡುತ್ತದೆ. ಮೊದಲರ್ಧವಂತೂ ಸೂಪರ್.
ಒಂದೂಕಾಲು ಗಂಟೆ ಕಳೆದದ್ದೇ ಗೊತ್ತಾಗುವುದಿಲ್ಲ. ತಮಗಿರುವ ಆಕ್ಷನ್ ಹೀರೋ ಇಮೇಜ್ ಬದಲಿಸುವ ಚಿತ್ರವಿದು ಎಂಬ ಚಿರಂಜೀವಿ ಸರ್ಜಾ ಅವರ ನಿರೀಕ್ಷೆ ಸ್ವಲ್ಪ ಮಟ್ಟಿಗೆ ಹುಸಿಯಾಗಿದೆ. ನಾಲ್ಕೈದು ಫೈಟ್ಗಳಿವೆಯಾದರೂ ಹಿಂಸೆಯ ವೈಭವೀಕರಣವಿಲ್ಲ. ಕಥೆಗೆ ಪೂರಕವಾಗಿ ಹೊಡೆದಾಟಗಳಿವೆ. ಇಡೀ ಚಿತ್ರವನ್ನು ಆವರಿಸಿಕೊಂಡಿರುವುದು ಲವ್, ಲವ್ ಅಂಡ್ ಲವ್.
ನಾಯಕ ಚಿರು, ನಾಯಕಿ ಕೃತಿ ಖರಬಂದ, ಪೋಷಕ ಪಾತ್ರದಲ್ಲಿರುವ ರಂಗಾಯಣ ರಘು, ಪದ್ಮಾ ವಾಸಂತಿ, ಕಿರಣ್, ಬುಲೆಟ್ ಪ್ರಕಾಶ್ ಎಲ್ಲರಿಗೂ ಪೂರ್ಣಾಂಕ ನೀಡಲು ಅಡ್ಡಿಯಿಲ್ಲ.
ಆಕಳಿಕೆಗೆ ಅವಕಾಶವಿಲ್ಲದಂತೆ ನಿರೂಪಿಸಿರುವುದರಿಂದ ಇದೇ ಮಾತು ನಿರ್ದೇಶಕರಿಗೂ ಅನ್ವಯ. ಗಿರಿಧರ್ ಸಂಗೀತ, ಹರ್ಷ ಅವರ ನೃತ್ಯ ಸಂಯೋಜನೆ ಓಕೆ. ಸುಂದರನಾಥ್ ಸುವರ್ಣರ ಛಾಪು ಛಾಯಾಗ್ರಹಣದಲ್ಲಿ ಎದ್ದು ಕಾಣುತ್ತದೆ. ಜಯಂತ ಕಾಯ್ಕಿಣಿ, ಗೌಸ್, ಮಹೇಶ್ ಬಾಬು ರಚಿಸಿರುವ ಹಾಡುಗಳ ಸಾಹಿತ್ಯ ಕಿವಿಗಿಂಪು. ಮಾರ್ಸ್ ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಿಸಿದ್ದಾರೆ ಸುರೇಶ್ ಜೈನ್.