Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಯ ಮೇಲೆ ಎಲ್ಲ ‘ಉಡೀಸ್’
- ಚೇತನ್ ನಾಡಿಗೇರ್
ಈಗ ಕಥೆಯ ವಿಷಯಕ್ಕೆ ಬರೋಣ. ಪರಮೇಶ್ವರಪ್ಪನವರದು(ಶ್ರೀನಿವಾಸ ಮೂರ್ತಿ)ಅತ್ಯಂತ ಸುಖಿ ಹಾಗೂ ಕಡು ಬಡ ಕುಟುಂಬ. ಮಗ ಸತ್ಯ(ಮಯೂರ್)ನಿಗೆ ಸಂಗೀತವೆಂದರೆ ಪಂಚ ಪ್ರಾಣ. ದೊಡ್ಡ ಸಿಂಗರ್ ಆಗಬೇಕೆಂಬ ದೊಡ್ಡ ಆಸೆ ಇಟ್ಟುಕೊಂಡಿರುತ್ತಾನೆ. ಮಗಳು ಅನು ಪ್ರಭಾಕರ್ ಮದುವೆ ಮಯಸ್ಸಿಗೆ ಬಂದಿರುತ್ತಾಳೆ. ಹೇಗೋ ಮದುವೆಯೂ ಗೊತ್ತಾಗುತ್ತದೆ. ಆದರೆ ದುಡ್ಡಿಲ್ಲ. ಎಂಗೇಜ್ಮೆಂಟಿಗೇ 10 ಸಾವಿರ ಬೇಕಾಗುತ್ತದೆ. ಸರಿ ಮೀಟರ್ ಬಡ್ಡಿ ಮೋಹನನ (ಹರೀಶ್ ರಾಯ್) ಹತ್ತಿರ ಸಾಲ ಮಾಡುತ್ತಾರೆ. ಮೋಹನ ವಸೂಲಿಗೆ ನಿಂತರೆ ಬ್ರಹ್ಮನಿಗಿಂಥ ಒಳ್ಳೆಯವನು, ಯಮನಿಗಿಂತ ಕೆಟ್ಟವನು. ಸಾಲವನ್ನು ಅವನೆಂದೂ ತಿಂಗಳ ಬಡ್ಡಿಗೆ ಕೊಡುವವನಲ್ಲ. ಅವನಿಗೆ ಪ್ರತಿ ದಿನ ಬಡ್ಡಿ ಬೇಕು. ಬಡ್ಡಿಯಿಲ್ಲ ಎಂದರೆ ಸೀದಾ ಉಡೀಸ್. ಎಲ್ಲಾ ಬಿಟ್ಟು ಪರಮೇಶ್ವರಪ್ಪ ಅಂಥವನ ಹತ್ತಿರ ವ್ಯವಹಾರಕ್ಕಿಳಿಯುತ್ತಾರೆ.
ಸಾಲವೇನೋ ಸಿಗುತ್ತದೆ ಆದರೆ ಅವರಿಗೆ ಬಡ್ಡಿ ಕಟ್ಟಲಾಗುವುದಿಲ್ಲ. ಮೋಹನ ಸೀದಾ ಪರಮೇಶ್ವರಪ್ಪನ ಮನೆಗೆ ನುಗ್ಗಿ ನಿಶ್ಚಿತಾರ್ಥ ನಿಲ್ಲಿಸುತ್ತಾನೆ. ದುಡ್ಡು ಕೊಡಲಾಗದಿದ್ದರೆ ಮಗಳನ್ನು ಕಳಿಸು ಎಂದು ಕೆಟ್ಟದಾಗಿ ಮಾತಾಡುತ್ತಾನೆ. ಇದನ್ನು ಕೇಳಿ ಸತ್ಯನ ಪಿತ್ತ ನೆತ್ತಿಗೇರುತ್ತದೆ. ಅಲ್ಲಿಯವರೆಗೂ, ಲವ್ ಮಾಡುತ್ತಾ ಹಾಡುತ್ತಾ ಇದ್ದ ಸತ್ಯಅನಿವಾರ್ಯವಾಗಿ ಲಾಂಗ್ ಹಿಡಿಯುತ್ತಾನೆ. ‘ಕತ್ತಿ ಮುಟ್ಟಬಾರದು ಆದರೆ ಮುಟ್ಟಿದ್ದೀನಿ. ಇದನ್ನು ಬಿಟ್ಟರೆ ನಾನು ಬದ್ಕೋಲ್ಲ’ ಎಂದು ರೌಡಿಸಂ ಫೀಲ್ಡ್ನ ಕಾಯಂ ಸದಸ್ಯನಾಗುತ್ತಾನೆ. ಲಾಂಗು ಹೋಗಿ ಗನ್ ಬರುತ್ತದೆ. ಒಂದು ಕಾಲದಲ್ಲಿ ಗಿಟಾರ್ ಸತ್ಯ ಎನಿಸಿಕೊಂಡವನು ಕೊನೆಗೆ ಗನ್ ಸತ್ಯನಾಗುತ್ತಾನೆ. ಆಮೇಲಿನದೆಲ್ಲಾ ಉಡೀಸ್, ಉಡೀಸ್ ಹಾಗೂ ಉಡೀಸ್.
ಚಿತ್ರದ ನಿಜವಾದ ಹೈಲೈಟೆಂದರೆ ನಾಯಕ ಮಯೂರ್. ಹೊಡೆದಾಟದ ದೃಶ್ಯಗಳಲ್ಲೂ ಅವರ ಅಭಿನಯ ಚೆನ್ನಾಗಿದೆ. ಅವರ ಡೈಲಾಗ್ ಹೇಳುವ ಶೈಲಿಯೇ ಡಿಫರೆಂಟ್ ಎನಿಸುತ್ತದೆ. ಅವರ ಜತೆಗೆ ಕುಡಕವಾಗಿ ಸತ್ಯಜಿತ್ ಹಾಗೂ ರಾಜಕಾರಣಿಯಾಗಿ ಶ್ರೀರಾಮ್ ಅವರ ಅಭಿನಯ ಗಮನ ಸೆಳೆಯುತ್ತದೆ. ಶ್ರೀನಿವಾಸ ಮೂರ್ತಿ ಅಭಿನಯ ಕೂಡಾ ಓಕೆ. ನಾಯಕಿ ಪಾತ್ರಗಳಿಂದ ಪೋಷಕ ಪಾತ್ರಗಳಿಗೆ ಶಿಫ್ಟಾದಂತೆ ಕಾಣುವ ಅನುಪ್ರಭಾಕರ್ ಚಿಕ್ಕ ಪಾತ್ರದಲ್ಲೂ ಚೊಕ್ಕವಾಗಿ ಕಾಣಸಿಕೊಂಡಿದ್ದಾರೆ.
ಇನ್ನು ಹರೀಶ್ರಾಯ್, ಸಿದ್ದಾರ್ಥ ಮುಂತಾದವರ ನಟನೆ ಕಿರುಚಾಟದಲ್ಲಿ ಅಡಗಿದೆ. ಚಿತ್ರದಲ್ಲಿ ಒಬ್ಬಳು ನಾಯಕಿಯಿದ್ದಾಳೆ. ನಾಯಕನನ್ನು ಅತಿಯಾಗಿ ಪ್ರೀತಿಸುತ್ತಾಳೆ. ಆದರೆ ನಾಯಕ ಮಾತ್ರ ಅವಳಿಂದ ಯಾವಾಗಲೂ ದೂರ. ‘ನೀನೇನು ಉಪ್ಪು, ಹುಳಿ, ಖಾರ ತಿನ್ನಲ್ವಾ’ ಎಂದು ಮಾತಿನಲ್ಲೇ ನಾಯಕನನ್ನು ಉಡೀಸ್ ಮಾಡುತ್ತಾಳೆ. ನಿಜ ಜೀವನದಲ್ಲಿಲ್ಲದಿದ್ದರೂ ಕನಸಿನಲ್ಲಾದರೂ ಅವನ ಜತೆ ಇರೋಣ ಎಂದು ಎರಡು ಹಾಡುಗಳಲ್ಲಿ ಮತ್ತೆರಡು ಫೈಟುಗಳಲ್ಲಿ ಭಾಗಿಯಾಗುತ್ತಾಳೆ. ಹಾಗೆಯೇ, ಚಿತ್ರದಲ್ಲಿ ಸಾಕಷ್ಟು ಪವಾಡಗಳೂ ನಡೆಯುತ್ತವೆ. ಕೆ.ಪಿ.ಎಸ್.ಸಿ ಪರೀಕ್ಷೆ ಬರೆದವನು ಐ.ಪಿ.ಎಸ್ ಅಧಿಕಾರಿಯಾಗುತ್ತಾನೆ ! ಅಧಿಕಾರವಹಿಸಿಕೊಂಡ ತಕ್ಷಣವೇ ಎನ್ಕೌಂಟರ್ ಮಾಡಲಿಕ್ಕೆ ಕಳಿಸಲ್ಪಡುತ್ತಾನೆ!
ಕಥೆ, ಚಿತ್ರಕಥೆ, ನಿರ್ದೇಶನದ ಜತೆಗೆ ಸತ್ಯ ಸಂಭಾಷಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಮೊದಲ ಮೂರು ವಿಭಾಗಗಳಲ್ಲಿ ಹೊಸತನವಿಲ್ಲದಿದ್ದರೂ, ಸಂಭಾಷಣೆ ಮಾತ್ರ ಹೊಸದಾಗಿ ಕೇಳಿಸುತ್ತದೆ. ‘ನಮ್ಮ ಜನಕ್ಕೆ ತಾಯಿ ಹಾಲಿಗಿಂತ ಮಲತಾಯಿ ಬಿರ್ಯಾನಿನೇ ಹೆಚ್ಚು ಇಷ್ಟ’. ‘ಮಾತು ತಪ್ಪಿದ್ರೆ ನಿನ್ನ ಆಡಿಯೋ-ವೀಡಿಯೋ (ನಾಲಿಗೆ- ಕಣ್ಣು) ಎರಡೂ ಉಡೀಸ್’, ‘ಈ ಸತ್ಯಂಗೆ ತಲೆ ಬಗ್ಗಿಸಿ ಗೊತ್ತೇ ಹೊರತು ಮರೆಸಿಕೊಂಡು ಅಭ್ಯಾಸವಿಲ್ಲ’, ‘ರೌಡಿಸಂ ನಂಥ ಗಾಜಿನ ಮನೆ ಬಿಟ್ಟು ಪ್ರೀತಿ ಎಂಬ ಅರಮನೆಗೆ ಬಾ’ ಮುಂತಾದ ಅವರ ಸಂಭಾಷಣೆಗಳಿಗೆ ಸಾಕಷ್ಟು ಚಪ್ಪಾಳೆ ಬೀಳುತ್ತವೆ. ವೆಂಕಟ್-ನಾರಾಯಣ್ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿದೆ.
(ಸ್ನೇಹ ಸೇತು : ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್