Don't Miss!
- Finance ತಿರುಪತಿ ದೇವಸ್ಥಾನದ ಟ್ರಸ್ಟ್ ಬೋರ್ಡ್ನಲ್ಲಿ ಆರ್ಥಿಕ ಅವ್ಯವಹಾರ: ಟಿಟಿಡಿ ಆರೋಪ
- Automobiles ಹೊಚ್ಚ ಹೊಸ ಪೋಕ್ಸ್ವ್ಯಾಗನ್ ವರ್ಟಸ್ ಜಿಟಿ ಕಾರು ಖರೀದಿಸಿದ ಕನ್ನಡದ ನಟಿ
- News ಚಾಮರಾಜನಗರ: ಅಧಿಕೃತ ಘೋಷಣೆಗೂ ಮುನ್ನ ಸಚಿವ ಎಚ್.ಸಿ.ಮಹದೇವಪ್ಪ ಪುತ್ರನ ನಾಮಪತ್ರ ಸಲ್ಲಿಕೆ ದಿನಾಂಕ ಫಿಕ್ಸ್
- Lifestyle ಸೂರ್ಯ ಗ್ರಹಣದ ವೇಳೆ ಕಾರು ಅಪಘಾತ ಹೆಚ್ಚಳ..! ವಿಜ್ಞಾನಿಗಳಿಂದಲೇ ಎಚ್ಚರಿಕೆ..!
- Sports IPL 2024: ಮೊದಲ ಗೆಲುವಿನ ಕನಸಿನಲ್ಲಿ ಮುಂಬೈ, ಎಸ್ಆರ್ಎಚ್
- Technology ಇಂದು ಲಾವಾ O2 ಫಸ್ಟ್ ಸೇಲ್!..ಈ ಸ್ಮಾರ್ಟ್ಫೋನ್ ಅಗ್ಗದ ಬೆಲೆಗೆ ಲಭ್ಯ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಂಕರ್ ಐಪಿಎಸ್: ಪಡ್ಡೆ ಹುಡುಗರ ಪಾಲಿನ ಪಂಚಾಮೃತ
'ಕಾಮ ಅನ್ನೋದು ಮಕ್ಕಳನ್ನು ಹುಟ್ಟು ಹಾಕೋ ಕಲೆಯಾಗಿರಬೇಕೇ ಹೊರತು ಸುಟ್ಟು ಹಾಕೋ ಬೆಂಕಿಯಾಗಿರಬಾರದು' ನಾಯಕ ಹೀಗೆ ಹೇಳುತ್ತಲೇ ಕಾಮಂಧರ ಮಗ್ಗಲು ಮುರಿ ಯುತ್ತಾನೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತಾನೆ. ಜಾಸ್ತಿ ಮಾತನಾಡಿದರೆ ಪಿಸ್ತೂಲು ತೆಗೆಯುತ್ತಾನೆ. ಆತನನ್ನು 'ಮಹಾತ್ಮ"ಎನ್ನುವುದಕ್ಕಿಂತ 'ಅಂತ"ರ್ಯಾಮಿ ಎನ್ನಬಹುದು.
ಅವನದ್ದು ಒಂದು ಪೊಲೀಸ್ ಸ್ಟೋರಿ. ಅನ್ಯಾಯಕ್ಕೆ ಹೋರಾಡಿದ ಅವನಿಗೆ ಸಿಕ್ಕ ನ್ಯಾಯವದು. ಹಾಗಾಗಿ ಆತ ಕಾನೂನು ಕೈಗೆತ್ತಿಕೊಳ್ಳುತ್ತಾನೆ.ಹೊಡೆಯುತ್ತಾನೆ. ಬಡಿಯುತ್ತಾನೆ. ಬಡಿದಾಡುತ್ತಾನೆ. ಮಧ್ಯೆ ಮಧ್ಯೆ ಒಂದಷ್ಟು ಡೈಲಾಗ್ ಒಗಾಯಿಸುತ್ತಾನೆ. ಮೈ ಕೈ ಕಸರತ್ತು ಮಾಡುತ್ತಾನೆ. ಸಿಕ್ಸ್ ಪ್ಯಾಕ್ಸ್ ತೋರಿಸುತ್ತಾನೆ. ಹೊಡೆದಾಟದ ಹಾದಿ ಕೊನೆಗೊಂಡಾಗ ಬೀಚ್ ಮಧ್ಯೆ ಬಂದು ನಾಯಕಿಯ ಜತೆ 'ಹಗ್ಗ ಜಗ್ಗಾಟ" ಶುರುಮಾಡುತ್ತಾನೆ!
ಒಟ್ಟಾರೆ ಶಂಕರ್ ಐಪಿಎಸ್ ಪಡ್ಡೆ ಹುಡುಗರ ಪಾಲಿನ ಪಂಚಾಮೃತ. 'ಸಿಳ್ಳೆ'ಖ್ಯಾತ ಹೈದರಿಗಂತೂ ಹಬ್ಬವೋ ಹಬ್ಬ.ವಿಜಯ್ ಬಾಯಿಂದ ಉಂಡೆಯಂತೆ ಡೈಲಾಗ್ ಉಗುಳುತ್ತಿದ್ದರೆ ಜನ ಧರೆ ಹತ್ತಿ ಉರಿದಂತೆ ಕೇಕೆ ಹಾಕುತ್ತಾರೆ. ನಿರ್ದೇಶಕ ಎಮ್.ಎಸ್.ರಮೇಶ್ ಆ ಮಟ್ಟಿಗೆ ಡೈರೆಕ್ಷನ್ ಜೊತೆ ಡೈಲಾಗ್ ಕರೆಕ್ಷನ್ ಅನ್ನೂ ವ್ಯವಸ್ಥಿತ ರೀತಿಯಲ್ಲಿ ಮಾಡಿದ್ದಾರೆ.
ಅಮಾಯಕ ಹೆಣ್ಣುಮಕ್ಕಳ ಮೇಲೆ ಆಸಿಡ್ ದಾಳಿ ಎಂಬ ವಿಷಯಾಧಾರಿತ ಎಳೆಯನ್ನು ಚಿತ್ರವಾಗಿಸಿ ಗೆದ್ದಿದ್ದಾರೆ. ವಿಜಯ್ ಸಿಕ್ಸ್ ಪ್ಯಾಕ್ಸ್ ನೋಡೋಕೇ ಚೆಂದ. ರಾಗಿಣಿ ಕುಣಿತ ಕಾಣೋಕೆ ಅಂದ. ಇನ್ನೊಬ್ಬಾಕೆ ಕ್ಯಾತರಿನ್ ನಡೆದಾಡುವ ಬೊಂಬೆ. ನಗುವೊಂದೇ ಆಕೆಯ ಬಂಡವಾಳ. ರಂಗಾಯಣ ರಘು ಬಹಳ ದಿನಗಳ ನಂತರ ಅತ್ಯುತ್ತಮ ಪಾತ್ರ ಮಾಡಿದ್ದಾರೆ. ಅವರು ಕೇವಲ
ಕಾಮಿಡಿಯನ್ ಎಂದು ನಕ್ಕವರ ಮುಖಕ್ಕೆ ಹೊಡೆದಂತೆನಟಿಸಿದ್ದಾರೆ.
ಶೋಭರಾಜ್, ಅವಿನಾಶ್ ಎಲ್ಲರಿಗೂ ನೋಟ್ ಆಗುವ ಪಾತ್ರ. ಕಾಮಿಡಿಗೆ ಇನ್ನೊಂದಿಷ್ಟು ಒತ್ತು ಕೊಡಬಹುದಿತ್ತು. ಗುರುಕಿರಣ್ ಸಂಗೀತ ಪರವಾಗಿಲ್ಲ. ಸಾಹಸ ದೃಶ್ಯಗಳು ಮನಮೋಹಕ, ರೋಮಾಂಚಕ. ಒಟ್ಟಾರೆ ವಿಜಯ್ ಹಾಗೂ ಆಕ್ಷನ್ ಅಭಿಮಾನಿಗಳಿಗೆ ಶಂಕರ್ ಹೋಳಿಗೆ ಊಟ ಇದ್ದಂತೆ! (ಸ್ನೇಹಸೇತು: ವಿಜಯ ಕರ್ನಾಟಕ)