Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖುಷಿ ನೀಡಬಲ್ಲ ಈ ‘ರಿಷಿ’
- ಮಹಾಂತೇಶ ಬಹಾದುಲೆ
ಅದಕ್ಕೆ ತುಂಬಿದ ಕುಟುಂಬದ ಕಥೆಯಾಂದೆಡೆ, ತಂದೆಯೇ ಗೊತ್ತಿಲ್ಲದ ಹುಡುಗ ಪರಿತಪಿಸುವ ವ್ಯಥೆಯನ್ನು ಇನ್ನೊಂದೆಡೆ ಇಟ್ಟು, ಕೊನೆಗೆ ಅವೆರಡನ್ನು ಬ್ಯಾಲನ್ಸ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕನ್ನಡ ಪ್ರೇಕ್ಷಕ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಅಪ್ಪಟ ಮನರಂಜನೆಯ ಖುಷಿಯನ್ನು ಈ ರಿಷಿ ಚಿತ್ರ ನೀಡಬಲ್ಲದು.
ರಿಷಿ(ಶಿವರಾಜಕುಮಾರ್) ತುಂಬಿದ ಸಂಸಾರದಲ್ಲಿ ಹುಟ್ಟಿ ಬೆಳೆದವ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಟ್ರಸ್ಟಿ ಬೇರೆ. ಅದಕ್ಕೆ ತಕ್ಕಂತೆ ಅವನಿಗೆ ದುಡ್ಡು, ಅಂತಸ್ತು, ಗೌರವ ಧಾರಾಳ, ಧಾರಾಳ. ಅದೇ ಕಾಲೇಜಿಗೆ ವಿದ್ಯಾರ್ಥಿಯಾಗಿ ಬರುತ್ತಾನೆ ಹರಿ(ವಿಜಯ ರಾಘವೇಂದ್ರ).
ಅಪ್ಪ ನ ವಿಷಯ ಯಾರಾದರೂ ಕೆಣಕಿದರೆ ಅವರ ಮೇಲೆ ಹರಿಹಾಯುವುದೇ ಈ ಹರಿಯ ಕಾಯಕ. ಇವನ ತಂದೆ ಯಾರೆಂಬುದನ್ನು ಹರಿಯ ತಾಯಿ(ವಿನಯ ಪ್ರಸಾದ್) ಮುಚ್ಚಿಟ್ಟಿರುವ ಕಾರಣ ಅದಕ್ಕುಂಟು. ಈ ವಿಷಯಕ್ಕಾಗೇ ಪ್ರಾಧ್ಯಾಪಕರೊಬ್ಬರ ಮೇಲೆ ಹರಿಹಾಯ್ದಾಗ ಕಾಲೇಜಿನಿಂದಲೇ ಇವನನ್ನು ಹೊರಗಟ್ಟುವ ಪ್ರಸಂಗ. ಆಗ ಆತನ ನೆರವಿಗೆ ಬರುವವನು ರಿಷಿ.
ಹಾಗಿದ್ದರೆ ಇವರಿಬ್ಬರ ನಡುವಿನ ಸಂಬಂಧವೇನು ಎಂಬುದು ಗೊತ್ತಾಗುವುದು ವಿರಾಮದ ನಂತರವೆ. ಅದನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿ ಹರಿಯನ್ನು ಒಪ್ಪಿಸಲು ರಿಷಿ ಪಡುವ ಹರಸಾಹಸ ಕಥೆಯುದ್ದಕ್ಕೂ ಬೆಳೆದುಕೊಂಡು ಹೋಗಿದೆ. ಅಂದರೆ ಈ ಸಿನಿಮಾದಲ್ಲಿ ಹುಡುಗಿಯರೇ ಇಲ್ಲವೇ ಅಂತ ಕೇಳಬೇಡಿ.
ನಮ್ಮ ಕನ್ನಡದ ಹುಡುಗಿ ರಾಧಿಕಾ ‘ಸ್ಫೂರ್ತಿ’ಯಾಗಿ, ಹರಿಯ ಪ್ರೇಯಸಿಯಾಗಿ ಕಾಣಿಸಿಕೊಂಡರೆ, ಪರಭಾಷೆ ನಟಿ ಸಿಂಧು ಅವಳದು ಸ್ನೇಹಾಳ ಪಾತ್ರ. ಅವಳ ‘ಸ್ನೇಹ’ ರಿಷಿಯ ಜತೆ. ಒಬ್ಬಳು ರಿಷಿಯ ಆಶಯಕ್ಕೆ ಪೂರಕವಾಗಿ ನಿಂತರೆ, ಮತ್ತೊಬ್ಬಳು ಕೊಂಚ ಅಡಚಣೆಯಾಗುತ್ತಾಳೆ. ಕೊನೆಗೆ ಎಲ್ಲವೂ ಸುಖಾಂತ್ಯ.
ಇಲ್ಲಿನ ಪ್ರಸಂಗಗಳಲ್ಲಿ ಅಳುವಿನ ಆಲಾಪಕ್ಕಿಂತ ನಗುವಿನ ಕೇಕೆಯೇ ಹೆಚ್ಚು. ಎಲ್ಲಿ ಕಥೆ ಎಡವಟ್ಟಾಯ್ತಾ ಏನೊ ಎಂಬ ಅಳುಕನ್ನು ಪ್ರೇಕ್ಷಕರಲ್ಲಿ ಹುಟ್ಟಿಸಿ, ಅದನ್ನು ಮತ್ತೆ ಸರಾಗವಾಗಿ ಪೋಣಿಸುತ್ತ ಹೋಗುವ ನಿರ್ದೇಶಕನ ಜಾಣ್ಮೆ, ಚಿತ್ರಕ್ಕೆ ತೂಕ ತಂದಿದೆ. ಇವರ ಮೊದಲ ಚಿತ್ರ ‘ಖುಷಿ’. ಆ ಹೆಸರಿನ ಭಾವ ಇದರಲ್ಲಿ ಕಾಣಿಸಿಕೊಂಡಿದೆ.
ಇತ್ತೀಚೆಗಂತೂ, ಬರೀ ಸೋಲಿನ ಸರಮಾಲೆಯನ್ನೇ ಕಂಡಿರುವ ಶಿವರಾಜ್ಕುಮಾರ್ ಹಾಗೂ ವಿಜಯ ರಾಘವೇಂದ್ರ, ಸೋಲಿನ ಮೇಲೆ ಸೇಡು ತೀರಿಸಿಕೊಳ್ಳುವಂತೆ ನಟಿಸಿದ್ದಾರೆ.
ವಿಜಯ ರಾಘವೇಂದ್ರ ಈಗ ಎಳೆ ಹುಡುಗನಲ್ಲ. ರಾಧಿಕಾ ತಾನು ಗ್ಲಾಮರ್ಗೂ ಸೂಟ್ ಆಗುತ್ತೇನೆ ಎಂದು ತೋರಿಸಿಕೊಟ್ಟಿದ್ದಾಳೆ. ಸಿಂಧು ಅಭಿನಯ ಪರವಾಗಿಲ್ಲ.
ಹಿನ್ನೆಲೆ ಸಂಗೀತ ಹಿತವಾಗಿದೆ. ಗುರುಕಿರಣ್ ಸಂಗೀತ ಸುಮಧುರವಾಗಿದ್ದು, ಒಂದೆರಡು ಹಾಡುಗಳು ಗುನುಗುವಂತಿವೆ. ತಿಳಿಯಾದ ಹಾಸ್ಯ ಆಗಾಗ ಕಚಗುಳಿ ಇಡುತ್ತದೆ. ದೊಡ್ಡಣ್ಣ ಹಾಗೂ ರಾಮಕೃಷ್ಣ ಅದನ್ನು ಪೋಷಿಸಿದ್ದಾರೆ. ಕೃಷ್ಣಕುಮಾರ್ ತಮ್ಮ ಕ್ಯಾಮರಾ ಕೈಚಳಕ ತೋರಿಸಿದ್ದಾರೆ. ಈ ಟೀಮ್ ವರ್ಕ್ಗೆ ತುಂಬ ದಿನದ ಹೋಂ ವರ್ಕ್ ಚೆನ್ನಾಗಿ ನೆರವಾಗಿದೆ ಎಂದು ಬೇರೆ ಹೇಳಬೇಕಿಲ್ಲ.
ಮುಖಪುಟ / ಸ್ಯಾಂಡಲ್ವುಡ್