Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆಯಷ್ಟೇ ಧರಣಿ ನಡೆದಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಧರಣಿ ನಡೆಸುವ ಜರೂರತ್ತು ಎದುರಾಗಿದೆ... !
ಇಲ್ಲಿ ಕತೆಗಾಗಲಿ, ಪಾತ್ರಗಳಿಗಾಗಲಿ ದಿಕ್ಕು ದೆಸೆ ಇಲ್ಲ. ಅಸಲಿಗೆ ಪಾತ್ರಗಳಿಗೆ ಜೀವವೇ ಇಲ್ಲ. ಇವರೆಲ್ಲರೂ ನಿರ್ಭಾವುಕ ಮನುಷ್ಯರು. ಮದುವೆಯಾದಾಗಲೂ ಮಸಣದ ಸುದ್ದಿ ಬಂದಾಗಲೂ ಇವರದು ಒಂದೇ ಮುಖಭಾವ. ನೋ ಎಕ್ಸ್ಪ್ರೆಶನ್ಸ್ ! ಗಂಭೀರತೆ ಮಾಯವಾಗಿದೆ. ಇನ್ನೇನು ಕೊಲೆ ಆಗುತ್ತೆ ಅನ್ನುವಾಗ ಕೋಡಂಗಿತನದ ಪಾತ್ರಗಳು ಹಾಜರಾಗುತ್ತವೆ. ಅದು ಮುಗಿದರೆ ಮತ್ತೆ ಕೊಲೆ ಪ್ರಕರಣ...
ಚರಣ್ ರಾಜ್, ಮೋಹನ್, ಶೋಭರಾಜ್, ಸಿರಿ ಹೆಸರಿಗೆ ಇದ್ದಾರೆ. ಅವರು ತಮಗೆ ಅವಕಾಶ ಸಿಕ್ಕಷ್ಟು ತಮ್ಮ ಕೈಲಾದಷ್ಟು ನಟಿಸಿದ್ದಾರೆ. ಶ್ರೀಕಂಠ ಮತ್ತು ಮುತ್ತು ರಾಜ್ ಎಂಬ ಹಾಸ್ಯ ಕಲಾವಿದರು ಈ ಚಿತ್ರದ ಮೂಲಕ ಕನ್ನಡಕ್ಕೆ ಅಮರಿಕೊಂಡಿದ್ದಾರೆ. ಹಾಡು ಸಂಗೀತ, ಫೋಟೋಗ್ರಫಿ ಎಲ್ಲದಕ್ಕೂ ಎಳ್ಳು ನೀರು ಬಿಡಲಾಗಿದೆ. ಕೆಟ್ಟ ಸಂಕಲನ ತನ್ನ ಕೈಚಳಕದಿಂದ ಚಿತ್ರಕ್ಕೆ ಹೊಸ ಆಯಾಮ ನೀಡಿದೆ !
‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆ ತಾನೆ ಉದ್ಯಮ ಧರಣಿ ನಡೆಸಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಯಾರು ಧರಣಿ ನಡೆಸಬೇಕು ಎಂಬುದನ್ನು ಈ ಚಿತ್ರ ನೋಡಿ ಅವರೇ ನಿರ್ಧರಿಸಬೇಕು !
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್