Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವುಗೆ, ಪಾಟೀಲ್ಗೆ ಬಂದಾರೆ ಮುನಿಸು... ಅಳುತಾರೆ...
- ಎಂ.ಡಿ.
ಇದು 15 ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ‘ಕೌರವರ್’ ಚಿತ್ರದ ರಿಮೇಕು. ಮುಮ್ಮಟ್ಟಿ ಮತ್ತು ವಿಷ್ಣು ಮಾಡಿದ ಪಾತ್ರಗಳನ್ನು ಇಲ್ಲಿ ದೇವರಾಜ್ ಮತ್ತು ಬಿ.ಸಿ. ಪಾಟೀಲ್ ಮಾಡಿದ್ದಾರೆ. ಅಲ್ಲಿಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯ ಕಾಣುವುದಿಲ್ಲ. ಇದೊಂದು ಸೇಡಿನ ಕತೆ. ದತ್ತಣ್ಣ ದೊಡ್ಡ ಡಾನ್. ದೇವರಾಜ್ ಆತನ ಬಲಗೈ ಬಂಟ. ಇನ್ಸ್ಪೆಕ್ಟರ್ ಬಿ.ಸಿ. ಪಾಟೀಲ್ ಆ ಊರಿಗೆ ಬಂದು ಅವರನ್ನು ಮಟ್ಟಹಾಕಲು ಯತ್ನಿಸುತ್ತಾನೆ. ಆ ಹೊಡೆದಾಟದಲ್ಲಿ ದತ್ತಣ್ಣನ ಕಾಲು ತುಂಡಾಗುತ್ತದೆ. ಹೆಂಡತಿ ಮಕ್ಕಳ ಕಾಲವಶವಾಗುತ್ತದೆ. ದತ್ತಣ್ಣ ಜೈಲಿಗೆ ಹೋಗಿಬಂದ ಮೇಲೂ ಪಾಟೀಲ್ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಹುಡುಕಾಟದಲ್ಲಿ ತೊಡಗುತ್ತಾನೆ. ಹೇಳ್ತಾ ಹೋದರೆ ಕತೆ ಬೆಳೀತಾನೆ ಹೋಗುತ್ತೆ.
ಬರೀ ಘಟನೆಗಳನ್ನು ಜೊಡಿಸಿಟ್ಟರೆ ಸಿನಿಮಾ ರೆಡಿಯಾಗುತ್ತೆ ಎನ್ನುವ ಭ್ರಮೆಯಲ್ಲಿ ನಿರ್ದೇಶಕನಿದ್ದಾನೆ. ಅವರಿಗೆ ಒಂದು ಉತ್ತಮ ಚಿತ್ರವನ್ನು ಹ್ಯಾಗೆ ರಿಮೇಕ್ ಮಾಡಬೇಕೆನ್ನುವುದೂ ಗೊತ್ತಿಲ್ಲ. ಯಾವುದೋ ಒಂದು ಭಾವವನ್ನು ಹಿಡಿದಿಡಲೂ ಅವರಿಗೆ ಸಾಧ್ಯವಾಗಿಲ್ಲ. ದೇವರಾಜ್, ಬಿ.ಸಿ. ಪಾಟೀಲ್ ಮತ್ತು ತಾರಾ ತಮ್ಮ ಪಾತ್ರಗಳಿಗೆ ಏನು ಬೇಕೋ ಅದನ್ನು ತುಂಬಿದ್ದಾರೆ. ಆದರೆ ನಿರ್ದೇಶಕನ ತಲೆಯಲ್ಲಿ ಏನೇನೋ ತುಂಬಿರುವುದರಿಂದ ಎಲ್ಲವೂ ತೂತು ಬಿದ್ದ ಕೊಡವಾಗಿದೆ. ಡಾನ್ ರೂಪದಲ್ಲಿ ಕಾಣಿಸಿಕೊಂಡಿರುವ ದತ್ತಣ್ಣನ ಅಭಿನಯ ನೋಡಿದರೆ ಅವರು ಕಾಮಿಡಿ ಪಾತ್ರದಲ್ಲಿ ಮಿಂಚುವ ಸೂಚನೆ ಕಾಣಿಸುತ್ತದೆ.
(ಸ್ನೇಹಸೇತು: ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್