Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾರಂತರಿಗೆ ಖಾರ ಪತ್ರ:ನಿಮ್ ‘ಸ್ಮೈಲ್’ ಹಿಂಗೇನ್ರೀ ?
*ಮಹೇಶ್ ದೇವಶೆಟ್ಟಿ
ಸೀತಾರಾಮ್ ಕಾರಂತರಿಗೆ ದೀಡು ನಮಸ್ಕಾರ.
ನಿಮ್ಮ ಹೆಸರಿನ ಹಿಂದೆ ಪ್ರೀತಿಯ ವಿಶೇಷಣ ಬಳಸಲು ಮನಸಾಗುತ್ತಿಲ್ಲ. ಯಾಕೆಂದರೆ ನೀವು ಮೋಸ ಮಾಡಿದ್ದೀರಿ. ಶುರುವಿನಲ್ಲಿಯೇ ಹೀಗೆ ಹೇಳಿದ್ದಕ್ಕೆ ಸೆಟಗೊಳ್ಳಬೇಡಿ. ಇಷ್ಟು ಮುನಿಸಿನಿಂದ ಬರೆಯಲು ಇರುವ ಒಂದೇ ಕಾರಣ ನೀವು ನಿರ್ದೇಶಿಸಿದ ಸ್ಮೈಲ್ ಚಿತ್ರ.
ಹೆಸರಿಗಷ್ಟೇ ಅದು ‘ಸ್ಮೈಲ್’. ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ತಡಕಾಡಿದರೂ ತುಟಿಯ ಮೇಲೆ ನಗು ಮೂಡಿಸುವ ಒಂದೇ ಒಂದು ದೃಶ್ಯ ಸಿಗಲಿಲ್ಲ. ನೀವು ತಮಾಷೆ ಅಂದುಕೊಂಡಿರುವುದು ಪ್ರೇಕ್ಷಕರ ಆಕಳಿಕೆಗೆ ಕಾರಣವಾಗಿದೆ. ಅದು ಒತ್ತಟ್ಟಿಗಿಟ್ಟು , ಕತೆ ಎಲ್ಲಾದರೂ ಸಿಗುತ್ತವೆಂದರೆ ಅದು ಬುರ್ಬುಶ್. ಹಾಗೆ ನೋಡಿದರೆ ಇದು ಪ್ರೇಮಕತೆಯಾ ಅಥವಾ ಸಾಂಸಾರಿಕ ಕತೆಯಾ ಅಥವಾ ಕಾಮಿಡಿ ಚಿತ್ರವಾ... ಊಹೂಂ, ತಿಪ್ಪರಲಾಗ ಹಾಕಿದರೂ ಏನೂಂತ ಗೊತ್ತಾಗಲಿಲ್ಲ.
ಇನ್ನು ಕತೆ ಅಂತ ನೀವೇನು ತಿಳಿದುಕೊಂಡಿದ್ದೀರೋ ಅಲ್ಲಿಗೆ ಬರೋಣ.
ನಾಯಕ ನಾಯಕಿ ಪರಸ್ಪರ ಪ್ರೇಮ ನಿವೇದನೆ ಮಾಡಿಕೊಳ್ಳದೇ ಪ್ರೇಮಿಗಳಾಗುತ್ತಾರೆ. ಲವ್ ಜಸ್ಟ್ ಹ್ಯಾಪನ್ಸ್. ಹಾಗಂತಲೇ ಇಟ್ಟುಕೊಳ್ಳೋಣ. ಆದರೆ ಅಂತಹ ಪ್ರೀತಿಗೆ ಇರಬೇಕಾದ ಮನೋಜ್ಞತೆ ಮತ್ತು ನವಿರತೆಯೇ ಮಂಗಮಾಯವಾಗಿದ್ದಕ್ಕೆ ಏನು ಹೇಳ್ತೀರಿ ? ನಾಯಕನ ಬಗ್ಗೆ ನಾಯಕಿ ಅನುಮಾನ ಪಡಲು ತೋರಿಸಿದ ಕಾರಣ ನಿಜವೆನಿಸಿದರೂ, ಆತ ಹಕೀಕತ್ತನ್ನು ಹೇಳದೆ ಯಾಕೆ ಮುಚ್ಚಿದ ಹಲ್ಲು ಮೂಗುದಾರ ಹಾಕಿಕೊಂಡಂತೆ ಸುಮ್ಮನಿರಬೇಕು ? ಆತನ ಮೇಲೆ ಅನುಮಾನ ಪಡಲು ಇರುವ ಘಟನೆಗಳಿಗೆ ತಲೆಬುಡವಿಲ್ಲ.
ಮಾತು ಬರೆದ ಕುಮಾರನಿಗೆ ಸಿನೆಮಾದ ಎಬಿಸಿಡಿ ಕಲಿಸಿಕೊಡಿ. ಮನೋಹರ್ ಹಾಡುಗಳಿಗೆ ಅವರ ಸಂಗೀತವೇ ಶತ್ರು. ಲಯವಿಲ್ಲದ ವಾಚ್ಯವಾಗಿರುವ ಹಾಡುಗಳಲ್ಲಿ ಏನೂ ಇಲ್ಲ. ಯಕ್ಷಗಾನ ಬಳಸಿಕೊಂಡ ಹಾಡು ಮಾತ್ರ ಅವರನ್ನು ಸಂಗೀತ ನಿರ್ದೇಶಕನೆನ್ನಲು ಇರುವ ಒನ್ ಆ್ಯಂಡ್ ಓನ್ಲಿ ಕಾರಣ. ನಿಜಕ್ಕೂ ಇಡೀ ಚಿತ್ರದಲ್ಲಿ ರಾಜನ್ ಛಾಯಾಗ್ರಹಣ, ಶಿವರಾಜ್ಕುಮಾರ್ ಅಭಿನಯವೆರಡೇ ನೋಡಲು ಅರ್ಹವಾಗಿವೆ. ಹಾಗೆಯೇ ಹೊಸ ಹುಡುಗಿ ಖುಷಿ, ನಾಯಕನ ಗೆಳೆಯರು ಸಹನೀಯವೆನಿಸುತ್ತಾರೆ.
ಇಷ್ಟುದ್ದ ಪತ್ರ ಬರೆಯಲು ಇದ್ದದ್ದು ಎರಡೇ ಕಾರಣ. ನೀವು ಗಾಂಧೀ ನಗರದ ಮಾಮೂಲಿ ನಿರ್ದೇಶಕ ಅಲ್ಲ. ಎರಡು, ಕೆಲವು ವರ್ಷಗಳ ಹಿಂದೆ ‘ಚಂದ್ರಮುಖಿ ಪ್ರಾಣ ಸಖಿ’ಯಂತಹ ಸದಭಿರುಚಿ ಚಿತ್ರ ನಿರ್ದೇಶನ ಮಾಡಿದ್ದು. ಈಗ್ಯಾಕೋ ನೀವು ಸುಸ್ತಾಗಿದ್ದೀರಿ. ಇನ್ನೇನು ಹೇಳುವುದು ? ಮತ್ತೊಂದು ‘ಚಂದ್ರಮುಖಿ...’ಗಾಗಿ ಕಾಯುತ್ತಿರುವ ಜನರಿಗೆ ಮುಂದಿನ ಚಿತ್ರದಲ್ಲಾದರೂ ಉತ್ತರಿಸಿ.
ಮುಖಪುಟ / ಸ್ಯಾಂಡಲ್ವುಡ್