Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರನ ‘ಓಂಕಾರ’ದ ಹೂಂಕಾರ
- ಎಂ.ಡಿ.
ಹೀಗೆ ಸೀದಾ ಸಾದಾ ಹುಡುಗ ರೌಡಿಯಾಗೋದು ಹೊಸ ವಿಷಯವೇನಲ್ಲ. ಆದರೆ ಹಾಗೆ ರೌಡಿಯಾಗಿ ಸಿನಿಮಾದಲ್ಲಿ ಹೀರೋ ಆಗುವುದಿದೆಯಲ್ಲ.. ಅದಪ್ಪಾ ಹೊಸ ಸಂಗತಿ. ಹೀರೋ ಆಗಿ ಹೀರೋಯಿನ್ ಮೇಲಿನ ಸೇಡು ತೀರಿಸಿಕೊಳ್ಳುವುದಿದೆಯಲ್ಲ ಅದು ಹೇಳಬೇಕಾದ ಸಂಗತಿ. ಇಷ್ಟೆಂದರೆ ಇಷ್ಟೇ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಶಿವಮಣಿ. ಅದಕ್ಕೆ ಕಾರಣ ಉಪೇಂದ್ರ. ಉಪ್ಪಿ ಇಮೇಜು ಅವರಿಗೆ ಗೊತ್ತು. ಅದಕ್ಕಾಗಿ ಚಿಕ್ಕ ಎಳೆಯ ಕತೆಗೆ ಪಂಚಿಂಗ್ ದೃಶ್ಯಗಳನ್ನು ಹೆಣೆದಿದ್ದಾರೆ. ಅದಕ್ಕೆ ಉಪ್ಪಿ ಅವರಿಂದಲೇ ಹಿತವಚನದ ಸಂಭಾಷಣೆ ಬರೆಸಿದ್ದಾರೆ.
ಸಾಮಾನ್ಯವಾಗಿ ಶಿವಮಣಿ ಚಿತ್ರದಲ್ಲಿ ಸಿಗುವ ಗಂಭೀರತೆ ಇಲ್ಲಿ ಪೂರ್ತಿಯಾಗಿ ಸಿಗುವುದಿಲ್ಲ. ಒನ್ಸ್ ಆಗೇನ್ ಅದಕ್ಕೆ ಕಾರಣ ಉಪೇಂದ್ರ. ಇಷ್ಟಾದರೂ ಟೇಕಿಂಗ್ಸ್ನಲ್ಲಿ ಮಣಿ ತಮ್ಮತನ ಕಾದುಕೊಂಡಿದ್ದಾರೆ. ಹೊಡೆದಾಟದ ದೃಶ್ಯಗಳಲ್ಲೂ ಇದು ಎದ್ದು ಕಾಣುತ್ತದೆ. ಉಪೇಂದ್ರ ಅತಿರೇಕವಿಲ್ಲದೆ ಇಷ್ಟವಾಗುತ್ತಾರೆ. ಅವರ ಸಂಭಾಷಣೆ ಕೆಲವು ಕಡೆ ಚಪ್ಪಾಳೆಗಿಟ್ಟಿಸುತ್ತದೆ. ಗುರುಕಿರಣ್ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ. ವೇಣು ಛಾಯಾಗ್ರಹಣ ಕೂಡಾ ಮುಂಬೈ ತೀರದಲ್ಲಿ ಲಕಲಕಿಸುತ್ತದೆ.
ಪ್ರೀತಿ ಜಿಂಗಾನಿಯಾ ಮುದ್ದು ಮುದ್ದಾಗಷ್ಟೇ ಕಾಣುತ್ತಾಳೆ. ದೊಡ್ಡದೊಂದು ಕ್ಯಾನ್ವಾಸಿನ ಮೇಲೆ ನೂರಾರು ಬಣ್ಣಗಳನ್ನು ಒಂದೇ ಸಲಕ್ಕೆ ಚೆಲ್ಲಿದರೆ ಯಾವದನ್ನು ನೋಡಬೇಕೊಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಶ್ರೀಮಂತವಾಗಿ ಮೂಡಿಬಂದಿರುವ ‘ಓಂಕಾರ ’ಅಷ್ಟಕ್ಕೆ ಸೀಮಿತವಾಗಿಲ್ಲ ಅನ್ನುವುದು ಸಮಾಧಾನ. ನೋಡುವವರಿಗೆ ಕೊಂಚ ವ್ಯವಧಾನ.
(ಸ್ನೇಹ ಸೇತು : ವಿಜಯಕರ್ನಾಟಕ)
ಮುಖಪುಟ / ಸ್ಯಾಂಡಲ್ವುಡ್