Don't Miss!
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Lifestyle ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡು ಚಿತ್ರಗಳ ಸಿನಿಸಿಕೆ ಖದೀಮರು, ಒಲವಿನ ಗೆಳತಿ
ತಿಂಗಳಲ್ಲಿ ಒಂದಷ್ಟು ಚಿತ್ರಗಳು ಹೇಳಹೆಸರಿಲ್ಲದಂತೇ ಬಂದು ಹೋಗುತ್ತವೆ. ತೆರೆಕಂಡ ಎರಡೇ ದಿವಸದಲ್ಲಿ ಮಾಯದಂಥ ಮಳೆಯಾಗುತ್ತದೆ. ಅಂಥ ಕೆಲ ಚಿತ್ರಗಳ ಸಾಲಿಗೆ ಸೇರುತ್ತವೆ-ಖದೀಮರು ಮತ್ತು ಒಲವಿನ ಗೆಳತಿ. ಈ ಎರಡೂ ಚಿತ್ರಗಳು ಒಂದೇ ವಾರದೊಳಗೆ ಅಂದರ್-ಬಾಹರ್ ಆಗಿಬಿಟ್ಟಿದೆ.
ಒಂದು ಕಾಲದಲ್ಲಿ ಸಸ್ಪೆನ್ಸ್ ಚಿತ್ರಗಳಿಂದ ಹೆಸರು ಮಾಡಿದ್ದ ಹ.ಸು.ರಾಜಶೇಖರ್ ನಿರ್ದೇಶನದ ಖದೀಮರು ಚಿತ್ರ ನೋಡನೋಡುತ್ತಾ ಪ್ರೇಕ್ಷಕರ ನಿದ್ರೆ ಕದಿಯುತ್ತದೆ. ನಿರ್ದೇಶಕರು ಅಪ್ಡೇಟ್ ಆಗದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ತಾಜಾ-ಮಜಾ ಉದಾಹರಣೆ ಖದೀಮರು.
ಇಲ್ಲಿ ಹುಡುಗರ ಹಿಂಡೇ ಇದೆ. "ಶಿಷ್ಯ" ದೀಪಕ್, ಗಂಡಹೆಂಡತಿ ಗುಂಡಣ್ಣ ತಿಲಕ್, ಪಟ್ರೆ ಅಜಿತ್, ಕಾಳಿದಾಸ ಲವ್ವಲ್ ಬಿದ್ದಿರುವ ಹೀರೋ ಅಮಿನ್, ಲೋಕಿವೇ ಹೇಳಿದ ಮಾತಿದು ನಾಯಕ ರವಿತೇಜ.. ಹೀಗೆ ಚಿಕ್ಕಪುಟ್ಟ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚಿಲ್ಪುಪುಲ್ಟುಗಳದ್ದೇ ಸಾಮ್ರಾಜ್ಯ.
ಅವರೆಲ್ಲ ಸೇರಿ ಕಿಡ್ನಾಪ್ ಮಾಡಲು ಹೋಗುತ್ತಾರೆ. ಅಲ್ಲಿಯೂ ಸೋಲುತ್ತಾರೆ. ಕೊನೆಗೆ ಹಳ್ಳಿಗೆ ಹೋಗಿ ಸೇರಿಕೊಳ್ಳುತ್ತಾರೆ! ಕ್ಲೈಮ್ಯಾಕ್ಸ್ ಹೊತ್ತಿಗೆ ಸಿನಿಮಾ ಹೋಗಿ ಪ್ಯಾಟೇ ಹುಡುಗರ ಹಳ್ಳೀ ಲೈಫ್ ಆಗುತ್ತದೆ! ಒಂದಷ್ಟು ಪೋಷಕ ಪಾತ್ರಗಳು ವೇಸ್ಟ್ ಆಗಿವೆ. ನಾಯಕಿಯರಂತೂ ಹಾಟ್ ಹಾಡಿಗಷ್ಟೇ ಮೀಸಲು.
ಇನ್ನು ಒಲವಿನ ಗೆಳತಿ. ಮಂಡ್ಯ ನಾಗರಾಜ್ ನಿರ್ದೇಶನದ ಒಲವಿನ ಗೆಳತಿ ಚಿತ್ರವಂತೂ ಥೇಟ್ ಪ್ಯಾಟೇ ಹುಡ್ಗೀರ್ ಹಳ್ಳೀ ಲೈಫು! ನಾಯಕಿ ಪೇಟೆಯಿಂದ ಬಂದು ಹಳ್ಳಿಯಲ್ಲಿ ಟೆಂಟ್ ಹಾಕುತ್ತಾಳೆ. ಅಲ್ಲಿದ್ದ ಹಮ್ಮೀರನೊಬ್ಬ ತಾನು ಸಾಹುಕಾರ ಎಂದು ಯಾಮಾರಿಸುತ್ತಾನೆ.
ಕೊನೆಗೆ ಅಲ್ಲಿ ಒಂದಷ್ಟು ತಿರುವು, ಮುರುವು, ಹರಿವು, ಹಸಿವು.. ಇಷ್ಟು ಬಿಟ್ಟರೆ ಒಬ್ಬ ಜಮೀನ್ದಾರನ ಜಿಪುಣತನ.. ನಾಯಕ ಪ್ರಶಾಂತ್ ಮುಟ್ಟಿದ್ದೆಲ್ಲಾ ಮಣ್ಣಾದವೋ ಎಲ್ಲ ಮಣ್ಣಾದವೋ! ನಾಯಕಿಯಂತೂ ಗೋಳು ತೋಡಿಕೊಳ್ಳುವ ಗೊಳಗುಮ್ಮಟ!
ಕೊನೆಸಿಕೆ: ಈ ಎರಡೂ ಚಿತ್ರಗಳನ್ನು ಒಂದೇ ದಿವಸ ಒಂದರ ಮೇಲೊಂದರಂತೇ ನೋಡಿದವರಿಗೆ ಒಲವಿನ ಖದೀಮ ಕಪ್ ಕೊಟ್ಟು ಸತ್ತ್ಕರಿಸಬಹುದು!