ಸ್ವಯಂಕೃಷಿ : ನಾಟಿ ಓಕೆ, ಫಸಲು ಬರೋದು ಬಾಕಿ

ನಾಯಕ ಕಮ್ ನಿರ್ದೇಶಕ ಕಮ್ ನಿರ್ಮಾಪಕನಾಗಿ ಅಕ್ಷರಶಃ ಸ್ವಯಂಕೃಷಿ ಮಾಡಿ ಚಿತ್ರ ಹೊರತಂದಿರುವ ವೀರೇಂದ್ರ ಬಾಬು ತಮ್ಮ ಮೊದಲ ಪ್ರಯತ್ನದಲ್ಲಿ ನಾಟಿ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದಾರೆ. ಚಿತ್ರಕಥೆ ನಿರೂಪಣೆ, ಸಂಭಾಷಣೆ ಮುಂತಾದ ಪ್ರಮುಖ ವಿಭಾಗಗಲ್ಲಿ ವೀರೇಂದ್ರ ಬಾಬು ಅವರ ಪ್ರಯತ್ನಕ್ಕೆ ಬೆನ್ನು ತಟ್ಟಲೇಬೇಕು. ಫಸಲು ಹೇಗೆ ಬರುತ್ತದೋ ಕಾದು ನೋಡಬೇಕು.
ಕಲೆ ವಿಭಾಗದಲ್ಲಿ ಪದವೀಧರನಾಗಿ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ ಚಿತ್ರದ ನಾಯಕ ವಿಜಯ್ ಕುಮಾರ್ (ವೀರೇಂದ್ರ ಬಾಬು). ತನ್ನ ತಾಯಿಯ (ಉಮಾಶ್ರೀ) ಆದೇಶದಂತೆ ನಗರಕ್ಕೆ ಬರುವ ನಾಯಕ ತನ್ನ ಪ್ರೇಯಸಿ ಕಲ್ಯಾಣಿ (ತಮನ್ನಾ) ಆಸೆಯಂತೆ ಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ವೃತ್ತಿ ಜೀವನದ ಆರಂಭದಲ್ಲಿ ಸ್ವಲ್ಪ ಕಷ್ಟ ಅನುಭವಿಸುವ ನಾಯಕ, ಕಲ್ಯಾಣಿ ತಂದೆಗೆ (ಚರಣ್ ರಾಜ್) ಚಾಲೆಂಜ್ ಮಾಡುತ್ತಾನೆ. ಕಾರಣ, ತನ್ನ ಬದಲಾಗಿ ಫಾರಿನ್ ರಿಟರ್ನ್ ಹುಡುಗನನ್ನು ಕಲ್ಯಾಣಿಗೆ ಮಾಡುವೆ ಮಾಡಲು ನಿರ್ಧರಿಸಿದ್ದಕ್ಕೆ.
ಡಯಟ್
More from Filmibeat
English summary
Kannada movie Swayam Krushi review. Movie directed, produced by Veerendra Babu. He is also the lead artist along with actress Tamanna, Ambarish. The effort put in by Veerendra Babu to give clean movie has to be appreciated.


Click it and Unblock the Notifications











