For Quick Alerts
For Daily Alerts
Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ವಯಂಕೃಷಿ : ನಾಟಿ ಓಕೆ, ಫಸಲು ಬರೋದು ಬಾಕಿ
Reviews
oi-Balaraj Tantry
By * ಬಾಲರಾಜ್ ತಂತ್ರಿ
|
ತಾನೂ ಬದುಕಬೇಕು, ಬೇರೆಯವರನ್ನೂ ಬದುಕಲು ಬಿಡಬೇಕು ಎನ್ನುವ ಸಿದ್ದಾಂತವಿರುವ ಚಿತ್ರ. ಚಿತ್ರದ ನಾಯಕ ಒಂದು ರೀತಿಯಲ್ಲಿ ಮಹಾಭಾರತದಲ್ಲಿ ಬರುವ ಏಕಲವ್ಯನ ಪಾತ್ರದ ಹಾಗೆ. ಬಡವನಾಗಿ ಹುಟ್ಟಿದರೂ, ಸಾಯುವಾಗ ಸಾಧನೆಯಲ್ಲಿ ಬಡವನಾಗಿ ಸಾಯಬಾರದು ಎನ್ನುವುದೇ ಚಿತ್ರದ ಸಂದೇಶ.
ನಾಯಕ ಕಮ್ ನಿರ್ದೇಶಕ ಕಮ್ ನಿರ್ಮಾಪಕನಾಗಿ ಅಕ್ಷರಶಃ ಸ್ವಯಂಕೃಷಿ ಮಾಡಿ ಚಿತ್ರ ಹೊರತಂದಿರುವ ವೀರೇಂದ್ರ ಬಾಬು ತಮ್ಮ ಮೊದಲ ಪ್ರಯತ್ನದಲ್ಲಿ ನಾಟಿ ಕೆಲಸವನ್ನು ಚೆನ್ನಾಗಿಯೇ ಮಾಡಿದ್ದಾರೆ. ಚಿತ್ರಕಥೆ ನಿರೂಪಣೆ, ಸಂಭಾಷಣೆ ಮುಂತಾದ ಪ್ರಮುಖ ವಿಭಾಗಗಲ್ಲಿ ವೀರೇಂದ್ರ ಬಾಬು ಅವರ ಪ್ರಯತ್ನಕ್ಕೆ ಬೆನ್ನು ತಟ್ಟಲೇಬೇಕು. ಫಸಲು ಹೇಗೆ ಬರುತ್ತದೋ ಕಾದು ನೋಡಬೇಕು.
ಕಲೆ ವಿಭಾಗದಲ್ಲಿ ಪದವೀಧರನಾಗಿ ಹಳ್ಳಿಯಿಂದ ನಗರಕ್ಕೆ ಬರುತ್ತಾನೆ ಚಿತ್ರದ ನಾಯಕ ವಿಜಯ್ ಕುಮಾರ್ (ವೀರೇಂದ್ರ ಬಾಬು). ತನ್ನ ತಾಯಿಯ (ಉಮಾಶ್ರೀ) ಆದೇಶದಂತೆ ನಗರಕ್ಕೆ ಬರುವ ನಾಯಕ ತನ್ನ ಪ್ರೇಯಸಿ ಕಲ್ಯಾಣಿ (ತಮನ್ನಾ) ಆಸೆಯಂತೆ ಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ವೃತ್ತಿ ಜೀವನದ ಆರಂಭದಲ್ಲಿ ಸ್ವಲ್ಪ ಕಷ್ಟ ಅನುಭವಿಸುವ ನಾಯಕ, ಕಲ್ಯಾಣಿ ತಂದೆಗೆ (ಚರಣ್ ರಾಜ್) ಚಾಲೆಂಜ್ ಮಾಡುತ್ತಾನೆ. ಕಾರಣ, ತನ್ನ ಬದಲಾಗಿ ಫಾರಿನ್ ರಿಟರ್ನ್ ಹುಡುಗನನ್ನು ಕಲ್ಯಾಣಿಗೆ ಮಾಡುವೆ ಮಾಡಲು ನಿರ್ಧರಿಸಿದ್ದಕ್ಕೆ.
ಡಯಟ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಚಿತ್ರವಿಮರ್ಶೆ ಸ್ವಯಂಕೃಷಿ ವೀರೇಂದ್ರ ಬಾಬು ಅಂಬರೀಷ್ movie review swayam krushi veerendra babu ambarish
English summary
Kannada movie Swayam Krushi review. Movie directed, produced by Veerendra Babu. He is also the lead artist along with actress Tamanna, Ambarish. The effort put in by Veerendra Babu to give clean movie has to be appreciated.
Story first published: Thursday, September 1, 2011, 23:22 [IST]
Other articles published on Sep 1, 2011