Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಮರ್ಶೆ : ಭ್ರಷ್ಟ ಸಮಾಜವನ್ನು ಬದಲಾಯಿಸಿದ 'ಆ ಒಂದು ದಿನ'
ಸಿನಿಮಾ : ಆ ಒಂದು ದಿನ
ನಿರ್ದೇಶನ : ಸಂಜಯ್
ನಿರ್ಮಾಣ : ರವೀಂದ್ರ ಗೌಡ
ಸಂಗೀತ: ಶ್ರೀ ಹರ್ಷ
ಛಾಯಾಗ್ರಹಣ: ಬಾಲಗಣೇಶನ್
ಸಂಕಲನ : ಕೆ.ಗಿರೀಶ್ ಕುಮಾರ್
ತಾರಾಗಣ : ಸಿಮ್ರಾನ್, ಡಿ ಬಾದಾಮಿ, ಮಂಜುಳಾ ಬಾದಾಮಿ, ಪ್ರಸನ್ನ, ರಾಜ್ ಬಹದ್ದೂರ್ ಇತರರು.
ಬಿಡುಗಡೆಯ ದಿನ : 2 ಫೆಬ್ರವರಿ
'ಆ ಒಂದು ದಿನ' ಸಿನಿಮಾ ಪ್ರಸ್ತುತ ರಾಜಕೀಯ ವ್ಯವಸ್ತೆ ಬಗ್ಗೆ ಇದೆ. ಸಮಾಜ ಬದಲಾವಣೆ ಆಗಬೇಕು. ಆ ರೀತಿ ಬದಲಾವಣೆ ಆಗುವುದು ಒಬ್ಬ ಪ್ರಜೆಯಿಂದ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಮನರಂಜನೆ ಜೊತೆ ಜೊತೆಗೆ ಗಂಭೀರ ವಿಷಯವನ್ನು ಈ ಚಿತ್ರ ಹೊಂದಿದೆ.
ಒಂದು ಹಳ್ಳಿಯಲ್ಲಿ ಇಡೀ ಸಿನಿಮಾದ ಕಥೆ ನಡೆಯುತ್ತಿದೆ. ಹಳ್ಳಿಯ ಜನರೇ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹೀರೋ ಹೀರೋಯಿನ್ ಅಂತ ಪ್ರತ್ಯೇಕ ಪಾತ್ರಗಳು ಇಲ್ಲ. ಎಲ್ಲ ಪಾತ್ರಗಳು ಕೂಡ ಪ್ರಮುಖವಾಗಿದೆ. ಊರಿನ ಗೌಡರ ಪಾತ್ರದಿಂದ ಹಿಡಿದು ಎಲ್ಲ ಪಾತ್ರಗಳು ತುಂಬ ನೈಜವಾಗಿ ಮೂಡಿ ಬಂದಿದೆ.
ಮುಖ್ಯವಾಗಿ ಒಂದು ಹಳ್ಳಿಯಲ್ಲಿ ಹೇಗೆ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಓಟಿಗಾಗಿ ರಾಜಕೀಯ ಪಕ್ಷಗಳು ಮಾಡುವ ಮೋಸ, ಅನ್ಯಾಯ, ಗೆದ್ದ ಮೇಲೆ ಎಸಗುವ ಭ್ರಷ್ಟಚಾರ ಎಲ್ಲ ಅಂಶಗಳನ್ನು 'ಆ ಒಂದು ದಿನ' ಸಿನಿಮಾ ಬಳಗೊಂಡಿದೆ.
ಸಿನಿಮಾದ ಮೇಕಿಂಗ್ ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತು. ಹಾಡುಗಳು ಕೇಳುಗರಿಗೆ ಇಷ್ಟ ಆಗುತ್ತದೆ. ವಿಜಯ್ ಪ್ರಕಾಶ್ ಒಂದು ಹಾಡನ್ನು ಹಾಡಿದ್ದು, ದೇಶ ಭಕ್ತಿ ಗೀತೆ ಇದಾಗಿದೆ. ಉಳಿದ ಎರಡು ಐಟಂ ಸಾಂಗ್ ಗಳು ಚಿತ್ರದಲ್ಲಿ ಕಿಕ್ ನೀಡುತ್ತದೆ. ಒಟ್ಟಾರೆ ಹೇಳಬೇಕು ಅಂದರೆ ಒಂದು ಸಂದೇಶದ ಜೊತೆಗೆ ಮನರಂಜನೆ ಹೊಂದಿರುವ ಸಿನಿಮಾ ಆ ಒಂದು ದಿನ.