ವಿಮರ್ಶೆ : ಭ್ರಷ್ಟ ಸಮಾಜವನ್ನು ಬದಲಾಯಿಸಿದ 'ಆ ಒಂದು ದಿನ'
ಸಿನಿಮಾ : ಆ ಒಂದು ದಿನ
ನಿರ್ದೇಶನ : ಸಂಜಯ್
ನಿರ್ಮಾಣ : ರವೀಂದ್ರ ಗೌಡ
ಸಂಗೀತ: ಶ್ರೀ ಹರ್ಷ
ಛಾಯಾಗ್ರಹಣ: ಬಾಲಗಣೇಶನ್
ಸಂಕಲನ : ಕೆ.ಗಿರೀಶ್ ಕುಮಾರ್
ತಾರಾಗಣ : ಸಿಮ್ರಾನ್, ಡಿ ಬಾದಾಮಿ, ಮಂಜುಳಾ ಬಾದಾಮಿ, ಪ್ರಸನ್ನ, ರಾಜ್ ಬಹದ್ದೂರ್ ಇತರರು.
ಬಿಡುಗಡೆಯ ದಿನ : 2 ಫೆಬ್ರವರಿ
'ಆ ಒಂದು ದಿನ' ಸಿನಿಮಾ ಪ್ರಸ್ತುತ ರಾಜಕೀಯ ವ್ಯವಸ್ತೆ ಬಗ್ಗೆ ಇದೆ. ಸಮಾಜ ಬದಲಾವಣೆ ಆಗಬೇಕು. ಆ ರೀತಿ ಬದಲಾವಣೆ ಆಗುವುದು ಒಬ್ಬ ಪ್ರಜೆಯಿಂದ ಎಂದು ಸಿನಿಮಾದಲ್ಲಿ ಹೇಳಲಾಗಿದೆ. ಮನರಂಜನೆ ಜೊತೆ ಜೊತೆಗೆ ಗಂಭೀರ ವಿಷಯವನ್ನು ಈ ಚಿತ್ರ ಹೊಂದಿದೆ.
ಒಂದು ಹಳ್ಳಿಯಲ್ಲಿ ಇಡೀ ಸಿನಿಮಾದ ಕಥೆ ನಡೆಯುತ್ತಿದೆ. ಹಳ್ಳಿಯ ಜನರೇ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹೀರೋ ಹೀರೋಯಿನ್ ಅಂತ ಪ್ರತ್ಯೇಕ ಪಾತ್ರಗಳು ಇಲ್ಲ. ಎಲ್ಲ ಪಾತ್ರಗಳು ಕೂಡ ಪ್ರಮುಖವಾಗಿದೆ. ಊರಿನ ಗೌಡರ ಪಾತ್ರದಿಂದ ಹಿಡಿದು ಎಲ್ಲ ಪಾತ್ರಗಳು ತುಂಬ ನೈಜವಾಗಿ ಮೂಡಿ ಬಂದಿದೆ.

ಮುಖ್ಯವಾಗಿ ಒಂದು ಹಳ್ಳಿಯಲ್ಲಿ ಹೇಗೆ ಚುನಾವಣೆ ನಡೆಯುತ್ತದೆ. ಚುನಾವಣೆಯಲ್ಲಿ ಓಟಿಗಾಗಿ ರಾಜಕೀಯ ಪಕ್ಷಗಳು ಮಾಡುವ ಮೋಸ, ಅನ್ಯಾಯ, ಗೆದ್ದ ಮೇಲೆ ಎಸಗುವ ಭ್ರಷ್ಟಚಾರ ಎಲ್ಲ ಅಂಶಗಳನ್ನು 'ಆ ಒಂದು ದಿನ' ಸಿನಿಮಾ ಬಳಗೊಂಡಿದೆ.
ಸಿನಿಮಾದ ಮೇಕಿಂಗ್ ಇನ್ನಷ್ಟು ಚೆನ್ನಾಗಿ ಮಾಡಬಹುದಾಗಿತ್ತು. ಹಾಡುಗಳು ಕೇಳುಗರಿಗೆ ಇಷ್ಟ ಆಗುತ್ತದೆ. ವಿಜಯ್ ಪ್ರಕಾಶ್ ಒಂದು ಹಾಡನ್ನು ಹಾಡಿದ್ದು, ದೇಶ ಭಕ್ತಿ ಗೀತೆ ಇದಾಗಿದೆ. ಉಳಿದ ಎರಡು ಐಟಂ ಸಾಂಗ್ ಗಳು ಚಿತ್ರದಲ್ಲಿ ಕಿಕ್ ನೀಡುತ್ತದೆ. ಒಟ್ಟಾರೆ ಹೇಳಬೇಕು ಅಂದರೆ ಒಂದು ಸಂದೇಶದ ಜೊತೆಗೆ ಮನರಂಜನೆ ಹೊಂದಿರುವ ಸಿನಿಮಾ ಆ ಒಂದು ದಿನ.


Click it and Unblock the Notifications











