Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲಿಘರ್: ಸಲಿಂಗಿ, ಸಮಾಜ, ಸಂವೇದನಾ ಮನೋಜ್ಞ ಚಿತ್ರ
ಮಾನವ ಹಕ್ಕುಗಳು, ಸಲಿಂಗ ಕಾಮಿಗಳು ಎಂಬ ವಿಷಯ ಬಂದರೆ ಮೂಗು ಮುರಿಯುವವರೇ ಅಧಿಕ. ಇಂಥ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಸತ್ಯಘಟನೆಗಳನ್ನು ಆಧಾರಿಸಿದ ಚಿತ್ರವನ್ನು ನಿರ್ದೇಶನ ಹನ್ಸಲ್ ಮೆಹ್ತಾ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ.
ಮನೋಜ್ ಬಾಜಪೇಯಿ ಹಾಗೂ ರಾಜ್ ಕುಮಾರ್ ರಾವ್ ಅವರ ಪ್ರತಿಭೆಗೆ ಸವಾಲೆಸೆಯುವಂಥ ಪಾತ್ರಗಳು ಇಲ್ಲಿವೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]
ಭಾರತೀಯ ನೀತಿ ಸಂಹಿತೆ ಸೆಕ್ಷನ್ 377 ಬಗ್ಗೆ ದೆಹಲಿ ಕೋರ್ಟ್ ಹಾಗೂ ನಂತರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಸಮಾಜದಲ್ಲಿ ಇಂಥದ್ದೊಂದು ಸಂಬಂಧ, ಬಾಂಧವ್ಯ, ಬೆಸುಗೆ, ಸಲುಗೆ ಹೇಗೆ ಹಾಸುಹೊಕ್ಕಬಹುದು ಎಂಬುದನ್ನು ಸರಳವಾಗಿ ತೋರಿಸಲಾಗಿದೆ.
ಅಸಲಿಗೆ ಇದು ಅಲಿಘರ್ ವಿಶ್ವ ವಿದ್ಯಾಲಯದ ಮರಾಠಿ ಪ್ರೊಫೆಸರ್ ಹಾಗೂ ಕ್ಲಾಸಿಕಲ್ ಮಾರ್ಡನ್ ಇಂಡಿಯನ್ ಲಾಂಗ್ವೆಜ್ ಫ್ಯಾಕಲ್ಟಿ ಡಾ. ಎಸ್.ಆರ್ ಸಿರಾಸ್ ಅವರನ್ನು ನೈತಿಕ ಹೊಣೆ ಹೊತ್ತು ವಿದ್ಯಾಸಂಸ್ಥೆ ತೊರೆದಿದ್ದರು.
ಏನಿದು ಘಟನೆ?: ಪ್ರೊಫೆಸರ್ ಅವರ ಖಾಸಗಿತನ ಬಹಿರಂಗವಾಗಿತ್ತು. ದುಷ್ಕರ್ಮಿಗಳು ಒಮ್ಮೆ ಪ್ರೊಫೆಸರ್ ಮನೆಗೆ ನುಗ್ಗಿದ್ದರು. ಪ್ರೊಫಸರ್ ಅವರು ರಿಕ್ಷಾವಾಲನೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ದೃಶ್ಯ ಸೆರೆ ಹಿಡಿದು ಬಹಿರಂಗ ಪಡಿಸಿದ್ದರು. ಚಿತ್ರದಲ್ಲಿ ಪ್ರೊ. ಸಿರಾಸ್ ಪಾತ್ರದಲ್ಲಿ ಮನೋಜ್ ಮನೋಜ್ಞ ಅಭಿನಯ ನೀಡಿದ್ದಾರೆ. ಆಶೀಶ್ ವಿದ್ಯಾರ್ಥಿ ಅವರು ಸಿರಾಸ್ ಪಾತ್ರವನ್ನು ಸಮರ್ಥಿಸಿಕೊಳ್ಳುವ ವಕೀಲನಾಗಿ ಕಾಣಿಸಿಕೊಂಡಿದ್ದಾರೆ.
ಕರಣ್ ಕುಲಕರ್ಣಿ ಅವರ ಹಿನ್ನಲೆ ಸಂಗೀತ ಹಾಗೂ ಸತ್ಯ ರಾಯ್ ನಾಗ್ಪಾಲ್ ಅವರ ಕೆಮೆರಾ ವರ್ಕ್ ಚಿತ್ರಕ್ಕೆ ಹೊಸ ಮೆರಗು ನೀಡಿದೆ. ಸೆನ್ಸಾರ್ ದೃಷ್ಟಿಯಿಂದ ಸಂಕಲನಕಾರ ಅಪೂರ್ವ ಅಸ್ರಾಣಿ ಅವರು ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಯಾಡಿಸಿದ್ದಾರೆ. ಒಟ್ಟಾರೆ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ ಎಂದು ವಿಮರ್ಶಕರು ಷರಾ ಬರೆದಿದ್ದಾರೆ.