Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಚ್ಚ ಹಸಿರಿನ ಕ್ಯಾನ್ವಾಸ್ ಒಳಗೆ ಬೆಂಕಿಯ ನರ್ತನ
ಬೆಂಗಳೂರು ಚಲನಚಿತ್ರೋತ್ಸವದ ಎರಡನೇಯ ದಿನ ಪ್ರದರ್ಶಿಸಲಾದ ಸ್ಪ್ಯಾನಿಶ್ ಚಿತ್ರ 'ಫೈರ್ ವಿಲ್ ಕಂ' (ಮೂಲ ಹೆಸರು 'ಓ ಕ್ಯು ಆರ್ಡೆ') ದೃಶ್ಯ, ಸಂಗೀತ ಸುಂದರತೆ ಮಾತ್ರ ಹೊಂದಿರುವ ಪೇಲವ ಚಿತ್ರ.
ಚಿತ್ರದ ಪ್ರಧಾನ ಪಾತ್ರ ಅಮಾಡೋರ್ ಕಾಡಿಗೆ ಬೆಂಕಿ ಇಟ್ಟ ಆರೋಪದಲ್ಲಿ ಜೈಲು ಅನುಭವಿಸಿದ್ದಾನೆ. ಪ್ರಕೃತಿಯ ಮಡಿಲಲ್ಲಿನ ಹಳ್ಳಿಗೆ ವಾಪಸ್ಸಾಗಿ, ತನ್ನ ತಾಯಿಯೊಂದಿಗೆ ಹಳ್ಳಿಯಲ್ಲಿ ಜೀವಿಸಲು ಪ್ರಾರಂಭಿಸುತ್ತಾನೆ. ಆಗಲೇ ಹಳ್ಳಿ ಪಕ್ಕದ ಕಾಡಿಗೆ ಬೆಂಕಿ ಬೀಳುತ್ತದೆ, ಬೆಂಕಿ ಇಟ್ಟವನು ಅಮಾಡೋರ್ ಎಂದು ಹಳ್ಳಿಗರು ಆರೋಪಿಸುತ್ತಾರೆ, ಆರೋಪದ ಬಗ್ಗೆ ಒಂದೂ ಮಾತನಾಡದೆ ಹಳ್ಳಿಗರಿಗೆ ಬೆನ್ನುತಿರುಗಿಸಿ ಹೊರಟುಹೋಗುತ್ತಾನೆ ಅಮಾಡೋರ್.
ಸರಳ ಕತೆಯನ್ನು ಸುಮಾರು ಎರಡು ಗಂಟೆಗಳ ಕಾಲ ಎಳೆದು ಹೇಳಿದ್ದಾರೆ ನಿರ್ದೇಶಕ ಓಲಿವರ್ ಲ್ಯಾಕ್ಸೆ. ಬಹು ದೀರ್ಘ ದೃಶ್ಯಗಳು ನೋಡುಗರಿಗೆ ಆರಂಭದಲ್ಲಿ ಕುತೂಹಲ ಕೆರಳಿಸುತ್ತವೆಯಾದರೂ ಚಿತ್ರ ಸಾಗಿದಂತೆ ಆಕಳಿಕೆಯನ್ನೂ ತರಿಸುತ್ತದೆ.
ಚಿತ್ರದ ಧನಾತ್ಮಕ ಅಂಶವೆಂದರೆ ಕ್ಯಾಮೆರಾ ಕೈಚಳಕ, ಕ್ಯಾಮೆರಾ ಕಟ್ಟಿಕೊಟ್ಟಿರುವ ಹಚ್ಚಹಸಿರಿನ ದೃಶ್ಯಗಳು ಕಣ್ಣಿಗೆ ತಣ್ಣನೆಯ ಅನುಭೂತಿ ನೀಡುತ್ತದೆ. ಮಳೆಗಾಲದ ಮಲೆನಾಡಿನಂತೆ ಮೊದಲರ್ಧ ಚಿತ್ರ ಕಾಣುತ್ತದೆ. ಆ ನಂತರದ್ದು ಕಾಡ್ಗಿಚ್ಚಿನ ರುದ್ರನರ್ತನ.
ಹಸಿರು ಮಲೆಗಳ ನಡುವಿನ ಹಳ್ಳಿಯನ್ನು, ಮಳೆಯನ್ನು ಸುಂದರವಾಗಿ ಕಟ್ಟಿಕೊಟ್ಟಿರುವ ಕ್ಯಾಮೆರಾ ತಂತ್ರಜ್ಞ, ಕಾಡ್ಗಿಚ್ಚಿನ ಭೀಕರತೆಯನ್ನೂ ಅಂದವಾಗಿಯೇ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ. ಬಹುತೇಕ ಮೌನವಾಗಿಯೇ ಸಾಗುವ ಚಿತ್ರದಲ್ಲಿ ಮೌನ ಉಂಟುಮಾಡುವ ಬೇಸರದ ಭಾವವನ್ನು ಹಿನ್ನೆಲೆ ಸಂಗೀತ ಅಲ್ಪಮಟ್ಟಿಗೆ ಹೋಗಲಾಡಿಸುತ್ತದೆ.