Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?
Recommended Video
Kurukshetra Movie Twitter Review :' ಕುರುಕ್ಷೇತ್ರ' ಸಿನಿಮಾಗಾಗಿ ಸುಮಾರು ಎರಡು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಆ ಅದ್ಭುತ ಕ್ಷಣ ಬಂದಿದೆ. ಮಹಾಭಾರತದ ಕಥೆ, 3 ಡಿ ಎಫೆಕ್ಟ್, ದರ್ಶನ್ 50ನೇ ಸಿನಿಮಾ, ಬಹುದೊಡ್ಡ ತಾರಾಬಳಗ ಹೀಗೆ ಸಾಕಷ್ಟು ವಿಶೇಷತೆಗಳಿಂದ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ.
ಮದ್ಯ ರಾತ್ರಿಯಿಂದನೆ ಕುರುಕ್ಷೇತ್ರ ಪ್ರದರ್ಶನವಾಗುತ್ತಿತ್ತು ಅಭಿಮಾನಿಗಳು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೆ ಚಿತ್ರದ ನೋಡಿದ ಒಂದಿಷ್ಟು ಮಂದಿ ಹೇಗಿದೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಳ್ಳುತ್ತಿದ್ದಾರೆ.
ಮಧ್ಯ ರಾತ್ರಿಯಿಂದನೇ ಶುರು 'ಕುರುಕ್ಷೇತ್ರ' ಅಬ್ಬರ: ಚಿತ್ರ ನೋಡಿದ ಅಭಿಮಾನಿಗಳು ಫುಲ್ ಖುಷ್
ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದವರು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕುರುಕ್ಷೇತ್ರ ಐದು ಭಾಷೆಯಲ್ಲಿ ತೆರೆಗೆ ಬರಲು ಸಿದ್ಧವಾಗಿತ್ತು. ಆದ್ರೀಗ ತೆಲುಗು ಮತ್ತು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಆದ್ರೆ ಇನ್ನು ಉಳಿದ ಮೂರು ಭಾಷೆಯ ಕುರುಕ್ಷೇತ್ರ ಸಧ್ಯದಲ್ಲೇ ತೆರೆಗೆ ಬರಲಿದೆ. ಈಗ ರಿಲೀಸ್ ಆಗಿರುವ ಕುರುಕ್ಷೇತ್ರದ ಬಗ್ಗೆ ಯಾರೆಲ್ಲ ಏನು ಹೇಳಿದ್ದಾರೆ ಎಂದು ಮುಂದೆ ಓದಿ.
ಪ್ರತಿಯೊಬ್ಬರು ನೋಡಲೆಬೇಕಾದ ಸಿನಿಮಾ
"ಪ್ರತಿಯೊಬ್ಬರ ಅಭಿನಯ ಅದ್ಭುತವಾಗಿದೆ. ಇದು ಕೇವಲ ಸಿನಿಮಾ ಅವಲ್ಲ ಇದೊಂದು ಮಹಾಭಾರತದ ಅನುಭವ. ಪ್ರತಿಯೊಬ್ಬರು ನೋಡಲೆ ಬೇಕಾದ ಸಿನಿಮಾ. ದರ್ಶನ್ ಅವರ ಮೊದಲ ನೂರು ಕೋಟಿ ಗಳಿಸಿದ ಸಿನಿಮಾ ಆಗಲಿದೆ. ನೂರು ಕೋಟಿ ಗಳಿಸಿದ ಸ್ಯಾಂಡಲ್ ವುಡ್ ನ ಎರಡನೆ ಸಿನಿಮಾ ಕುರುಕ್ಷೇತ್ರ ಆಗಲಿದೆ" ಎಂದು ಕೀರ್ತಿ ಎನ್ ಬರೆದುಕೊಂಡಿದ್ದಾರೆ.
ಮೆಜೆಸ್ಟಿಕ್ ನಲ್ಲೇ ಎರಡು ಚಿತ್ರಮಂದಿರಲ್ಲಿ 'ಕುರುಕ್ಷೇತ್ರ' ರಿಲೀಸ್
ಭರತ ಭೂಮಿಯ ಹೆಮ್ಮೆಯ ಮಹಾಕಾವ್ಯ
ಮುನಿರತ್ನ ಕುರುಕ್ಷೇತ್ರ ನೋಡುತ್ತಿದ್ದೀನಿ. 3ಡಿಯಲ್ಲಿ ನೋಡಿದ್ರೆ ಎದೆಮೇಲೆ ಓಡಾಡಿದಂಗೆ ಆಗಿತ್ತೆ. ನೀವು ಯಾರ್ ಪ್ಯಾನ್ಸ್ ಆದ್ರು ಆಗಿ, ಭರತ ಭೂಮಿಯ ಹೆಮ್ಮೆಯ ಮಹಾಕಾವ್ಯ. ಎಲ್ಲರೂ ನೋಡಿ. ಮತ್ತೆ ಇಂತ ಪೌರಾಣಿಕ ಸಿನಿಮಾ ಬರೋದು ಡೌಟು" ಎಂದು ನಟ ಪ್ರಥಮ್ ಹೇಳಿದ್ದಾರೆ.
ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ
ಒನ್ ಮ್ಯಾನ್ ಆರ್ಮಿ ದರ್ಶನ್ ತೂಗುದೀಪ ಶ್ರೀನಿವಾಸ್ ಅಣ್ಣ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರದ ತುಂಬ ಅವರೆ ಅಬ್ಬರಿಸಿದ್ದಾರೆ. ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ. ಅರ್ಜುನ್ ಸರ್ಜಾ ಅಭಿನಯ ಅತ್ತ್ಯುತ್ತಮವಾಗಿದೆ.
'ಕುರುಕ್ಷೇತ್ರ' ಮಿಡ್ ನೈಟ್ ಶೋ, ಮಾರ್ನಿಂಗ್ ಶೋ ಎಲ್ಲೆಲ್ಲಿದೆ?
ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ
"ಪ್ರತಿಯೊಬ್ಬ ಕನ್ನಡಿಗನು ಮಹಾಭಾರತ ಮಹಾಕಾವ್ಯವನ್ನು ತಪ್ಪದೆ ನೋಡಿ. ಅದ್ಭುತವಾಗಿದೆ. ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ದರ್ಶನ್ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. ತಾಂತ್ರಿಕವಾಗಿಯು ಚಿತ್ರ ಉತ್ತಮವಾಗಿದೆ. ಖಂಡಿತವಾಗಿಯು ಈ ಸಿನಿಮಾ ಕನ್ನಡ ಚಿತ್ರರಂಗದ ಮತ್ತೊಂದು ಸೂಪರ್ ಹಿಟ್ ಸಿನಿಮಾವಾಗಲಿದೆ. ಕುಟುಂಬದ ಜೊತೆಗೆ ಸಿನಿಮಾ ನೋಡಿ" ಮಯೂರ್