Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾನ್ 'ಚಕ್ರವರ್ತಿ' ಬಗ್ಗೆ ಸಿನಿಮಾ ವಿಮರ್ಶಕರು ಏನಂದ್ರು ನೋಡಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಚಕ್ರವರ್ತಿ' ಸಿನಿಮಾ ನಿನ್ನೆ (ಏಪ್ರಿಲ್ 14) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದೆ.
ಭೂಗತ ಲೋಕದ ಕಥೆಯೊಳಗೆ ದೇಶ ಪ್ರೇಮವನ್ನ ಹುರಿಧುಂಬಿಸಿರುವ 'ಚಕ್ರವರ್ತಿ'ಗೆ ಅಭಿಮಾನಿಗಳು ಉಘೇ ಎಂದಿದ್ದಾರೆ. ಆದ್ರೆ, ವಿಮರ್ಶಕರು 'ಚಕ್ರವರ್ತಿ'ಯನ್ನ ಒಪ್ಪಿಕೊಂಡ್ರಾ? ದರ್ಶನ್ ಅವರು ಕ್ಲಾಸ್ ಅಭಿನಯಕ್ಕೆ ಎಷ್ಟು ಮಾರ್ಕ್ಸ್ ಕೊಟ್ರು? ಒಟ್ಟಾರೆ 'ಚಕ್ರವರ್ತಿ'ಯ ಬಗ್ಗೆ ಏನಂದ್ರು?['ಚಕ್ರವರ್ತಿ'ಗೆ ರಾಜ್ಯಾದ್ಯಂತ ಸಿಕ್ತು ಭರ್ಜರಿ ಓಪನಿಂಗ್]
ಇಲ್ಲಿದೆ ನೋಡಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಚಕ್ರವರ್ತಿಯ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ..
'ಅಂಡರ್ ವರ್ಲ್ಡ್'ನಲ್ಲಿದೆ ಚಕ್ರವರ್ತಿಯ ದರ್ಬಾರ್'- ವಿಜಯ ಕರ್ನಾಟಕ
'ಭೂಗತ ಜಗತ್ತಿನ ಕತೆಯ ಜೊತೆಗೆ ದೇಶಪ್ರೇಮದ ಸಂದೇಶ ಹೊಂದಿರುವ ಚಿತ್ರ ಚಕ್ರವರ್ತಿ. ಅಂಡರ್ವರ್ಲ್ಡ್ ಡಾನ್ ಪಾತ್ರದಲ್ಲಿ ದರ್ಶನ್ ಮಿಂಚಿದ್ದು, ಮೂರು ಗೆಟಪ್ ಗೂ ಫರ್ಫೆಕ್ಟ್ ಮ್ಯಾಚ್ ಆಗಿದ್ದಾರೆ. ಅವರ ಸ್ಟೈಲ್, ಡೈಲಾಗ್ ಡಿಲೆವರಿ ಎಲ್ಲವೂ ಬದಲಾಗಿದೆ. ಡಾನ್ ಮಹಾರಾಜನ ಪಾತ್ರವನ್ನು ನಿರ್ವಹಿಸಿರುವ ದಿನಕರ್ ತೂಗುದೀಪ ಕೂಡ ಇಷ್ಟವಾಗುತ್ತಾರೆ. ನಾಯಕಿ ದೀಪಾ ಸನ್ನಿಧಿಯ ಪಾತ್ರಕ್ಕೆ ಹೆಚ್ಚಿಗೇನೂ ಕೆಲಸವಿಲ್ಲ. ಪೊಲೀಸ್ ಆಫೀಸರ್ ಪಾತ್ರಕ್ಕೆ ಆದಿತ್ಯ ಹೇಳಿಮಾಡಿಸಿದಂತಿದೆ. ಎಂಬತ್ತರ ದಶಕದ ಕತೆಯಾಗಿದ್ದರಿಂದ ಆ ಕಾಲವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕಾಸ್ಟ್ಯೂಮ್, ಲೊಕೇಶನ್, ಕಾರು ಹೀಗೆ ಎಲ್ಲವನ್ನೂ ಕಾಲಕ್ಕೆ ತಕ್ಕಂತೆ ಜೋಡಿಸಿದ್ದಾರೆ' - ವಿಜಯ ಕರ್ನಾಟಕ [ಚಕ್ರವರ್ತಿ ಮೊದಲ ಪ್ರದರ್ಶನ, ಅಭಿಮಾನಿಗಳ ವಿಮರ್ಶೆ ಸಂಭ್ರಮ]
'ಭೂಗತಲೋಕದಲ್ಲಿ ದೇಶಭಕ್ತಿಯ ಜಪ' - ವಿಜಯವಾಣಿ
'80ರ ದಶಕದಲ್ಲಿ ಬೆಂಗಳೂರಿನಲ್ಲಿ ಬೇರೂರಿದ್ದ ರಿಯಲ್ ರೌಡಿಸಂನ ಛಾಯೆ ಕಥೆಯಲ್ಲಿ ಕಾಣಿಸುತ್ತದೆ. ಮೈಂಡ್ಗೇಮ್ ಸಿನಿಮಾಗಳಿಗಿರಬೇಕಾದ ವೇಗ ‘ಚಕ್ರವರ್ತಿ'ಗೂ ಸಿಕ್ಕಿಬಿಟ್ಟಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಮೂರು ಗೆಟಪ್ಗಳಲ್ಲಿ ಮಿಂಚಿರುವ ದರ್ಶನ್, ಅಭಿಮಾನಿಗಳನ್ನು ರಂಜಿಸುತ್ತಾರೆ. ಆದಿತ್ಯ, ದೀಪಾ ಸನ್ನಿಧಿ, ಸೃಜನ್, ಶರತ್ ಲೋಹಿತಾಶ್ವ ಅಭಿನಯದಲ್ಲಿ ಅಚ್ಚುಕಟ್ಟು. ಮೊದಲ ಬಾರಿಗೆ ಖಳನ ದಿರಿಸು ತೊಟ್ಟಿರುವ ದಿನಕರ್, ಇನ್ನೂ ಮಾಗಬೇಕು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ‘ಒಂದು ಮಳೆಬಿಲ್ಲು..' ಹಾಡು ನೆನಪಿನಲ್ಲುಳಿದರೆ, ಮಿಕ್ಕಿದವು ಆ ಕ್ಷಣಕ್ಕೆ ಮಾತ್ರ ಕಿಕ್ ನೀಡುತ್ತವೆ' - ವಿಜಯವಾಣಿ [ವಿಮರ್ಶೆ: ಭೂಗತ ಲೋಕಕ್ಕೆ ದೇಶಪ್ರೇಮದ ಪಾಠ ಹೇಳುವ 'ಚಕ್ರವರ್ತಿ']
ಅಭಿಮಾನಿಗಳಿಗೂ ಅರೆಕಾಸಿನ ಮಜ್ಜಿಗೆ' - ಪ್ರಜಾವಾಣಿ
'ಒಂದು ಕಮರ್ಷಿಯಲ್ ಸಿನಿಮಾದ ಆರಂಭದಲ್ಲಿ ಜನರನ್ನು ಸೆಳೆಯಲು ಇರಬೇಕು ಎನ್ನಲಾಗುವ ಎಲ್ಲ ಅಂಶಗಳೂ ‘ಚಕ್ರವರ್ತಿ'ಯಲ್ಲಿವೆ. ಆದ್ರೆ, ಅಭಿಮಾನಿಗಳ ಹೊಟ್ಟೆಗೂ ಅರೆಕಾಸಿನ ಮಜ್ಜಿಗೆಯನ್ನಷ್ಟೇ ಹನಿಸಲು ಶಕ್ತರಾಗಿದ್ದಾರೆ ನಿರ್ದೇಶಕ ಚಿಂತನ್. ದಿನಕರ್ ತೂಗುದೀಪ ಸಿನಿಮಾದೊಳಗೆ ಮಾತ್ರವಲ್ಲ, ಸಿನಿಮಾಕ್ಕೂ ಅವರು ನಿಜವಾದ ವಿಲನ್. ದರ್ಶನ್ ತಮ್ಮ ಎಂದಿನ ಲಯವನ್ನು ಮೀರದೇ ನಟಿಸಿದ್ದಾರೆ. ದೀಪಾ ಸನ್ನಿಧಿ ದ್ವಿತೀಯಾರ್ಧದಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಸಿನಿಮಾದಲ್ಲಿ ಹಾಸ್ಯವಿಲ್ಲ. ಆದರೆ ಹಲವು ಗಂಭೀರ ದೃಶ್ಯಗಳು ಹಾಸ್ಯಾಸ್ಪದವಾಗಿ ಆ ಕೊರತೆಯನ್ನು ಕೊಂಚಮಟ್ಟಿಗೆ ಕಮ್ಮಿ ಮಾಡುತ್ತವೆ. ಉಳಿದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರ' - ಪ್ರಜಾವಾಣಿ
'ಭೂಗತ ದೊರೆಯ ಸಿದ್ದಾಂತ ಮತ್ತು ಸಾಮಾಜಿಕ ಚಿಂತನ' - ಕನ್ನಡ ಪ್ರಭ
'ಚಕ್ರವರ್ತಿ ಕಥೆ ಹೊಸತೇನಲ್ಲ. 80ರ ದಶಕದ ಕಥೆಗಳು ಹಲವಾರು ಬಂದಿವೆ. ದರ್ಶನ್ ಅವರು 50ನೇ ಚಿತ್ರದ ಸಮೀಪದಲ್ಲಿರುವ ಹೊಸ ರಿಸ್ಕ್ ತೆಗೆದುಕೊಂಡಿದ್ದಾರೆ. ಯಾವುದೇ ಅಬ್ಬರವಿಲ್ಲದ ಮುಗ್ದ ಹುಡುಗನಂತೆ ಪಾತ್ರ ನಿರ್ವವಹಿಸಿದ್ದಾರೆ. ಚಿತ್ರಕಥೆಯಲ್ಲಿ ಗೊಂದಲಕ್ಕೊಳಗಾಗಿರುವಂತಿರುವ ನಿರ್ದೇಶಕ ಯಾವುದನ್ನ ಪೂರ್ತಿ ಮಾಡಲಿಲ್ಲ. ಕಲಾವಿದರು ಪಾತ್ರಗಳನ್ನ ಉತ್ತಮವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ವೇಗ ಕಮ್ಮಿ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಹೊಡೆದಾಟಗಳಲ್ಲಿ ಖದರ್ ಇಲ್ಲ'' - ಕನ್ನಡ ಪ್ರಭ
Chakravarthy Review: Times of india
''Darshan looks like he has given his all for the film, what with sporting multiple looks and dedicating many days to live his role as Chakravarthy. Sadly, his effort seems futile at times, because of the amateurish narrative. if you're the sort who wants a treat of masala moments on screen, this could be worth your visit to the screens. '' -Times of india