Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹತ್ತು ಕನ್ನಡ ಸಿನೆಮಾಗಳನ್ನು ಒಟ್ಟಿಗೆ ನೋಡುವ ಆಸೆಯಿದ್ದರೆ ಕಿಲಾಡಿ ನೋಡಿ ಅನ್ನೋದು ಈ ಚಿತ್ರದ ಬಗ್ಗೆ ವನ್ ಲೈನರ್ ವಿಮರ್ಶೆ ಆಗಬಲ್ಲುದು.
* ಸತ್ಯನಾರಾಯಣ
ಜಗ್ಗೇಶ್ ಸಿನಿಮಾಗಳಲ್ಲಿ ಇರುವ ಏಕೈಕ ಮನರಂಜನೆ ಎಂದರೆ ಅವರ ಮ್ಯಾನರಿಸಂ ಹಾಗೂ ಡೈಲಾಗ್ ಡೆಲಿವರಿ.
ಈ ಚಿತ್ರದಲ್ಲೂ ಅದಕ್ಕೆ ಮೋಸವಿಲ್ಲ. ಹಾಗೇ, ಅವರು ಸಾಮಾನ್ಯವಾಗಿ ಮಾಡುವ ಎಲ್ಲ ಗಿಮಿಕ್ಕುಗಳೂ ಇಲ್ಲಿವೆ. ಇಬ್ಬರು ನಾಯಕಿಯರನ್ನು ಜಗ್ಗೇಶ್ ತಮ್ಮ ಜತೆಗೆ ಹಾಕಿಕೊಂಡಿದ್ದಾರೆ. ಅವರಿಬ್ಬರಿಗೂ ಜಗ್ಗೇಶ್ ಜೊತೆ ಕುಣಿಯುವುದನ್ನು ಬಿಟ್ಟರೆ ಬೇರೆ ಕೆಲಸ ಇದ್ದಂತಿಲ್ಲ.
ಹಾಡು ಲೊಕೇಷನ್, ಕತೆ, ಚಿತ್ರಕತೆ ಎಲ್ಲವೂ ಸಾಮಾನ್ಯ ಮಟ್ಟದಲ್ಲಿರುವ ಈ ಚಿತ್ರದ ನಿರ್ದೇಶಕ ಗಡಿ ಬಿಡಿ ಸಾಯಿ ಪ್ರಕಾಶ್. ಕೆಲವು ವರ್ಷಗಳ ಹಿಂದೆ ಹತ್ತು ದಿನಕ್ಕೊಂದು ಚಿತ್ರ ಮಾಡಿಕೊಡುತ್ತಿದ್ದ ಫಾಸ್ಟ್ ಫುಡ್ ನಿರ್ದೇಶಕ ಸಾಯಿ ಪ್ರಕಾಶ್ , ಇತ್ತೀಚೆಗೆ ನಾಗದೇವತೆ ಸಿನಿಮಾ ಮಾಡಿ ಗೆದ್ದಿದ್ದರು.
ಅರ್ಚನಾ, ಮಣಿ ಚಂದನಾ ಇಬ್ಬರಿಗೂ ಅಭಿನಯಕ್ಕೆ ಅವಕಾಶವಿಲ್ಲ. ಬದಲಾಗಿ ಅವರಿಬ್ಬರೂ ಮೈದೋರುವುದಕ್ಕಷ್ಟೇ ಮೀಸಲಾಗಿದ್ದಾರೆ.
ಬಹುಶಃ ಜಗ್ಗೇಶ್ ಅಭಿನಯದ ಕೊನೆಯ ಚಿತ್ರ ಇದಾಗಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಎರಡು ತಿಂಗಳ ಚಿತ್ರ ರಹಿತ ದಿನಗಳ ನಡುವೆ ಬಿಡುಗಡೆಯಾಗಿರುವ ಕಿಲಾಡಿ ಗೆಲ್ಲದ ಮೇಲೆ ತುಂಬುಮಾಸದಲ್ಲಿ ಬಂದ ಚಿತ್ರಗಳನ್ನು ಯಾರಾದರೂ ನೋಡಬಹುದೇ?
ಅಂದ ಹಾಗೆ ಈ ಚಿತ್ರದ ಹಂಚಿಕೆಯನ್ನೂ ಸ್ವತಃ ಜಗ್ಗೇಶ್ ಅವರೇ ವಹಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು !
ಚಿತ್ರ : ಕಿಲಾಡಿ
ನಿರ್ಮಾಣ : ಎಸ್. ಶ್ರೀನಿವಾಸ್
ಬ್ಯಾನರ್ : ಸುಶ್ಮಾ ಫಿಲಂಸ್
ನಿರ್ದೇಶನ : ಸಾಯಿ ಪ್ರಕಾಶ್
ಅಭಿನಯ : ಜಗ್ಗೇಶ್, ಅರ್ಚನಾ, ಮಣಿಚಂದನ
ಮುಖಪುಟ / ಸ್ಯಾಂಡಲ್ವುಡ್