Don't Miss!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- News ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್; ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? : ಡಿ ಕೆ ಶಿವಕುಮಾರ್ ಹೇಳಿದ್ದೇನು?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುದ್ದು ಮನಸ್ಸಿಗೆ ಮನಸೋತರಾ ವಿಮರ್ಶಕರು?
ಹೊಸಬರ ಚಿತ್ರವೇ ಆದರೂ, ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡಿರುವ ಸಿನಿಮಾ 'ಮುದ್ದು ಮನಸೇ' ಈ ವಾರ ರಾಜ್ಯಾದಂತ್ಯ ತೆರೆಕಂಡಿದೆ.
ತ್ರಿಕೋನ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ಚಿತ್ರದಲ್ಲಿ ಅರುಣ್ ಗೌಡ, ನಿತ್ಯಾ ರಾಮ್, ಐಶ್ವರ್ಯ ನಾಗ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೋಮ್ಯಾನ್ಸ್ ಜೊತೆ ಆಕ್ಷನ್ ಕೂಡ ಚಿತ್ರದಲ್ಲಿದೆ. [ಚಿತ್ರ ವಿಮರ್ಶೆ: ಮುದ್ದು ಮುದ್ದು ಮನಸುಗಳ 'ಮುದ್ದು ಮನಸೇ']
ನವಿರಾದ ಪ್ರೇಮಕಥೆ ಹೊಂದಿರುವ 'ಮುದ್ದು ಮನಸೇ' ವಿಮರ್ಶಕರಿಗೆ ಇಷ್ಟವಾಯ್ತಾ? ಹೊಸಬರ ಹೊಸ ಪ್ರಯತ್ನಕ್ಕೆ ವಿಮರ್ಶಕರು ಜೈಕಾರ ಹಾಕಿದ್ರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಖ್ಯಾತ ದಿನ ಪತ್ರಿಕೆಗಳು ಪ್ರಕಟಿಸಿರುವ 'ಮುದ್ದು ಮನಸೇ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....
ಹೊಸ ಮನಸು, ಹಳೆ ಮುದ್ದಾಟ - ಪ್ರಜಾವಾಣಿ
‘ಹಣೆ ಬರಹಕ್ಕೆ ಹೊಣೆ ಯಾರು'- ಶುಭಂ ಸ್ಥಾನದಲ್ಲಿ ಹೀಗೊಂದು ಬರಹ ಕಾಣಿಸಿಕೊಳ್ಳುತ್ತದೆ. ಪ್ರೀತಿಯ ವಿಚಾರವಾಗಿ ಮನುಷ್ಯ ಪ್ರಯತ್ನಕ್ಕಿಂತ ವಿಧಿ ಲಿಖಿತದ್ದೇ ಮೇಲುಗೈ ಎಂದು ಚಿತ್ರವನ್ನು ಪೂರ್ಣಗೊಳಿಸುತ್ತಾರೆ ನಿರ್ದೇಶಕ ಅನಂತ್ ಶೈನ್. ಚಿತ್ರಕಥೆಯಲ್ಲಿ ತ್ರಿಕೋನ ಪ್ರೇಮದ ಒದ್ದಾಟವಿದೆ. ಒಬ್ಬ ಹುಡುಗ-ಇಬ್ಬರು ಹುಡುಗಿಯರ ಪ್ರೇಮದ ತಹತಹಿಕೆ-ಹೋರಾಟವಿದೆ. ಪ್ರೀತಿಯನ್ನು ಉಳಿಸಿಕೊಳ್ಳಲು ನಡೆಸುವ ಪ್ರಯತ್ನವಿದೆ. ಸಿನಿಮಾವನ್ನು ದುರಂತ ಪ್ರೇಮಕಥೆಯಾಗಿಸಿರುವ ಕಾರಣ ‘ಹಣೆಬರಹ'ವೇ ನಿರ್ದೇಶಕರಿಗೆ ಮುಖ್ಯವಾಗಿ ಕಂಡಿರಬೇಕು! ‘ಮುದ್ದು ಮನಸೇ' ಹೆಸರಿನಲ್ಲಿಯೇ ಚೆಂದವಿದೆ. ಇದಕ್ಕೊಪ್ಪುವಂತೆ ಒಂದಿಷ್ಟು ಹೊಸತು ಮತ್ತು ಭಿನ್ನ ಅಂಶಗಳನ್ನು ಪ್ರೇಮಕಥೆಗೆ ಹೆಣೆದಿದ್ದರೆ ಚೆಂದಗಾಣುತ್ತಿತ್ತು. - ಡಿ.ಎಂ.ಕುರ್ಕೆ ಪ್ರಶಾಂತ
ಮುದುಡಿದ ಮುದ್ದು ಮನಸ್ಸು - ವಿಜಯ ಕರ್ನಾಟಕ
ಅನಂತ್ ಶೈನ್ ನಿರ್ದೇಶನದ 'ಮುದ್ದುಮನಸೇ' ಚಿತ್ರ ವಿಷಾದವೇ ತುಂಬಿರುವ ಸರಳ ಪ್ರೇಮಕಥೆ ಹೊಂದಿದೆ. ಪ್ರೇಮಕಥೆಗೆ ಅಮ್ಮನ ಸೆಂಟಿಮೆಂಟ್, ಸ್ನೇಹದ ಪೆಪ್ಪರ್ಮೆಂಟ್, ಒಂದೆರಡು ಫೈಟ್, ಚಂದದ ಹಾಡುಗಳು ಜೊತೆಯಾಗಿವೆೆ. ಚಿತ್ರದಲ್ಲಿ ಸಂಭ್ರಮ, ಸಡಗರ, ಲವಲವಿಕೆಗಿಂತ ಹೆಚ್ಚು ವಿಷಾದ, ಚಡಪಡಿಕೆ ತುಂಬಿದೆ. ಕೊನೆಗೆ ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಭಾವ ಮೂಡುತ್ತದೆ. - ಪ್ರವೀಣ್ ಚಂದ್ರ
ಮೌನಮಾತುಗಳ ನಿತ್ಯೋತ್ಸವ, ಪೂರ್ವಿಕಲ್ಯಾಣಿಯ ಪ್ರೇಮೋತ್ಸವ - ಉದಯವಾಣಿ
ಕೆಲ ಚಿತ್ರಗಳಲ್ಲಿರುವಂತೆ ಇಲ್ಲೂ ಇಬ್ಬರು ಹುಡುಗೀರು, ಒಬ್ಬ ಹುಡುಗ, ಅವರ ನಡುವಿನ ಪ್ರೇಮಕಥೆ ಇದೆ. ಆದರೆ, ಆ ಪ್ರೇಮಕಥೆಯನ್ನೇ ಕೊಂಚ ಭಿನ್ನವಾಗಿ ತೋರಿಸಿರುವುದರಿಂದಲೇ ಚಿತ್ರಕ್ಕೆ ಎದುರಾಗಬಹುದಾಗಿದ್ದ ಅಪಾಯವೊಂದು ತಪ್ಪಿ ಹೋಗಿದೆ ಎನ್ನಬಹುದು. ಇದು ಲವ್ವು, ನೋವು, ಸೆಂಟಿಮೆಂಟ್, ಹೊಡೆದಾಟ, ಕುಣಿದಾಟ, ಮೋಸದಾಟ ಎಲ್ಲವನ್ನೂ ಒಳಗೊಂಡ ಪ್ಯಾಕೇಜ್ ಸಿನಿಮಾ ಎನ್ನಲ್ಲಡ್ಡಿಯಿಲ್ಲ. ಚಿತ್ರದ ಮೊದಲರ್ಧ ನಿಧಾನವೆನಿಸುತ್ತೆ. ಫ್ಲ್ಯಾಶ್ಬ್ಯಾಕ್ನಲ್ಲಿ ಕಥೆ ಸಾಗುವುದರಿಂದ ಆ ನಿಧಾನಗತಿಯನ್ನ ಮರೆಸುತ್ತೆ. ದ್ವಿತಿಯಾರ್ಧದಲ್ಲಿರುವ ಹಿಡಿತ ಮೊದಲರ್ಧದಲ್ಲೂ ಇದ್ದಿದ್ದರೆ ಚಿತ್ರಕ್ಕೆ ಮತ್ತಷ್ಟು ಮಾರ್ಕ್ಸ್ ಕೊಡಬಹುದಿತ್ತು. - ವಿಜಯ್ ಭರಮಸಾಗರ
Arun Gowda's debut is far from convincing - DNA
While this is his debut film in Sandalwood (the Kannada film industry), Arun Gowda has put in a lot of effort to prove his mettle in action scenes. Aishwarya Nag looks good. Nithya Ram has to go a long way to establish herself as an actress in this industry. Some of the dialogues, especially those between the two sisters, are good. Two songs, 'Thinthale thinthale' and 'Neev kelabaradu ', are okay. - Y.Maheshwara Reddy